ಒಂದೇ ಕುಟುಂಬದ ನಾಲ್ವರು ಸಹೋದರರು ನೀರುಪಾಲು Belagavi
ಬೆಳಗಾವಿ : ಬಟ್ಟೆ ತೊಳೆಯಲು ಹೋಗಿ ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಬೆಳಗಾವಿಯ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.
ಪರಸಪ್ಪಾ ಗೋಪಾಲ ಬನಸೋಡೆ(42), ಸದಾಶಿವ ಬನಸೋಡೆ (36), ಧರೇಪ್ಪಾ (26), ಶಂಕರ(23) ನೀರಿನಲ್ಲಿ ಕೊಚ್ಚಿ ಹೋಗಿರುವವರಾಗಿದ್ದಾರೆ.
ಬಟ್ಟೆ ಹೊಗೆಯುವ ವೇಳೆ ಧರೇಪ್ಪಾ ಕಾಲು ಜಾರಿ ನದಿಗೆ ಬಿದಿದ್ದು, ಆತನನ್ನ ರಕ್ಷಿಸಲು ಮೂವರು ನದಿಗೆ ಜಿಗಿದಿದ್ದಾರೆ. ಈ ವೇಳೆ ನಾಲ್ವರು ನೀರಿನ ಸೇಳೆತಕ್ಕೆ ಸಿಲುಕಿ ನದಿಯಲ್ಲಿ ಕಣ್ಮರೆಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲಿಸರು ಆಗಮಿಸಿದ್ದು, ಮೃತ ದೇಹಗಳ ಶೋಧ ಕಾರ್ಯ ಮುಂದುವರೆದಿದೆ.









