ಸಿಎಂ ಜತೆಗೆ ನಾವು ಶಾಸಕರು ಬಂಡೆಗಳ ತರ ಇರ್ತೇವೆ – ಎ ಎಸ್ ಪಾಟೀಲ್ ನಡಹಳ್ಳಿ
ಸರ್ಕಾರ ನೇತ್ರತ್ವ ವಹಿಸಿರೋದು ಸಿಎಂ. ಆಗಿರೋ ತಾರತಮ್ಯ ಸರಿಮಾಡಿ ಎಂದು ನಾವು ಸಿಎಂ ಬಳಿ ಮನವಿ ಮಾಡಿದ್ದೇವೆ. ಹಿಂದೆ ಕೂಡ ಸಿಎಂ ಇದ್ದವರು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹಣ ಕೊಟ್ಟಿದ್ದಾರೆ. ಆವಾಗ ಇಲ್ಲದ ಸಮಸ್ಯೆ ಈಗ ಯಾಕೆ ಬಂತು ಎಂದು ಎ ಎಸ್ ಪಾಟೀಲ್ ನಡಹಳ್ಳಿ ಹೇಳಿಕೆ ನೀಡಿದ್ದಾರೆ. ಸಿಎಂ ವಿರುದ್ಧ ಸಚಿವ ಈಶ್ವರಪ್ಪ ದೂರು ಸಲ್ಲಿಸಿರುವ ವಿಚಾರವಾಗಿ ಮಾತನಾಡಿದ ಅವರು ಪ್ರತಿ ಊರಲ್ಲಿ ಹೋದ್ರು ರಸ್ತೆ ಸಮಸ್ಯೆ ಇದೆ. ಅದಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಅನುದಾನ ಹೆಚ್ಚು ಬೇಕು. ನಾವು ಸಾಕಷ್ಟು ಬಾರಿ ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದೇವು.
ಅವರೇ ಹೇಳಿದ್ರು ಸಿಎಂ ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಿ ಅಂತ ಸಲಹೆ ಕೊಟ್ಟಿದ್ದಾರೆ. ಹಾಗಾಗೀ ಸಿಎಂ ನಮ್ಮ ಶಾಸಕರ ನೆರವಿಗೆ ಬಂದಿದ್ದಾರೆ. ಏನೇ ಸಮಸ್ಯೆ ಇದ್ರು ನೇರವಾಗಿ ಬಂದು ಸಿಎಂ ಬಳಿ ಮಾತಾಡಲಿ. ನಾವೆಲ್ಲಾ ಎಲ್ಲಾ ಶಾಸಕರು ಸಿಎಂ ಜತೆಗೆ ಇದ್ದೇವೆ. ಯಾರೂ ಏನೇ ಹೇಳಿದ್ರು ನಾವು ತಲೆಕಡೆಸಿಕೊಳ್ಳೋದಿಲ್ಲ. ಸಿಎಂ ಜತೆಗೆ ನಾವು ಶಾಸಕರು ಬಂಡೆಗಳ ತರ ಇರ್ತೇವೆ ಎಂದಿದ್ದಾರೆ.
ವೈದ್ಯನಿಗೆ ಚಪ್ಪಳಿಯಿಂದ ಹೊಡೆದ ಮಹಿಳೆ… ವಿಡಿಯೋ ವೈರಲ್..!
ಸಿಡಿ ಕೇಸ್ – SIT ಬದಲು CBIಗೆ ಕೊಟ್ಟಿದ್ರೆ ಸತ್ಯ ಹೊರ ಬರ್ತಿತ್ತು.
ಸಿಎಂ ರಾಜೀನಾಮೆ ಕೊಡಲಿ… ಇಲ್ಲಾ ಈಶ್ವರಪ್ಪನವರನ್ನ ಕ್ಯಾಬಿನೆಟ್ ನಿಂದ ತಗೆದು ಹಾಕಲಿ – ಡಿಕೆಶಿ
ಸಿಎಂ ಬಿಎಸ್ ವೈ ವಿರುದ್ಧ ದೂರು ಸಲ್ಲಿಸಿದ ಈಶ್ವರಪ್ಪ ನಡೆ ವಿರುದ್ಧ ಬಿ.ಸಿ ಪಾಟೀಲ್ ಬೇಸರ..!