ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಜೈಲು ಸೇರಿದ ನಟಿ ರನ್ಯಾ ರಾವ್ ವಿರುದ್ಧದ ತನಿಖಾ ವರದಿ ಇಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಸಲ್ಲಿಕೆಯಾಗಿದೆ. ಗೌರವ್ ಗುಪ್ತ ಸಮಿತಿಯು ಈ 230 ಪುಟಗಳ ವಿಶೇಷ ವರದಿಯನ್ನು ಸಲ್ಲಿಸಿದ್ದು, ನಟಿಯ ಜೈಲು ಅನುಭವ ಹಾಗೂ ಅಕ್ರಮ ಕೃತ್ಯಗಳ ಬಗ್ಗೆ ಮಹತ್ವದ ವಿಚಾರಗಳನ್ನು ಬಹಿರಂಗಪಡಿಸಿದೆ.
ವರದಿಯಲ್ಲಿ, ನಟಿ ರನ್ಯಾ ರಾವ್ಗೆ ಶಿಷ್ಟಾಚಾರ ಸೌಲಭ್ಯ ನೀಡಲು ಡಿಜಿ ರಾಮಚಂದ್ರ ರಾವ್ ಸೂಚಿಸಿಲ್ಲ, ಆದರೆ ಅವರು ಪ್ರೋಟೋಕಾಲ್ ಬಳಸುತ್ತಿದ್ದುದಕ್ಕೆ ಸಾಕಷ್ಟು ಪುರಾವೆಗಳು ಲಭ್ಯ ಎಂದು ಉಲ್ಲೇಖಿಸಲಾಗಿದೆ. ಜೈಲು ಸೌಲಭ್ಯಗಳ ದುರುಪಯೋಗ, ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ, ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಮರು ತನಿಖೆ ಅಗತ್ಯವಿದೆ ಎಂಬ ನಿರ್ಧಾರಗಳೂ ವರದಿಯಲ್ಲಿ ಒಳಗೊಂಡಿವೆ.
ಈ ಪ್ರಕರಣ ಈಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಟಿ ರನ್ಯಾ ರಾವ್ಗೆ ಮುಂದೆ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ. ರಾಜ್ಯ ಸರ್ಕಾರ ಈ ವರದಿ ಮೇರೆಗೆ ಮುಂದಿನ ಕ್ರಮ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕು.