ಸಿಡಿ ಕೇಸ್ – SIT ಬದಲು CBIಗೆ ಕೊಟ್ಟಿದ್ರೆ ಸತ್ಯ ಹೊರ ಬರ್ತಿತ್ತು.
ಬಾಗಲಕೋಟೆ : ಸಿಡಿ ಕೇಸ್ ಸಂತ್ರಸ್ತೆ ಹೇಳಿಕೆ ನಂತರವೂ ರಮೇಶ್ ಜಾರಕಿಹೊಳಿ ಬಂಧನವಾಗದ ವಿಚಾರವಾಗಿ ಬಾಗಲಕೋಟೆಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಎಸ್ ಐಟಿ ವಿಚಾರಣೆ ಕೈಗೆತ್ತಿಕೊಂಡಿದೆ. ನನ್ನ ದೃಷ್ಟಿಯಲ್ಲಿ ಇದನ್ನು ಸಿಬಿಐಗೆ ಕೊಟ್ಟಿದ್ರೆ ಸತ್ಯ ಹೊರ ಬರ್ತಿತ್ತು. ಈಗ ಎಸ್ ಐಟಿಯವರು ತನಿಖೆ ಮಾಡ್ತಿದ್ದಾರೆ. ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಹೇಳಿಕೆ ಸೀಲ್ಡ್ ಕವರ್ ನಲ್ಲಿರುತ್ತೇ. ಅದು ತನಿಖಾಧಿಕಾರಿಗೆ ಹೋಗುತ್ತೆ.
ಅದನ್ನು ಎಲ್ಲಿಯೂ ಲೀಕ್ ಮಾಡೋಲ್ಲ. ನಿಖಾಧಿಕಾರಿಗೆ ಸುಪ್ರೀಂ ಪವರ್ ಇದೆ. ಸಂತ್ರಸ್ತೆ ಏನು ಹೇಳಿದಾಳೆ ಅನ್ನೋದು ಯಾರಿಗೆ ಗೊತ್ತು. ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಏನು ಹೇಳಿದ್ದಾಳೆ ಅನ್ನೋದು ಮಹತ್ವದ್ದು. ಸಂತ್ರಸ್ತೆ ಹೇಳಿಕೆಯನ್ನು ತನಿಖಾಧಿಕಾರಿ ಪರಾಮರ್ಶಿಸಿ ಯೋಗ್ಯ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ. ಇದೇ ವೇಳೆ ಸಿಡಿ ಕೇಸ್ ನಲ್ಲಿ ಡಿಕೆಶಿ ಷಡ್ಯಂತ್ರವಿರುವುದಾಗಿ ಸಂತ್ರಸ್ತೆ ಕುಟುಂಬಸ್ಥರ ಆರೋಪ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ ಡಿಕೆಶಿ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆಂದು ಸಂತ್ರಸ್ತೆ ಸಹೋದರ, ತಂದೆ ತಾಯಿ ಹೇಳಿದ್ದಾರೆ. ಅದಕ್ಕೆ ನಮ್ಮ ಪಕ್ಷದ ಅಧ್ಯಕ್ಷರು ಅದಕ್ಕೂ ನನಗೂ ಏನು ಸಂಬಂಧ ಇಲ್ಲ ಎಂದಿದ್ದಾರೆ. ಕುಟುಂಬದವರು ಒತ್ತಡದ ಮಧ್ಯೆ ಏನೇನೋ ಹೇಳ್ತಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಡಿಕೆಶಿ ಅವರನ್ನೇ ಕೇಳಿ ಎಂದಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ – 2ನೇ ಹಂತದ ಮತದಾನಕ್ಕೂ ಮುನ್ನ ಟಿಎಂಸಿ ಕಾರ್ಯಕರ್ತನ ಹತ್ಯೆ..!
ಕೋಲಾರ : ಟೈಯರ್ ಅಂಗಡಿಯಲ್ಲಿ ಅಗ್ನಿ ಅನಾಹುತ