ಧಾರವಾಡ: ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಯುವಕನಿಗೆ ಓದಿನತ್ತ ಗಮನ ಕೊಡು ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ನಗರದ ಸಾದನಕೇರಿಯಲ್ಲಿ ಈ ಘಟನೆ ನಡೆದಿದ್ದು, ಚೇತನ್ ಕೊಂಡಿಹಾಳ(23) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಕ್ರೀಡೆಯೊಂದಿಗೆ ಓದಿನಲ್ಲಿಯೂ ಗಮನ ಕೊಡು ಎಂದು ತಂದೆ ಹೇಳಿದ್ದಕ್ಕೆ ಕೆಲಗೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಚೇತನ್ ಹೆಚ್ಚಾಗಿ ಕ್ರೀಡೆಯನ್ನು ಪ್ರೀತಿಸುತ್ತಿದ್ದರು. ಆದರೆ, ತಂದೆ ಕ್ರೀಡೆಯೊಂದಿಗೆ ಓದಿನತ್ತ ಕೂಡ ಗಮನ ಹರಿಸು ಎಂದು ಹೇಳಿದ್ದಕ್ಕೆ ಬೇಸರಗೊಂಡಿದ್ದಾನೆ. ನಂತರ ಮನೆಯಿಂದ ನಾಪತ್ತೆಯಾಗಿದ್ದ. ಎರಡು ದಿನಗಳ ನಂತರ ಕೆಲಗೇರಿ ಕೆರೆಯಲ್ಲಿ ಚೇತನ್ ಶವ ಪತ್ತೆಯಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.