ಜನರ ನಿರ್ಲಕ್ಷ್ಯದಿಂದಲೇ ಅಪ್ಪಳಿಸುತ್ತೆ ಕೊರೊನಾ 3ನೇ ಅಲೆ : ಮೋದಿ ಆತಂಕ
ನವದೆಹಲಿ : ಜನರ ನಿರ್ಲಕ್ಷ್ಯದಿಂದಲೇ ಕೊರೊನಾ 3ನೇ ಅಲೆ ಅಪ್ಪಳಿಸಲಿದೆ ಎಂದು ದೇಶದ ಪ್ರಧಾನಿ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರವಾಸಿ ತಾಣಗಳಲ್ಲಿ ಜನ ಗುಂಪು ಸೇರುತ್ತಿದ್ದಾರೆ. 3ನೇ ಅಲೆ ಆತಂಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಡ್, ಆಕ್ಸಿಜನ್-ವೆಂಟಿಲೇಟರ್ ಲಭ್ಯತೆ, ವ್ಯಾಕ್ಸಿನ್ ಪೂರೈಕೆ, ಸಂಬಂಧ ಇವತ್ತು ಉನ್ನತ ಮಟ್ಟದ ಸಭೆ ನಡೆಸಿದರು. ಈ ವೇಳೆ, ಪ್ರವಾಸಿ ತಾಣಗಳು, ಮಾರ್ಕೆಟ್ಗಳಲ್ಲಿ ಜನರ ವರ್ತನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
37 ಕೋಟಿ ದಾಟಿದ ಕೋವಿಡ್ -19 ಲಸಿಕೆ ಪಡೆದವರ ಸಂಖ್ಯೆ – ಕೇಂದ್ರ ಆರೋಗ್ಯ ಸಚಿವಾಲಯ
ಕೆಲ ದಿನಗಳಿಂದ ವಿಡಿಯೋ, ಫೋಟೋಗಳನ್ನು ನೋಡಿದೆ. ಜನ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿ ಜನ ಗುಂಪು ಸೇರುತ್ತಿದ್ದಾರೆ. ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಜನ ಕೊವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜನರ ನಿರ್ಲಕ್ಷ್ಯದಿಂದಲೇ ಮತ್ತೆ ಕೊರೋನಾ 3ನೇ ಅಲೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ.








