hyderabad : ಗೆಳತಿಗೆ ಮೆಸೆಜ್ ಮಾಡಿದ್ದಕ್ಕೆ ಸ್ನೇಹಿತನ ಎದೆಸೀಳಿ ಖಾಸಗಿ ಅಂಗ ಕಿತ್ತೇಸೆದ ಪ್ರೇಮಿ…
ತನ್ನ ಗೆಳತಿಗೆ ಮೆಸೆಜ್ ಮತ್ತು ಕರೆ ಮಾಡುತ್ತಾ ಸಂಪರ್ಕದಲ್ಲಿ ಇದ್ದದ್ದಕ್ಕಾಗಿ ಯುವಕನೊಬ್ಬ ತನ್ನ ಸ್ನೇಹಿತನನ್ನೆ ಕೊಚ್ಚಿ ಕೊಂದು ಶಿರಚ್ಚೇಧ ಮಾಡಿ ಎದೆ ಸೀಳಿ ಹೃದಯ ಕಿತ್ತು ಹಾಕಿಕರುವ ಭೀಭತ್ಸ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿ ನವೀನ್. ಕೊಲೆ ಮಾಡಿದ ಸ್ನೇಹಿತ ಹರಿಹರ ಕೃಷ್ಣ ಸ್ನೇಹಿತನನ್ನ ಕೊಂದು ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆಯಾದ ಯುವಕ ಆತನ ಸ್ನೇಹಿತನ ಗೆಳತಿಯಯೊಂದಿಗೆ ಸಂಬಂಧ ಹೊಂದಿದ್ದ ಅಲ್ಲದೇ ಮೆಸೆಜ್ ಮತ್ತು ಕರೆ ಮಾಡುತ್ತಿದ್ದ ಇದರಿಂದ ಅಸಮಧಾನಗೊಂಡಿದ್ದ ಹರಿಹರಿ ಕೃಷ್ಣ ನವೀನನ ಶಿರಛೇಧ ಮಾಡಿ ಎದೆಸೀಳಿ ಹೃದಯ ಮತ್ತು ಆತನ ಖಾಸಗಿ ಭಾಗಗಳನ್ನ ಕಿತ್ತಿದ್ದಾನೆ.
ಆರೋಪಿ ಹರಿಹರ ಕೃಷ್ಣ ಹಾಗೂ ಕೊಲೆಯಾದ ಯುವಕ ನವೀನ್ ಗೆಳೆಯರಾಗಿದ್ದು, ಈ ಹಿಂದೆ ದಿಲ್ಸುಖ್ ನಗರದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇಬ್ಬರೂ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ ನವೀನ್ ಮೊದಲು ತನ್ನ ಪ್ರೇಮವನ್ನು ಯುವತಿಗೆ ತಿಳಿಸಿದ್ದ. ಈ ಪ್ರಸ್ತಾಪವನ್ನ ಆಕೆ ಒಪ್ಪಿಕೊಂಡಿದ್ದು, 1-2 ವರ್ಷದ ಬಳಿ ಅವರಿಬ್ಬರೂ ಬೇರೆಯಾಗಿದ್ದರು. ಬಳಿಕ ಯುವತಿ ಹರಿಹರ ಕೃಷ್ಣನೊಂದಿಗೆ ಸಂಬಂಧ ಬೆಳೆಸಿದ್ದಳು. ಆದರೆ ಯುವತಿ ನವೀನ್ ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಳು. ಆಕೆಗೆ ನವೀನ್ ಯಾವಾಗಲೂ ಸಂದೇಶ ಹಾಗೂ ಕರೆ ಮಾಡುತ್ತಿದ್ದ. ಆದರೆ ಇದರಿಂದ ಕೃಷ್ಣ ತೀವ್ರ ಅಸಮಾಧಾನಗೊಂಡಿದ್ದ.
ಫೆಬ್ರವರಿ 17 ರಂದು ಇಬ್ಬರೂ ಗೆಳೆಯರು ಮದ್ಯಪಾನ ಮಾಡಿ ಜಗಳವಾಡಿಕೊಂಡಿದ್ದರು. ಈ ವೇಳೆ ಕೃಷ್ಣ ನವೀನ್ ಕೊಲೆ ಮಾಡಿ ಆತನ ಮೃತದೇಹದ ಫೋಟೋ ಕ್ಲಿಕ್ಕಿಸಿ, ತನ್ನ ಗೆಳತಿಗೆ ವಾಟ್ಸಪ್ನಲ್ಲಿ ಕಳುಹಿಸಿದ್ದಾನೆ.
A young man who split his friend’s chest for girlfriend in hyderabad