ಕೂಡಲಸಂಗಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ
ಕೂಡಲಸಂಗಮ : ಇಂದು ವಿಶ್ವಗುರು ಬಸವಣ್ಣನವರ ಜಯಂತಿ ಹಿನ್ನಲೆಯಲ್ಲಿ ಬಸವಣ್ಣನವರ ಐಕ್ಯಭೂಮಿ ಕೂಡಲಸಂಗಮದಲ್ಲಿ ಶ್ವಗುರು ಬಸವಣ್ಣನವರ ಜಯಂತಿಯನ್ನು ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಐಕ್ಯ ಮಂಟಪದಲ್ಲಿ ಅರ್ಥಪೂರ್ಣವಾಗಿ ಆಚರಿಸಿದರು.
ಬಳಿಕ ಇಷ್ಟಲಿಂಗ ಪೂಜೆ, ವಚನ ಪಠಣ ಮಾಡಿ ಹಾಗೂ ಐಕ್ಯಮಂಟಕ್ಕೆ ಪುಷ್ಪನಮನ ಸಲ್ಲಿಸಿ. ಬಸವಣ್ಣನವರು ಕೊಟ್ಟ ಇಷ್ಟಲಿಂಗ ಪೂಜೆ ಮೂಲಕ ಮನಸಿನಲ್ಲಿರುವ ಭಯವನ್ನು.
ಕಾಯಕ ಅನುಷ್ಠಾನದ ಮೂಲಕ ದೈಹಿಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು. ವಚನಗಳು ನಿತ್ಯ ಓದುವುದರ ಮೂಲಕ ಧೈರ್ಯದಿಂದ ಬದುಕಬೇಕು ಎಂದು ಬಸವ ಸಂದೇಶ ನೀಡಿದರು.
ಇದರೊಂದಿಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ , ದೈಹಿಕ ಅಂತರ ಕಾಪಾಡಿಕೊಂಡು ಹಾಗೂ ಕೈ ಶುಚಿತ್ವಗೊಳಿಸಿಕೊಳ್ಳಬೇಕು. ಕೊರೊನಾ ಮುಕ್ತ ಜಗತ್ತನ್ನು ನಿರ್ಮಿಸುವ ಶಕ್ತಿಯನ್ನು ವಿಶ್ವದ ಜನತೆಗೆ ಕರುಣಿಸಲೆಂದು ವಿಶ್ವಗುರು ಬಸವಣ್ಣನವಲ್ಲಿ ಪ್ರಾರ್ಥಿಸಿದರು.










