ಬೇಕಾದ ಖಾತೆ ಕೊಡದೇ ಹೋದ್ರೆ ರಾಜಕೀಯ ನಿವೃತ್ತಿ..? – ಆನಂದ್ ಸಿಂಗ್
ವಿಜಯನಗರ : ನಾನು 2008ರಲ್ಲಿ ನನ್ನ ರಾಜಕೀಯ ಜೀವನ ಆರಂಭ ಮಾಡಿದೆ. ನಮ್ಮ ಕುಟುಂಬದ ಆರಾಧ್ಯ ಧೈವ ವೇಣುಗೋಪಲ. ಇದೇ ದೇವಾಸ್ಥಾನದಲ್ಲಿ ನನ್ನ ರಾಜಕೀಯ ಜೀವನ ಅಂತ್ಯಗೊಳ್ಳಬಹುದು ಎಂದು ಹೇಳುವ ಮೂಲಕ ಸಚಿವ ಆನಂದ್ ಸಿಂಗ್ ಅವರು ಖಾತೆ ಬಗ್ಗೆ ಅಸಾಮಾಧಾಮ ಹೊರಹಾಕುವ ಜೊತೆಗೆ ರಾಜಕೀಯ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದಾರೆ..
ಶೀಘ್ರವೇ ಸಿಲಿಕಾನ್ ಸಿಟಿ ರಸ್ತೆಗೆ ಇಳಿಯಲಿದೆ ಎಲೆಕ್ಟ್ರಿಕ್ ಬಸ್..!
ವಿಜಯನಗರದಲ್ಲಿ ಮಾತನಾಡಿ ಹದಿನೈದು ವರ್ಷದಿಂದ ರಾಜಕೀಯ ಜೀವನದಲ್ಲಿರುವೆ. ಐದು ವರ್ಷ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೆ . ನನ್ನ ಇಪ್ಪತ್ತು ವರ್ಷದ ಸಾಮಾಜಿಕ ಹಾಗು ರಾಜಕೀಯ. ಬದುಕಿನಲ್ಲಿ ನಡೆದ ಎಲ್ಲ ಘಟನೆಗಳಿಗೂ ಶ್ರೀವೇಣುಗೋಪಾಲನ ಅರ್ಶೀವಾದ ಇದೆ. ನಾನು ಏನು ಹರಕೆ ಹೊತ್ತು ಚೀಟಿ ಬರೆದಿರುವೆ ಅದನ್ನೆ ವಿನಾಕಾರಣ ಏನೆನೋ ವಿಶ್ಲೇಷಣೆ ಮಾಡಲಾಗುತ್ತಿದೆ. ರಾಜಕೀಯ ಜೀವನದಲ್ಲಿ ನನಗೆ ಯಾರು ಹಿತೈಷಿಗಳು ಇದ್ದರೆಂದಯ ಭಾವಿಸಿದ್ದೆ. ಆದ್ರೆ ನನ್ನರಾಜಕೀಯ ಜೀವನ ಯಾರು ಹಿತೈಷಿಗಳಿಲ್ಲ. ನನಗೆ ವೇಣುಗೋಪಲ ಸ್ವಾಮಿ ರಕ್ಷಣೆ ಮಾಡಬೇಕು ಎಂದಿದ್ದಾರೆ..
ಇನ್ನೂ ಆಗಸ್ಟ್ ಎಂಟರಂದು ಬಸವರಾಜ ಭೊಮ್ಮಾಯಿ ಮಾಜಿ ಸಿ.ಎಂ ಯಡಿಯೂರಪ್ಪರನ್ನ ಭೇಟಿಯಾಗಿ ಖಾತೆ ಬದಲಾವಣೆಗಾಗಿ ಮನವಿ ಮಾಡಿಕೊಂಡಿರುವೆ. ಆದ್ರೆ ಅದನ್ನ ಮಾಧ್ಯಮಗಳ ಎದುರಿಗೆ ಬಹಿರಂಗವಾಗಿ ಹೇಳಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ.








