ದೇಶದ ಹವಾಮಾನ ಮುನ್ಸೂಚನೆಯ ಬಗ್ಗೆ ಮಾಹಿತಿ ನೀಡುವ ದೇವಾಲಯ !
ದೇಶದ ಹವಾಮಾನ ಮುನ್ಸೂಚನೆಯ ಬಗ್ಗೆ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸುತ್ತದೆ.
ಯಾವಾಗ ಮಳೆ ಬೀಳುತ್ತದೆ ಅಥವಾ ಚಂಡಮಾರುತ ಇತ್ಯಾದಿ ಮಾಹಿತಿಯನ್ನು ಹವಾಮಾನ ಇಲಾಖೆ ನಮಗೆ ಮುಂಚಿತವಾಗಿ ಮಾಹಿತಿ ನೀಡುತ್ತದೆ.
ಆದರೆ ಉತ್ತರ ಪ್ರದೇಶದಲ್ಲಿನ ಒಂದು ದೇವಾಲಯ, ದೇಶದಲ್ಲಿ ಮಾನ್ಸೂನ್ ಹೇಗೆ ಇರುತ್ತದೆ ಎಂದು ಹೇಳುತ್ತದೆ. ಆ ದೇವಾಲಯದ ಪುರೋಹಿತರು ದೇಶದಲ್ಲಿ ಈ ಬಾರಿ ಮಾನ್ಸೂನ್ ಹೇಗೆ ಇರುತ್ತದೆ ಎಂಬುದರ ಬಗ್ಗೆ ಸೂಚಿಸುತ್ತಾರೆ.
ಸಾಮಾನ್ಯವಾಗಿ, ದೇಶದ ನೈರುತ್ಯ ಮಾನ್ಸೂನ್ ಜೂನ್ 1 ರಂದು ಕೇರಳದಲ್ಲಿ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ಅದು ಒಂದು ದಿನ ಮುಂಚಿತವಾಗಿ ಕೇರಳದ ಕರಾವಳಿಯನ್ನು ತಲುಪಬಹುದು. ಇದರ ಅಂದಾಜನ್ನು ಹವಾಮಾನ ಇಲಾಖೆ (ಐಎಂಡಿ) ಬಿಡುಗಡೆ ಮಾಡಿದೆ.

ಹವಾಮಾನ ಮುನ್ಸೂಚನೆಯ ಬಗ್ಗೆ ಮಾಹಿತಿ ನೀಡುವ ಜಗನ್ನಾಥ ದೇವಾಲಯ :
ಈ ಬಾರಿ ಮಾನ್ಸೂನ್ ದುರ್ಬಲವಾಗಲಿದೆ ಎಂದು ಯುಪಿಯ ಕಾನ್ಪುರ್ ಜಿಲ್ಲೆಯ ಭಿತಾರ್ಗಾಂವ್ನ ಜಗನ್ನಾಥ ದೇವಾಲಯ ಸೂಚಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಮಾನ್ಸೂನ್ ಬರುವ ಕೆಲವು ದಿನಗಳ ಮೊದಲು, ದೇವಾಲಯದ ಗೋಪುರದಲ್ಲಿ ಹುದುಗಿರುವ ಕಲ್ಲುಗಳಲ್ಲಿನ ನೀರಿನ ಹನಿಗಳು ಈ ಬಗ್ಗೆ ಸೂಚನೆ ನೀಡುತ್ತದೆ.
ದೇವಾಲಯದ ಪುರೋಹಿತರು ನೆಲದ ಮೇಲೆ ಬೀಳುವ ನೀರಿನ ಹನಿಗಳಿಂದ ಮಾನ್ಸೂನ್ ಅನ್ನು ಊಹಿಸುತ್ತಾರೆ.
ಮಾಧ್ಯಮ ವರದಿಯ ಪ್ರಕಾರ, ದೇವಾಲಯದ ಪುರೋಹಿತರಾದ ಪಂಡಿತ ಕೆ.ಪಿ.ಶುಕ್ಲಾ, ಎರಡು ದಿನಗಳಿಂದ ಗೋಪುರದಿಂದ ಸಣ್ಣ ಹನಿಗಳು ಬೀಳುತ್ತಿವೆ ಎಂದು ಹೇಳಿದ್ದಾರೆ. ಇದರ ಪ್ರಕಾರ ಈ ಬಾರಿ ಮಳೆ ಕಡಿಮೆಯಾಗಲಿದೆ.
ಬೆಹ್ತಾ ಬುಜುರ್ಗ್ ಗ್ರಾಮದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿದೆ. ಏಳು ತಲೆಮಾರುಗಳಿಂದ ದೇವಾಲಯದಲ್ಲಿ ಈ ಸೇವೆ ನಡೆಯುತ್ತಿರುವುದಾಗಿ ದೇವಾಲಯದ ಅರ್ಚಕ ಕೆ.ಪಿ.ಶುಕ್ಲಾ ಹೇಳುತ್ತಾರೆ. ಕಳೆದ ಎರಡು ದಿನಗಳಿಂದ ಗೋಪುರದಿಂದ ನೀರು ಹನಿಯುತ್ತಿದೆ.
ದೇವಾಲಯದ ಗೋಪುರದಿಂದ ನೀರು ಹನಿ ಬೀಳಲು ಪ್ರಾರಂಭಿಸಿದಾಗ, ಸುತ್ತಮುತ್ತಲಿನ ಹಳ್ಳಿಗಳ ಜನರು ತಮ್ಮ ಹೊಲಗಳ ಕೆಲಸವನ್ನು ಪ್ರಾರಂಭಿಸುತ್ತಾರೆ. ಗ್ರಾಮದ ಭಗವಾನ್ ಜಗನ್ನಾಥ ದೇವಾಲಯದ ಗರ್ಭಗುಡಿಯ ಶಿಖರದ ಮೇಲೆ ಕಲ್ಲು ಇಡಲಾಗಿದೆ. ಮಾನ್ಸೂನ್ ಪ್ರಾರಂಭವಾಗುವ 15-20 ದಿನಗಳ ಮೊದಲು, ಈ ಕಲ್ಲು ನೀರನ್ನು ಹನಿ ಮಾಡುವ ಮೂಲಕ ತನ್ನ ಸಂದೇಶವನ್ನು ನೀಡಲು ಪ್ರಾರಂಭಿಸುತ್ತದೆ ಎಂದು ನಂಬಲಾಗಿದೆ.
ನೀರಿನ ಹನಿಗಳು ಹೇಗೆ ತೊಟ್ಟಿಕ್ಕುತ್ತಿವೆ ಎಂಬುದನ್ನು ಕಂಡುಹಿಡಿಯಲು ಹಲವಾರು ಸಮೀಕ್ಷೆಗಳನ್ನು ಮಾಡಲಾಗಿದೆ. ದೇವಾಲಯದ ಕೊನೆಯ ನವೀಕರಣವು 11 ನೇ ಶತಮಾನದಲ್ಲಿ ನಡೆಯಿತು ಎಂದು ಹೇಳಲಾಗಿದ್ದರೂ ದೇವಾಲಯ ನಿರ್ಮಾಣದ ನಿಖರ ಸಮಯವನ್ನು ಪುರಾತತ್ವ ವಿಜ್ಞಾನಿಗಳು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.
ಸ್ಕೈಮೆಟ್ ಹವಾಮಾನ ವರದಿ ಏನು ಹೇಳಿದೆ
ಸ್ಕೈಮೆಟ್ ಹವಾಮಾನದ ವರದಿಯ ಪ್ರಕಾರ, ನೈರುತ್ಯ ಮಾನ್ಸೂನ್ ಈಗಾಗಲೇ ಮಾಲ್ಡೀವ್ಸ್, ಕೊಮೊರಿನ್ ಸಮುದ್ರ, ಶ್ರೀಲಂಕಾ ಹಾಗೂ ದಕ್ಷಿಣ ಮತ್ತು ಪೂರ್ವ ಬಂಗಾಳದ ಕೊಲ್ಲಿಯ ಹೆಚ್ಚಿನ ಭಾಗದಲ್ಲಿ ಪ್ರಾರಂಭವಾಗಿದೆ. ಅದೇ ಸಮಯದಲ್ಲಿ, ಭಾರತೀಯ ಸಮುದ್ರದಲ್ಲಿ ಒಂದರ ನಂತರ ಒಂದು ಚಂಡಮಾರುತ ಬಂದಿದೆ. ಅರೇಬಿಯನ್ ಸಮುದ್ರದ ಮೇಲೆ ಚಂಡಮಾರುತ ಮತ್ತು ಬಂಗಾಳಕೊಲ್ಲಿಯಲ್ಲಿ ಯಾಸ್ ಚಂಡಮಾರುತವು ಮಾನ್ಸೂನ್ ಅನ್ನು ವೇಗವಾಗಿ ಮುಂದುವರಿಸಲು ಸಹಾಯ ಮಾಡಿದೆ.

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1397742474475577344?s=19
https://twitter.com/SaakshaTv/status/1397771221941604355?s=19
https://twitter.com/SaakshaTv/status/1398457118223745027?s=19
https://twitter.com/SaakshaTv/status/1397407708366704640?s=19
https://twitter.com/SaakshaTv/status/1397379998651084807?s=19
#temple #weather #condition








