ಸಾಕ್ಷಾ ಟಿವಿಯ ಆರುವ ದೀಪಕ್ಕೆ ಬೆಂಬಲದ ಬೆಳಕು – ಅಂಕಣಕಾರರ ಕಿರು ಪರಿಚಯ Aaruva deepakke bembalada belaku intro
ನಮ್ಮ ಸಾಕ್ಷಾ ಟಿವಿಯಲ್ಲಿ “ಆರುವ ದೀಪಕ್ಕೆ ಬೆಂಬಲದ ಬೆಳಕು” ಕಾಲಂ ಬರೆಯುವ ಚೈತ್ರ ಕಬ್ಬಿನಾಲೆ ಅವರ ಕಿರು ಪರಿಚಯ Aaruva deepakke bembalada belaku intro
ಚೈತ್ರ ಕಬ್ಬಿನಾಲೆ – ಹುಟ್ಟಿದ್ದು ಪ್ರಕೃತಿಯ ಸೊಬಗಿನ ಮಲೆನಾಡಿನ ತಪ್ಪಲು ಗ್ರಾಮದಲ್ಲಿ..
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಾರಾಯಣ ಪೂಜಾರಿ ಮತ್ತು ಸರಸ್ವತಿ ಯವರ ಮಗಳಾದ ಚೈತ್ರ ಕಬ್ಬಿನಾಲೆ ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜೇರಕಾಡು ಉಡುಪಿ ಇಲ್ಲಿ ಎಂಕಾಂ ಪದವಿಯನ್ನು ಕಲಿಯುತಿದ್ದಾರೆ.
ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಅತ್ಯುತ್ತಮ ಕವಯಿತ್ರಿ ಎನಿಸಿಕೊಂಡಿರುವ ಚೈತ್ರ ಉತ್ತಮ ನೃತ್ಯಗಾರ್ತಿ ಕೂಡ ಹೌದು.
ಯಕ್ಷಗಾನವನ್ನು ಸಹ ಕಲಿತಿರುವ ಚೈತ್ರ ಕಬ್ಬಿನಾಲೆ ಬಿಡುವಿನ ಸಮಯವನ್ನು ಸಾಹಿತ್ಯ ಕ್ಷೇತ್ರ ದಲ್ಲಿ ತೊಡಗಿಸಿಕೊಂಡು, ಹಲವಾರು ವಿಡಿಯೋಗಳಿಗೆ ಸ್ವರ ತುಂಬುತ್ತಿರುವ ಪ್ರತಿಭೆ.
ತನ್ನ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಕಣಾರಬೆಟ್ಟು ನಲ್ಲಿ, ಪ್ರೌಢ ಶಿಕ್ಷಣವನ್ನು ಎಮ್ ಯೆನ್ ಡಿ ಎಸ್ ಎಮ್ ಅನುದಾನಿತ ಪ್ರೌಢಶಾಲೆ ಮುದ್ರಾಡಿ, ಪದವಿಪೂರ್ವ ಶಿಕ್ಷಣವನ್ನು ಅಮೃತಭಾರತಿ ಪಿ ಯು ಕಾಲೇಜು ಹೆಬ್ರಿ ಯಲ್ಲಿ ಮುಗಿಸಿ, ಪದವಿಯನ್ನು ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳದಲ್ಲಿ ಮುಗಿಸಿರುತ್ತಾರೆ.
ಎಂಕಾಂ ಪದವಿಯನ್ನು ಕಲಿಯುತ್ತಿರುವುದರ ಜೊತೆಗೆ,
ಸಾಹಿತ್ಯಾಸಕ್ತರ ಜೊತೆ ಸೇರಿ ಸಾಹಿತ್ಯ ಕೃಷಿ ಮಾಡುತ್ತಿರುವ ಚೈತ್ರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹೆಬ್ರಿ ಘಟಕದ ಸಂಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ