ಉತ್ತರ ಪ್ರದೇಶ – ಸರ್ಕಾರಿ ಶಾಲೆಗೆ ಭೇಟಿ ನೀಡಲು ಆಗಮಿಸಿದ ದೆಹಲಿ ಡಿಸಿಎಂ ಸಿಸೋಡಿಯಾಗೆ ತಡೆ Sisodia stopped visiting school
ಲಕ್ನೋ, ಡಿಸೆಂಬರ್23: ಉತ್ತರ ಪ್ರದೇಶದ ಶಿಕ್ಷಣ ವ್ಯವಸ್ಥೆಯ ಸ್ಥಿತಿಯ ಬಗ್ಗೆ ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ನಡೆಯುತ್ತಿರುವ ಚರ್ಚೆಯು ಮಂಗಳವಾರ ಹೊಸ ತಿರುವು ಪಡೆದುಕೊಂಡಿದೆ. Sisodia stopped visiting school

ಎಎಪಿ ನಾಯಕ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಾಗಿರುವ ಮನೀಶ್ ಸಿಸೋಡಿಯಾ ಅವರು ಲಖನೌದಲ್ಲಿನ ಸರ್ಕಾರಿ ಶಾಲೆಗೆ ಭೇಟಿ ನೀಡುವುದನ್ನು ತಡೆಯಲಾಗಿದೆ.
ಯುಪಿ ಸಚಿವ ಸಿದ್ಧಾರ್ಥ್ ಎನ್ ಸಿಂಗ್ ಅವರು ದೆಹಲಿ ಮಾಡೆಲ್ ವರ್ಸಸ್ ಯೋಗಿ ಮಾಡೆಲ್ ಆಫ್ ಎಜುಕೇಶನ್
ಕುರಿತ ಚರ್ಚೆಗೆ ಸಿಸೋಡಿಯಾ ಸವಾಲು ಹಾಕಿದ್ದರು.
ಬಹಿರಂಗ ಚರ್ಚೆಗಾಗಿ ಲಕ್ನೋಗೆ ಬಂದಿದ್ದೇನೆ ಎಂದು ಸಿಸೋಡಿಯಾ ಹೇಳಿದ್ದಾರೆ. ಈಗ ನಾನು ಲಕ್ನೋ ಶಾಲೆಗೆ ಭೇಟಿ ನೀಡಲಿದ್ದೇನೆ ಎಂದು ಮನೀಶ್ ಸಿಸೋಡಿಯಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ಸಿಸೋಡಿಯಾ ಅವರು ಶಾಲೆಗೆ ಭೇಟಿ ನೀಡುವುದಕ್ಕೆ ಉತ್ತರ ಪ್ರದೇಶ ಪೊಲೀಸರು ತಡೆದಿದ್ದಾರೆ.
ಮನೀಶ್ ಸಿಸೋಡಿಯಾ ಅವರ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತರು , ದೆಹಲಿಯ ಉಪಮುಖ್ಯಮಂತ್ರಿ ತಮ್ಮ ನಿಗದಿತ ವೇಳಾಪಟ್ಟಿಯನ್ನು ಹೊರತುಪಡಿಸಿ ಯಾವುದೇ ಸ್ಥಳಕ್ಕೆ ಭೇಟಿ ನೀಡಲು ಪೂರ್ವಾನುಮತಿ ಬೇಕು ಎಂದು ಹೇಳಿದ್ದಾರೆ.
ಯುಪಿಯ ಶಿಕ್ಷಣ ಸಚಿವ ಸತೀಶ್ ದ್ವಿವೇದಿ, ಮನೀಶ್ ಸಿಸೋಡಿಯಾ ಅವರನ್ನು ಯುಪಿ ಯ ಸರ್ಕಾರಿ ಶಾಲೆಗೆ ಭೇಟಿ ನೀಡುವಂತೆ ಕೇಳಿದ ಕೆಲವೇ ದಿನಗಳ ನಂತರ ಈ ಘಟನೆ ನಡೆದಿದೆ.
ಸರ್ಕಾರಿ ಉದ್ಯೋಗದ ಸಾಮಾನ್ಯ ವರ್ಗ ಎಲ್ಲರಿಗೂ ಮುಕ್ತವಾಗಿವೆ – ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ನಾನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಿ ಮತ್ತು ಅವರ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಿ ಅವರನ್ನು ಉತ್ತರ ಪ್ರದೇಶದ ಶಾಲೆಗಳಿಗೆ ಭೇಟಿ ನೀಡಲು ಆಹ್ವಾನಿಸುತ್ತೇನೆ. ಆಗ ಅವರ ಕಣ್ಣು ತೆರೆಯುತ್ತದೆ ಎಂದು ಸತೀಶ್ ದ್ವಿವೇದಿ ಡಿಸೆಂಬರ್ 16 ರಂದು ಮಾಧ್ಯಮವೊಂದರಲ್ಲಿ ಹೇಳಿದ್ದರು.
ಮನೀಶ್ ಸಿಸೋಡಿಯಾ ಅವರಿಗೆ ಶಾಲೆಗೆ ಭೇಟಿ ಮಾಡಲು ಅನುಮತಿ ನಿರಾಕರಿಸಿದ್ದು, ಅವರು ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದಾರೆ. ಶಿಕ್ಷಣ ಸಚಿವ ಸತೀಶ್ ದ್ವಿವೇದಿ ಜಿ, ನೀವು ಶಾಲೆಗೆ ಹೋಗುವ ದಾರಿಯಲ್ಲಿ ನನ್ನನ್ನು ತಡೆಯಲು ಪೊಲೀಸ್ ಬಲವನ್ನು ಬಳಸಿದ್ದೀರಿ. ನಮ್ಮ ಶಾಲೆಗಳನ್ನು ನೋಡಿ ಎಂದು ನೀವು ಹೇಳಿದ್ದೀರಿ. ಈಗ ಲಕ್ನೋ ಶಾಲೆಗಳ ವಾಸ್ತವತೆ ಬಹಿರಂಗಗೊಳ್ಳುತ್ತದೆ ಎಂದು ನೀವು ಹೆದರಿದ್ದು, ನನ್ನನ್ನು ಪೊಲೀಸರ ನೆರವಿನಿಂದ ದಾರಿಯಲ್ಲಿ ತಡೆದಿದ್ದೀರಿ ಎಂದು ಹೇಳಿದ್ದಾರೆ.

ಶಾಲೆಗೆ ಭೇಟಿ ನೀಡಲು ಅವಕಾಶ ನಿರಾಕರಿಸಲಾಗಿದ್ದರೂ, ಮನೀಶ್ ಸಿಸೋಡಿಯಾ ಅವರು ಶಾಲೆಗೆ ಭೇಟಿ ನೀಡಲು ಹೋಗುತ್ತಿರುವ ದೃಶ್ಯವನ್ನು ವೀಡಿಯೊ ಮಾಡಿದ್ದು, ಅದನ್ನು ಟ್ವೀಟ್ ಮಾಡಿದ್ದಾರೆ.
ತನ್ನ ಟ್ವೀಟ್ ನಲ್ಲಿ, ಸಿಸೋಡಿಯಾ ಈ ಶಾಲೆ ಲಖನೌದಲ್ಲಿನ ಸಿಎಂ ಕಚೇರಿಯಿಂದ ಕೇವಲ ಎಂಟು ಕಿಲೋಮೀಟರ್ ದೂರದಲ್ಲಿದೆ ಎಂದು ಹೇಳಿದ್ದಾರೆ.
2022 ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಆಮ್ ಆದ್ಮಿ ಪಕ್ಷ ಘೋಷಿಸಿದೆ. ಚುನಾವಣಾ ಪ್ರಚಾರಕ್ಕಾಗಿ ಪಕ್ಷವು ಶಿಕ್ಷಣ ಸೇವೆ ಮತ್ತು ಆರೋಗ್ಯ ಮೂಲಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಹಾಲು ಬೆರೆಸದ ಚಹಾ ಅಥವಾ ಕಪ್ಪು ಚಹಾ ಎಷ್ಟು ಪ್ರಯೋಜನಕಾರಿ ಗೊತ್ತಾ ? https://t.co/VotFsVG3Ld
— Saaksha TV (@SaakshaTv) December 22, 2020
ಚೀನಾದಲ್ಲಿ ಹೆಚ್ಚು ಚರ್ಚಿಸಲಾಗುವ ಭಾರತದ ಶಸ್ತ್ರಾಸ್ತ್ರಗಳು ಯಾವುದೆಂದು ಗೊತ್ತಾ ?https://t.co/vtj3IfwWx4
— Saaksha TV (@SaakshaTv) December 22, 2020








