ದಿವ್ಯಾ ಅರವಿಂದ್ ಮದುವೆ ಯಾವಾಗ…? – ಕೆ.ಪಿ ಅರವಿಂದ್ ಕೊಟ್ಟ ಉತ್ತರ…
ಕೊರೊನಾ ಲಾಕ್ ಡೌನ್ ನಿಂದಾಗಿ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತು ಹೋಗಿದೆ. ಈ ನಡುವೆ ಸ್ಪರ್ಧಿಗಳು ಲೈವ್ ಗೆ ಬಂದು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಬಿಗ್ಬಾಸ್ ಮನೆಯಲ್ಲಿ ಹೆಚ್ಚು ಗಮನ ಸೆಳೆದಿದ್ದ ದಿವ್ಯಾ ಉರುಡುಗ ಹಾಗೂ ಅರವಿಂದ್ ಜೋಡಿಯ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ.. ಬಿಗ್ ಬಾಸ್ ಮನೆಯಲ್ಲಿ ಸದಾ ಒಟ್ಟಾಗಿಯೇ ಪ್ರಣಯ ಪಕ್ಷಗಳಂತೆ ಇರುತ್ತಿದ್ದ ದಿವ್ಯಾ ಅರವಿಂದ್ ಜೋಡಿಯ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಇವರಿಬ್ಬರ ನಡುವಿನ ಕ್ಯೂಟ್ ಕೆಮಿಸಿಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ರು, ಸಾಲದಕ್ಕೆ ಟ್ವಿಟ್ಟರ್ ನಲ್ಲಿ #arvia ಟ್ರೆಂಡ್ ಆಗ್ತಿತ್ತು..
ಇವರಿಬ್ಬರ ನಡುವಿನ ಬಾಂಡಿಗ್ ನೋಡಿದವರಿಗೆ ಇವರಿಬ್ಬರೂ ಲವ್ ಮಾಡ್ತಿರೋದು ಪಕ್ಕಾ ಎನಿಸಿತ್ತು.. ಅದ್ರಲ್ಲೂ ಪ್ರೇಕ್ಷಕರ ಮೋಸ್ಟ್ ಫೇವರೇಟ್ ಸ್ಪರ್ಧಿಯಾಗಿ ಅರವಿಂದ್ ಹೊರಹೊಮ್ಮಿದ್ದು, ಮನೆಯಿಂದ ಆಚೆ ಬಂದ ನಂತರ ಆಗಾಗ ಲೈವ್ ಗೆ ಬರುತ್ತಿರುತ್ತಾರೆ.
ಈ ವೇಳೆ ದಿವ್ಯಾ ಬಗ್ಗೆ ಲೈವ್ ಒಂದರಲ್ಲಿ ಮಾತನಾಡಿರುವ ಅರವಿಂದ್ ದಿವ್ಯಾ ನನಗೆ ಲಕ್ಕಿ ಚಾರ್ಮ್…ಆಕೆ ಜೊತೆಗೆ ನಾನು ಒಂದು ಟಾಸ್ಕ್ ಕೂಡ ಸೋತಿಲ್ಲ. ಒಳ್ಳೆಯ ವ್ಯಕ್ತಿ ಹಾಗೂ ತುಂಬಾನೇ ಪಾಸಿಟಿವ್ ಆಗಿರುತ್ತಾರೆ. ಮನೆಯಲ್ಲಿದ್ದ ಎಲ್ಲಾ ಸ್ಪರ್ಧಿಗಳಿಗೂ ಕಾಂಪಿಟೇಷನ್ ಕೊಡುವ ಹುಡುಗಿ ಈಕೆ. ಇಬ್ಬರ ಸ್ನೇಹ ಹೀಗೆ ಮುಂದುವರಿದುಕೊಂಡು ಹೋಗಬೇಕು ಅಂದುಕೊಂಡಿರುವೆ. ನೋಡೋಣ ಹೇಗೆ ಏನು ಆಗುತ್ತದೆ ಎಂದು…ಮದುವೆ ಆಗೋಕೆ ಸ್ವಲ್ಪ ಟೈಮ್ ಕೊಡಿ ಎಂದಿದ್ದಾರೆ.
ಇನ್ನೂ ಮುಂದಿನ ಪ್ಲಾನಿಂಗ್ಸ್ ಬಗ್ಗೆ ಮಾತನಾಡಿರೋ ಅರವಿಂದ್ ಸಿನಿಮಾ, ಸೀರಿಯಲ್ ಅಥವಾ ವೆಬ್ಸಿರೀಸ್ ಯಾವುದೇ ಅವಕಾಶಗಳು ಸಿಕ್ಕರೂ ಕೂಡ ನಾನು ಬಳಸಿಕೊಳ್ಳಲು ಇಷ್ಟಪಡುತ್ತೇನೆ. ಸದ್ಯ ಗಾಡಿ ಓಡಿಸಲು ಆಗ್ತಿಲ್ಲ, ಫಿಟ್ ನೆಸ್ ಮುಖ್ಯ, ಹೀಗಾಗಿ ನಾನು ತಯಾರಿ ನಡೆಸುತ್ತಿದ್ದೇನೆ. ಬಿಗ್ ಬಾಸ್ ಯಾರಿಗೂ ಅನ್ಯಾಯ ಮಾಡಲ್ಲ ಎನ್ನುವ ನಂಬಿಕೆ ಇದೆ. ವಿನ್ನರ್ ಯಾರು ಎಂದು ಹೇಳುತ್ತಾರೆ ಎಂದಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








