accident ಪಂಜಾಬ್ ದುರಂತ: ಭಾನುವಾರವಾದ್ದರಿಂದ ಮಕ್ಕಳೆಲ್ಲ ಮೋಜು ಮಸ್ತಿಯಲ್ಲಿದ್ದಾರೆ. ಈ ವೇಳೆ ಗೆಳೆಯರೊಬ್ಬರು ರೈಲ್ವೇ ಟ್ರಾಕ್ ಪಕ್ಕದಲ್ಲಿ ಬೆರಿ ಹಣ್ಣಿನ ಮರವಿದೆ, ಅಲ್ಲೇ ಕಟ್ ಮಾಡಿ ಚೆನ್ನಾಗಿ ತಿನ್ನಬಹುದು ಎಂದು .. ನಾಲ್ಕು ಮಕ್ಕಳು ಒಟ್ಟಿಗೆ ಅಲ್ಲಿಗೆ ಹೋಗಿದ್ದಾರೆ.
ಹಣ್ಣುಗಳನ್ನು ಕತ್ತರಿಸಿ ರೈಲ್ವೆ ಹಳಿ ಮೇಲೆ ಕುಳಿತು ತಿನ್ನುತ್ತಿದ್ದಾಗ ಅದೆ ಹಳಿಗೆ ಏಕಾಏಕಿ ಬಂದ ರೈಲು ಮೂವರು ಮಕ್ಕಳನ್ನು ಬಲಿ ತೆಗೆದುಕೊಂಡಿದೆ. ರೈಲು ಹಳಿ ಮೇಲೆ ಹಣ್ಣು ತಿನ್ನುತ್ತಿದ್ದ ಮೂವರು ಮಕ್ಕಳು ರೈಲು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದೆ. ಭಾನುವಾರ ಪಂಜಾಬ್ನ ಕಿರಾತ್ಪುರ ಸಾಹಿಬ್ನಲ್ಲಿ ಈ ದುರ್ಘಟನೆ ನಡೆದಿದೆ. ಪೊಲೀಸರ ಪ್ರಕಾರ, ರಥಪುರ ಸಾಹಿಬ್ನ ವಲಸೆ ಕಾರ್ಮಿಕರ ಕುಟುಂಬಗಳಿಗೆ ಸೇರಿದ 7 ರಿಂದ 11 ವರ್ಷ ವಯಸ್ಸಿನ ಮಕ್ಕಳು ಸಟ್ಲೇಜ್ ನದಿಯ ಲೋಹಾಂಡ್ ರೈಲ್ವೆ ಸೇತುವೆಯ ಬಳಿ ಹಣ್ಣುಗಳನ್ನು ಕೊಯ್ಯಲು ಹೋಗಿದ್ದರು.
Kirtarpur Sahib, Punjab | Three children dead, one injured in a train accident
2 children died on spot. One died on way to hospital. 4th one is being treated. Children had come here to eat berries off trees & did not realise a train was approaching them: ASI GRP, Jagjit Singh pic.twitter.com/SWZQQ0f2bu
— ANI (@ANI) November 27, 2022
ಬಳಿಕ ಹಣ್ಣುಗಳನ್ನು ಕತ್ತರಿಸಿ ರೈಲ್ವೆ ಹಳಿ ಮೇಲೆ ಕುಳಿತು ತಿನ್ನುದ್ದಾಗ. ಈ ವೇಳೆ ಹಿಂದಿನಿಂದ ಬಂದ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಹರಾನ್ಪುರದಿಂದ ಹಿಮಾಚಲ ಪ್ರದೇಶಕ್ಕೆ ಹೋಗುತ್ತಿದ್ದ ರೈಲು ನಾಲ್ವರು ಮಕ್ಕಳಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ನಂತರ ರೈಲು ನಿಂತಿತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರು ಗಮನಿಸಿ ಗಾಯಗೊಂಡ ಇಬ್ಬರು ಮಕ್ಕಳನ್ನು ಆನಂದಪುರ ಸಾಹಿಬ್ ಸಿವಿಲ್ ಆಸ್ಪತ್ರೆಗೆ ಧಾಖಲಿಸಿದ್ದಾರೆ.
ಪಂಜಾಬ್ನ ಎಎಪಿ ಸರ್ಕಾರವು ರೈಲು ಡಿಕ್ಕಿಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ ಘಟನೆಯ ಕುರಿತು ತನಿಖೆಗೆ ಆದೇಶಿಸಿದೆ. ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.