ಸರ್ಕಾರವನ್ನ ನಂಬಿ ಕೂರಬೇಡಿ : ನಿಮ್ಮ ಜೀವ ನಿಮ್ಮ ಹೊಣೆ
ಬೆಂಗಳೂರು : ದೇಶದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಜೋರಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗುತ್ತಲೇ ಇದೆ. ಇದರಿಂದ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಮಸ್ಯೆ ಉಂಟಾಗುತ್ತಿದ್ದು, ಸಾಕಷ್ಟು ಮಂದಿ ಕೊನೆಯುಸಿರೆಳೆಯುತ್ತಿದ್ದಾರೆ. ಈ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗಿದ್ದ ಸರ್ಕಾರಗಳು ಆಮೆಗತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿವೆ. ಸರ್ಕಾರಗಳ ಮಂದಬುದ್ಧಿಯ ಪರಿಣಾಮವೇನೋ ದೇಶದಲ್ಲಿ ಹೆಮ್ಮಾರಿ ಕೊರೊನಾದ ತಾಂಡವ ಜೋರಾಗಿದೆ. ಇಂತಹ ಕ್ಲಷ್ಟ ಪರಿಸ್ಥಿತಿಯಲ್ಲಿ ನಾವು ಮತ ಕೊಟ್ಟು ಗೆಲ್ಲಿಸಿದ ಪಕ್ಷದ ನಾಯಕರಾಗಲಿ, ಸರಕಾರದಿಂದ ನಿಮ್ಮ ಜೀವ ಉಳಿಯ ಬಹುದು ಅಂದುಕೊಂಡರೆ ಅದು ಅಸಾಧ್ಯ. ಕಳೆದ ವರ್ಷ ಕೇಂದ್ರ ಸರಕಾರವೇನೂ ಹಿಂದೂ ಮುಂದು ನೋಡದೆ 21 ದಿನಗಳ ಸಂಪೂರ್ಣ ಲಾಕ್ ಡೌನ್ ಮಾಡಿ ತಡ ನಂತರ 3 ತಿಂಗಳ ವರೆಗೆ ವಿಸ್ತರಣೆ ಮಾಡಿತ್ತು. ಆದುದರಿಂದ ಹೆಚ್ಚಿನ ಸಾವು ನೋವುಗಳನ್ನು ಕಂಡಿಲ್ಲದ ನಮ್ಮ ದೇಶ ಅನೇಕ ಟೀಕೆಗೆ ಗುರಿಯಾಗಿತ್ತು. ಆದರೆ ಕಳೆದ ವರ್ಷದ ಸಾವು ನೋವು ಹೆಚ್ಚಿನ ಇಳಿವಯಸ್ಸಿನವರದಾಗಿತ್ತು. ಆದರೆ ಈ ವರ್ಷ ಕೊರೊನ ಎರಡನೇ ಅಲೆ ತನ್ನ ಆರ್ಭಟವನ್ನು ಯುವ ತರುಣರ ಕಡೆ ಟಾರ್ಗೆಟ್ ಮಾಡಿದ ರೀತಿ ಇದೆ.
ಕೇಂದ್ರ ಸರಕಾರ ಈ ವರ್ಷ ಲಾಕ್ ಡೌನ್ ಹೊರೆಯನ್ನು ಭರಿಸಲಾಗದೇ ಜಾಣತನ ಹೆಜ್ಜೆ ಇಟ್ಟಿದ್ದು, ಆಯಾಯ ರಾಜ್ಯಗಳಿಗೆ ಲಾಕ್ ಡೌನ್ ನಿರ್ಧಾರವನ್ನು ತಕ್ಕ ಮಟ್ಟಿಗೆ ಬಿಟ್ಟಿದೆ. ಕೆಲವು ರಾಜ್ಯದ ಮುಖ್ಯಮಂತ್ರಿಗಳು ಸಂಪೂರ್ಣ ಲಾಕ್ ಡೌನ್ ಹೇರಿದ್ದಾರೆ. ಇನ್ನು ಕೆಲವು ರಾಜ್ಯಗಳು ಮೀನಾ ಮೇಷ ಎಣಿಸುತ್ತಿವೆ.
ಇನ್ನು ಕರ್ನಾಟಕ ರಾಜ್ಯದ ಬಗ್ಗೆ ಹೇಳಬೇಕಾದರೆ ಈ ಇಂತಹ ಲಾಕ್ ಡೌನ್ ಮಾಡದೇ ಇದ್ದರೂ ಉತ್ತಮ ಎನಿಸುತಿದೆ. ಸಂಕಷ್ಟ ಸ್ಥಿತಿಯಲ್ಲಿ ರಾಜ್ಯದ ಪರ ಧ್ವನಿ ಎತ್ತಬೇಕಿದ್ದ ಸಂಸದರು ಇದ್ದು ಇಲ್ಲದಂತೆ ವರ್ತಿಸುತ್ತಿದ್ದಾರೆ. ಅನುದಾನ ಇಲ್ಲ ಅಂತಾ ಶಾಸಕರು ಮನೆ ಸೇರಿದ್ದಾರೆ. ಇನ್ನು ಮಂತ್ರಿಗಳಂತೂ ಇದೆಲ್ಲಾ ಆರೋಗ್ಯ ಇಲಾಖೆಗೆ ಸಂಭಂಧಿಸಿದ್ದು ನಮಗ್ಯಾಕೆ ಎನ್ನುವಂತೆ ಓಡಾಡಿಕೊಂಡು ಇದ್ದಾರೆ.
ಎಲ್ಲರಿಗೂ ತಿಳಿದಂತೆ ತಜ್ಞರು ಹೇಳಿದಂತೆ ಮಾರ್ಚ್ ವೇಳೆಗೆ ಕೊರೊನಾ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಭದ್ರವಾಗಿ ಬೇರೂರಿತ್ತು. ಆಗ ರಾಜ್ಯ ಸರಕಾರ ಚುನಾವಣೆಯಲ್ಲಿ ಗೆಲ್ಲುವ ಯೋಚನೆಯಲ್ಲಿತ್ತೇ ಹೊರತು ಕೊರೊನಾ ಎದುರಿಸುವ ಬಗ್ಗೆ ಆಲೋಚನೆಯನ್ನೇ ಮಾಡಿರಲಿಲ್ಲ. ಯಕಶ್ಚಿತ್ ಮುಂದೆ ಆಗಬಹುದಾ ಪರಿಣಾಮದ ಬಗ್ಗೆ ಯಾವ ಮಂತ್ರಿಗಳು ಮುಂದಾಲೋಚನೆ ಮಾಡಲಿಲ್ಲ.ಕಳೆದ ವರ್ಷ ಅನಾವಶ್ಯಕವಾಗಿ 10 ಸಾವಿರ ಬೆಡ್ ಗಳ ವ್ಯವಸ್ಥೆ ಮಾಡಿ ಯಾವುದೇ ಬಳಕೆ ಮಾಡದೇ ಸರಕಾರದ ದುಡ್ಡು ಪೋಲು ಮಾಡಿದ್ದೆ ಸಾಧನೆ. ಘೋಷಣೆ ಬರಿ ಬಾಯಲ್ಲಿ ಜಾರಿಯಾಯಿತೇ ಹೊರತು ಕಾರ್ಯ ರೂಪಕಾಂತು ಬಂದಿಲ್ಲ.
ಲಕ್ಶ್ಮಣ ರೇಖೆ
ಇದೀಗ ಕೊರೊನ ಆರ್ಭಟ ನಮ್ಮ ಕೈ ಜಾರುತ್ತಿದೆ. ಅಂದು ಸೀತಾ ಮಾತೆಯ ರಕ್ಷಣೆಗೆ ಲಕ್ಷ್ಮಣ ರೇಖೆಯನ್ನು ಎಳೆದ ರೀತಿಯಲ್ಲೇ ಇದೀಗ ಪ್ರತಿ ಕುಟುಂಬದ ಒಬ್ಬ ಸದಸ್ಯ ಸ್ವಯಂ ಪ್ರೇರಿತವಾಗಿ ಮುಂದೆ ಬಂದು ಸದಸ್ಯರಿಗೆ ಬೇಕಾದ ವ್ಯವಸ್ಥೆ ಮಾಡಬೇಕಿದೆ. ಅನವಶ್ಯಕ ಓಡಾಟ ಸಲ್ಲದು . ಪ್ರತಿ ವಾರಕ್ಕೆ ಬೇಕಾದ ಸಾಮಗ್ರಿಗಳಲ್ಲೂ ಒಮ್ಮೆಲೇ ತಂದು ಬಿಡಿ. ಹತ್ತಿರದ ಅಂಗಡಿಯವ, ತರಕಾರಿಯವನ ಪೋನ್ ನಂಬರ್ ಪಡೆದು ತನಗೆ ಬೇಕಾದ ಸಾಮಗ್ರಿಗಳ ಪಟ್ಟಿ ಮಾಡಿ ರೆಡಿ ಮಾಡಲು ಹೇಳಿರಿ, ಸದ್ಯ ಆದರೆ ಅವರಿಂದಲೇ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದರೆ ಉತ್ತಮ.
ಪ್ರತಿ ಸಲ ಮನೆಯಿಂದ ಹೊರಗಡೆ ಹೋಗಿ ಬಂದಕೊಡಲೇ ನೇರವಾಗಿ ಸ್ನಾನ ಗೃಹಕ್ಕೆ ಹೋಗಿ ನಿಮ್ಮ ಬಟ್ಟೆ ಮಾಸ್ಕ್ಗಳನ್ನು ಬಿಸಿ ನೀರಿಗೆ ಹಾಕಿ ಸೋಪ್ ಹಾಕಿ ನೆನಸಲು ಬಿಡಿ. ಸ್ನಾನ ಮಾಡಿಯೇ ಮನೆಯವರೊಂದಿಗೆ ವ್ಯವಹರಿಸಿ. ಆದಷ್ಟು ಮಾಸ್ಕ್ ಮೂಗು ಮತ್ತು ಬಾಯಿಯನ್ನು ಕವರ್ ಮಾಡಲಿ ಮತ್ತು ಡಬಲ್ ಮಾಸ್ಕ ಧರಿಸಿದರೂ ಉತ್ತಮ. ಸಾಮಾಜಿಕ ಅಂತರವಿರಲಿ ಮತ್ತು ತಮ್ಮ ಹತ್ತಿರ ಯಾರಾದರೂ ಬಂದು ಮಾತನಾಡುವ ಪ್ರಯತ್ನ ಮಾಡಿದರೆ ನೇರವಾಗಿ ಹೇಳಿಬಿಡಿ ಮಾತು ಕಹಿ ಆದರೂ ನಿಮ್ಮ ರಕ್ಷಣೆ ಮುಖ್ಯ.
ಮನೆಯಲ್ಲಿ ಕೊರೊನಾದ ಯಾವುದೇ ಲಕ್ಷಣ ಸದಸ್ಯರಲ್ಲಿ ಕಂಡು ಬಂದರೇ ಭಯಪಡದಿರಿ, ಕೂಡಲೇ ಡಾಕ್ಟರ್ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ. ಮತ್ತು ಕೊರೊನ ಸೋಂಕಿತರನ್ನು ಮನೆಯಲ್ಲಿ ಇತರ ಕುಟುಂಬ ಸದಸ್ಯರಿಂದ ದೂರವಿಡಿ, ಆದರೆ ಬೇಕಾದ ಆಹಾರ ಚಿಕಿತ್ಸೆ ಯನ್ನು ಒದಗಿಸಿ. ಅನಿವಾರ್ಯ ಎನಿಸಿದರೆ ಮಾತ್ರ ಹಾಸ್ಪಿಟಲ್ ಅಗತ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಿ, ಸೀತೆಯನ್ನು ಕದ್ದೊಯ್ದ ರಾವಣ ಯಾವ ರೀತಿ ಅಂತರ ಕಾಪಾಡಿದನೋ ಅದೇ ರೀತಿಯ ಅಂತರವಿರಲಿ ಆದರೆ ಕೊರೊನ ಪೀಡಿತರು ನಿಮ್ಮ ಆರೈಕೆಯಲ್ಲೇ ಇರಲಿ, ಅವರ ಆಗುಹೋಗುಗಳ ಬಗ್ಗೆ ನಿಗಾವಿರಲಿ. ದೇಶದ ಪ್ರತಿ ಕುಟುಂಬ ಕೊರೊನಾ ವಾರಿಯರ್ಸ್ ಆಗಿ ಇದು ಸಾಕ್ಷ ಟಿವಿ ವತಿಯಿಂದ ಮನವಿ, ನೀವು ಕೂಡ ಸಾಕ್ಷ ಟಿವಿ ಹೋರಾಟದೊಂದಿಗೆ ಕೈಜೋಡಿಸಿ. ನಿಮ್ಮ 3 ವಾರದ ಹೋರಾಟ ಕೊರೊನಾವನ್ನು ಪೂರ್ಣ ಹತ್ತೊಟ್ಟಿಗೆ ತರಬಹುದು. ಈಗ ನೀವು ಈ ದೇಶದ ರಕ್ಷಕರು..!!










