ಬಿಗ್ ಬಾಸ್ ಕನ್ನಡದ ಸೀಸನ್ 8 ಮತ್ತೆ ಆರಂಭವಾಗುವುದು ಖಚಿತ..!
ಕೋವಿಡ್ 2ನೇ ಅಲೆ ಲಾಕ್ ಡೌನ್ ಘೋಷಣೆಯಿಂದಾಗಿ ಅರ್ಧಕ್ಕೆ ನಿಂತುಹೋಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8 ಪುನರಾರಂಭವಾಗಲಿದೆ ಅನ್ನೋ ಊಹಾಪೋಹಳು ಕೆಲ ದಿನಗಳಿಂದ ಹರಿದಾಡುತ್ತಿತ್ತು.. ಇದೀಗ ಈ ಸುದ್ದಿ ಖಚಿತವಾಗಿದ್ದು, ಬಿಗ್ ಬಾಸ್ ಮತ್ತೆ ಆರಂಭವಾಗಲಿದೆ ಎಂದುಬಿಗ್ಬಾಸ್ ಪ್ರಸಾರವಾಗುವ ಖಾಸಗಿ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು , ‘ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯವಾಗಿದೆ’ ಎಂದಿದ್ದಾರೆ.
‘ಇದೊಂಥರಾ ಎರಡನೇ ಇನ್ನಿಂಗ್ಸ್. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲಾ ಗೊತ್ತಿದೆ. ಮೊದಲನೇ ಇನ್ನಿಂಗ್ಸ್ ಸ್ಕೋರ್ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನಿಂಗ್ಸಿನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುತ್ತದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೆ ಮೊದಲ ರನ್ ಓಡಬೇಕು. ಮೊದಲ ವಿಕೆಟ್ ಉರುಳಿಸಬೇಕು. ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು. ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್ಬಾಸ್ ಶೋದಲ್ಲೂ ಎರಡನೇ ಇನ್ನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟುಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ.
ಜೂನ್ ತಿಂಗಳು. ಹೊರಗಡೆ ಮಳೆ. ಹೊಸ ತರಗತಿಗೆ ಹೊಸದಾಗಿರೋ ಕೊಡೆ ಹಿಡಿದು ಹೋದಷ್ಟೇ ಖುಷಿಯೊಂದಿಗೆ ವಾಪಸ್ ಕೆಲಸಕ್ಕೆ ಹಾಜರಾಗುತ್ತಿದ್ದೇವೆ. ಪಾಸಾಗುತ್ತೇವೋ ಫೇಲಾಗುತ್ತೇವೋ ಅನ್ನುವುದಕ್ಕಿಂತ ತರಗತಿಯಲ್ಲಿ ಕುಳಿತು ಕಲಿತಾ ಇರಬೇಕು ಅನ್ನೋದೇ ವಿಷಯವಾಗಿದೆ’ ಎಂದು ತಿಳಿಸಿದ್ದಾರೆ.
ಈ ಮೂಲಕ ಬಿಗ್ ಬಾಸ್ ಪುನರಾರಂಭದ ಬಗ್ಗೆ ಸುಳಿವು ನೀಡಿದ್ದಾರೆ. ಅಂದ್ಹಾಗೆ ಬಿಗ್ ಬಾಸ್ ಇನ್ನೂ ಮೂರು ವಾರಗಳಿರುವಾಗಲೇ ಬಂದ್ ಆಗಿತ್ತು.. ಹೀಗಾಗಿ ಅಭಿಮಾನಿಗಳು ಜೊತೆಗೆ ಸ್ಪರ್ಧಿಗಳು ಸಹ ಬೇಸರಗೊಂಡಿದ್ದರು.. ಎಲ್ಲಾ ಅಮದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಯಾರು ವಿನ್ನರ್ ಎಂಬುದು ಸಹ ಗೊತ್ತಾಗಿರಬೇಕಿತ್ತು..
ಇನ್ನೂ ಜೂನ್ 21 ರಿಂದ ಮತ್ತೆ ಬಿಗ್ ಬಾಸ್ ಆರಂಭವಾಗಿಲಿದೆ ಎಂದು ಹೇಳಲಾಗ್ತಿದೆ.. ಜೊತೆಗೆ ಶೋ ಆರಂಭಕ್ಕೂ ಮುನ್ನ ಮತ್ತೊಮ್ಮೆ ಸ್ಪರ್ಧಿಗಳು ಕ್ವಾರಂಟೈನ್ ಗೆ ಒಳಗಾಗುವ ಸಾಧ್ಯತೆಯಿದೆ..
ಅಂದ್ಹಾಗೆ ಬಿಗ್ ಬಾಸ್ ನಲ್ಲಿ ಅರವಿಂದ್ ಅಥವ ಮಂಜು ಪಾವಗಡ ವಿನ್ನರ್ ಆಗುವ ಸಾಕಷ್ಟು ನಿರೀಕ್ಷೆಗಳಿದ್ದವು.. ಇಬ್ಬರೂ ಸಹ ಟಫ್ ಕಾಂಪಿಟೇಟರ್ ಗಳಾಗಿದ್ದರು.. ಜೊತೆಗೆ ಸಾಕಷ್ಟು ಅಭಿಮಾನಿಗಳನ್ನ ಸಹ ಸಂಪಾದನೆ ಮಾಡಿದ್ದರು.. ಇದರ ಹೊರತಾಗಿ ಅರವಿಂದ್ ದಿವ್ಯಾ ಕೆಮಿಸ್ಟ್ರಿಯಿಂದಾಗಿ ಲೈಮ್ ಲೈಟ್ ನಲ್ಲಿಯೂ ಇದ್ದರು.. ಆದ್ರೆ ಕಡೆ ಕಡೆಯಲ್ಲಿ ದಿವ್ಯಾ ಅನಾರೋಗ್ಯದಿಂದಾಗಿ ಮನೆಯಿಂದ ಹೊರನಡೆದಿದ್ದರು.. ಈ ಬಾರಿ ಮತ್ತೆ ಮನೆಗೆ ಎಂಟ್ರಿಕೊಡುವ ಸಾಧ್ಯತೆಯಿದೆ.
ಇನ್ನೂ ಚಂದ್ರಚೂಡ್ ಚಕ್ರವರ್ತಿ , ಪ್ರಸಾಂತ್ ಸಂಬರಗಿ , ಅರವಿಂದ್ , ದಿವ್ಯಾ ಉರುಡುಗ , ಪ್ರಿಯಾಂಕಾ ತಿಮ್ಮೇಶ್ , ನಿಧಿ ಸುಬ್ಬಯ್ಯ್, ಶುಬಾ ಪುಂಜಾ , ದಿವ್ಯಾ ಸುರೇಶ್ , ಮುಂಜು ಪಾವಗಡ , ಶಮಂತ್ ಗೌಡ , ವೈಷ್ಣವಿ ಸೇಫ್ ಆಗಿ ಉಳಿದಿದ್ದರು..









