ಬ್ಲಾಕ್ ಬಸ್ಟರ್ ಸಿನಿಮಾ ದೃಶ್ಯಂ ರೀತಿಯ ಕೊಲೆಯೊಂದು ಕೇರಳದ ಮಲಪ್ಪರಂನಲ್ಲಿ ಬೆಳಕಿಗೆ ಬಂದಿದ್ದು, ಯುವ ಕಾಂಗ್ರೆಸ್ ಮುಖಂಡ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮಲಪ್ಪುರಂನ ತುವ್ವೂರ್ ನಲ್ಲಿ ಮೂವರು ಸಹೋದರರು ಹಾಗೂ ಅವರ ಸ್ನೇಹಿತ ಮಹಿಳೆಯನ್ನು ಕೊಲೆ ಮಾಡಿ ಶವವನ್ನು ಸ್ನಾನಗೃಹ ನಿರ್ಮಿಸುವ ಉದ್ಧೇಶದಿಂದ ತಮ್ಮ ವಸತಿ ಆವರಣದಲ್ಲಿ ಹೂತು ಹಾಕಿದ್ದಾರೆ ಎನ್ನಲಾಗಿದೆ.
ಪೊಲೀಸರು ಸಂಪೂರ್ಣ ತನಿಖೆಯ ನಂತರ ಅವರ ಯೋಜನೆಯನ್ನು ವಿಫಲಗೊಳಿಸಿದ್ದಾರೆ. ತುವ್ವೂರಿನ ಮೂನುಕಂದನ್ ಮನೆಯಿಂದ ಸಹೋದರರಾದಿ ವಿಷ್ಣು ಎ, ವೈಶಾಕ್ ಎ ಮತ್ತು ವಿವೇಕ್ ಎಂ ಹಾಗೂ ಸ್ನೇಹಿತ ಮುಹಮ್ಮದ್ ಶಿಹಾನ್ ಅವರನ್ನು ಬಂಧಿಸಿದ್ದಾರೆ. ಈ ಮೂವರ ತಂದೆ ಮತ್ತು ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಅವರು ಅಪಾರಧ ಸ್ಥಳದಲ್ಲಿ ಹಾಜರಾಗಿದ್ದು, ಕೊಲೆಯ ಕುರಿತು ತಿಳಿದಿದ್ದರು ಎಂದು ತಿಳಿದು ಬಂದಿದೆ.
ಯುವ ಕಾಂಗ್ರೆಸ್ ಸದಸ್ಯ ವಿಷ್ಣು ಅವರನ್ನು ಬಂಧಿಸಲಾಗಿದೆ. ಇಲ್ಲಿನ ನಿವಾಸಿ ಮನೋಜಕುಮಾರ್ ಅವರ ಪತ್ನಿ ಸುಜಿದಾ ನಾಪತ್ತೆಯಾಗಿರುವ ಕುರುತು ದೂರು ದಾಖಲಾಗಿತ್ತು. ಸುಜಿತಾ ಅವರು ಆ. 11ರಂದು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ನೆಪದಲ್ಲಿ ಕೃಷಿ ಭವನದಿಂದ ತೆರಳಿದ್ದರು. ತನ್ನ ಕೆಲಸದ ಸ್ಥಳದ ಹತ್ತಿರುವ ವಿಷ್ಣು ನಿವಾಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಸುಜಿತಾಳನ್ನು ಉಸಿರುಗಟ್ಸಿಸಿ ಕೊಲೆ ಮಾಡಿದ್ದಾರೆ ಎನ್ಲನಾಗಿದೆ. ನಂತರ ದೇಹವನ್ನು ಮನೆಯ ಮಂಚದ ಕೆಳಗೆ ಬಚ್ಚಿಟ್ಟಿದ್ದಾರೆ. ಅವರ ಚಿನ್ನಾಭರವಣನ್ನು ತೆಗೆದುಕೊಂಡು ಆಭರಣ ಮಳಿಗೆಗೆ ಮಾರಾಟ ಮಾಡಿದ್ದಾರೆ. ಆನಂತರ ಹಣವನ್ನು ಹಂಚಿಕೊಂಡಿದ್ದಾರೆ. ಮಾರನೇ ದಿನ ದೇಹವನ್ನು ತ್ಯಾಜ್ಯ ಸುರಿಯಲು ಅಗೆದಿದ್ದ ಹೊಂಡದಲ್ಲಿ ಹೂತು ಹಾಕಿದ್ದಾರೆ. ಸದ್ಯ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.