ಕುಟುಂಬ ಪಿಂಚಣಿಯ ಮಿತಿ ತಿಂಗಳಿಗೆ ರೂ 45,000 ದಿಂದ ರೂ1.25 ಲಕ್ಷಕ್ಕೆ ಏರಿಕೆ
ಕೇಂದ್ರ ಸರ್ಕಾರವು ಕುಟುಂಬ ಪಿಂಚಣಿಯನ್ನು ಎರಡೂವರೆ ಪಟ್ಟು ಹೆಚ್ಚಿಸಿದೆ. ಮಹತ್ವದ ಸುಧಾರಣೆಯ ಅಡಿಯಲ್ಲಿ, ಕುಟುಂಬ ಪಿಂಚಣಿಯ ಮಿತಿಯನ್ನು ತಿಂಗಳಿಗೆ ರೂ. 45,000 ದಿಂದ ರೂ 1.25 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮವು ಮೃತಪಟ್ಟ ನೌಕರರ ಕುಟುಂಬದ ಸದಸ್ಯರಿಗೆ ಅರ್ಥಿಕ ಭದ್ರತೆ ನೀಡುತ್ತದೆ.

ಮೊದಲು ಈ ಮೊತ್ತವು ಗರಿಷ್ಠ 45 ಸಾವಿರ ರೂ.ಗಳಷ್ಟಿತ್ತು. ಇದನ್ನು ಎರಡೂವರೆ ಪಟ್ಟು ಹೆಚ್ಚಿಸಿ 1.25 ಲಕ್ಷ ರೂ ಮಾಡಲಾಗಿದ್ದು, ಈ ಮಾಹಿತಿಯು ಹಲವಾರು ಸಚಿವಾಲಯಗಳು ಮತ್ತು ಇಲಾಖೆಗಳಿಂದ ಸ್ವೀಕರಿಸಿದ ಉಲ್ಲೇಖಗಳ ಆಧಾರದ ಮೇಲೆ ನೀಡಲಾಗಿದೆ.
ಒಂದೇ ವ್ಯಕ್ತಿ ಎರಡು ಪಿಂಚಣಿಗಳ ಲಾಭವನ್ನು ಪಡೆಯಬಹುದು
ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 1972 ರ ನಿಯಮ 54 ರ ಉಪ ನಿಯಮ (11) ರ ಪ್ರಕಾರ, ಪತಿ ಮತ್ತು ಪತ್ನಿ ಇಬ್ಬರೂ ಸರ್ಕಾರಿ ಉದ್ಯೋಗಿಗಳಾಗಿದ್ದರೆ ಮತ್ತು ಈ ನಿಯಮಗಳ ಅಡಿಯಲ್ಲಿ ಒಳಪಟ್ಟಿದ್ದರೆ, ಪಿಂಚಣಿದಾರ ಮೃತಪಟ್ಟ ಪಕ್ಷದಲ್ಲಿ ಮಗುವಿಗೆ ಎರಡು ಕುಟುಂಬ ಪಿಂಚಣಿ ಸಿಗುತ್ತದೆ.
ಮೊದಲು ಈ ಮೊತ್ತವು ತಿಂಗಳಿಗೆ ಗರಿಷ್ಠ 45 ಸಾವಿರ ಮತ್ತು 27 ಸಾವಿರ ರೂಪಾಯಿ ಅಂದರೆ 50 ಶೇಕಡಾ ಮತ್ತು 30 ಶೇಕಡಾ ಆಗಿತ್ತು.
ಅಂತಹ ಸಂದರ್ಭಗಳಲ್ಲಿ ಒಟ್ಟು ಎರಡು ಕುಟುಂಬ ಪಿಂಚಣಿಗಳ ಮೊತ್ತವು ತಿಂಗಳಿಗೆ ರೂ. 45,000 ಮತ್ತು ತಿಂಗಳಿಗೆ ರೂ. 27,000 ಮೀರಬಾರದು. ಅಂದರೆ, ಶೇಕಡಾ 50 ಮತ್ತು ಶೇಕಡಾ 30 ಆಗಿದ್ದು ಆರನೇ ಕೇಂದ್ರೀಯ ವೇತನ ಆಯೋಗದ (ಸಿಪಿಸಿ) ಶಿಫಾರಸುಗಳ ಪ್ರಕಾರ ಗರಿಷ್ಠ ರೂ. 90000 ಸಂಬಳವನ್ನು ಉಲ್ಲೇಖಿಸಿ ಈ ದರವನ್ನು ನಿಗದಿಪಡಿಸಲಾಗಿದೆ.
7 ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನದ ನಂತರ, ಗರಿಷ್ಠ ವೇತನವನ್ನು ತಿಂಗಳಿಗೆ 2.5 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಆದ್ದರಿಂದ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) 1972 ರ ನಿಯಮ 54 ರ ಉಪ-ನಿಯಮ (11) ರ ಅಡಿಯಲ್ಲಿ ಮೊತ್ತವನ್ನು ಪರಿಷ್ಕರಿಸಲಾಗಿದೆ. ತಿದ್ದುಪಡಿಯ ಪ್ರಕಾರ, 2.5 ಲಕ್ಷದ 50 ಶೇಕಡಾ ಅಂದರೆ 1.25 ಲಕ್ಷ ಮತ್ತು 2.5 ಲಕ್ಷದ 30 ಶೇಕಡಾ ಅಂದರೆ 75 ಸಾವಿರ ಮಾಡಲಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಮಧುಮೇಹ ರೋಗಿಗಳಿಗೆ ಮೆಂತ್ಯ ಹೇಗೆ ಪ್ರಯೋಜನಕಾರಿ ಗೊತ್ತಾ? https://t.co/VxXUNNDW7I
— Saaksha TV (@SaakshaTv) August 19, 2021
ಧಿಡೀರ್ ಟೊಮೆಟೊ ದೋಸೆ#Saakshatv #cookingrecipe #tomatodosa https://t.co/sCCsSKHtg9
— Saaksha TV (@SaakshaTv) August 19, 2021
ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿತಗೊಳಿಸದಿರಲು ಕಾರಣವೇನು ಗೊತ್ತಾ? https://t.co/lw1zFj9ipp
— Saaksha TV (@SaakshaTv) August 19, 2021
ಬೆಲ್ಲದ ಸೇವನೆ ಯಾವ ಸಮಸ್ಯೆ ಇರುವವರಿಗೆ ಹಾನಿಕರ?#Saakshatv #healthtips #Jaggery https://t.co/UHhshvXj6W
— Saaksha TV (@SaakshaTv) August 18, 2021
#familypension








