ಬೆಂಗಳೂರು: ರಾಜ್ಯ ರಾಜಕರಣದಲ್ಲಿ ಇಂದು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಬಾಂಬ್ ಸಿಡಿದಿದೆ. ಈ ಬಾಂಬ್ ಸಿಡಿಸಿದವರು ನೂತನ ಎಂಎಲ್ಸಿ ಸಿ.ಪಿ ಯೋಗೇಶ್ವರ್.
ವಿಧಾನಸೌಧದಲ್ಲಿ ಸಿ.ಪಿ ಯೋಗೇಶ್ವರ್ ಎಂಎಲ್ಸಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಅಡ್ಜಸ್ಟ್ ಮೆಂಟ್ ಬಾಂಬ್ ಸಿಡಿಸಿದ್ದಾರೆ.
ಸಿ.ಪಿ ಯೋಗೇಶ್ವರ್ ಸಿಡಿಸಿದ ಅಡ್ಜಸ್ಟ್ ಮೆಂಟ್ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಸಿಪಿವೈಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಗುಂಡಿಗೆ ಸಿಡಿಗುಂಡು ಹೊಡೆದಿದ್ದಾರೆ.
ಹಾಗಾದ್ರೆ ಏನದು ಅಡ್ಜಸ್ಟ್ ಮೆಂಟ್..!
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಅವರದ್ದು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್. ಡಿಕೆಶಿ ಹಾಗೂ ಹೆಚ್ಡಿಕೆ ಹೇಳಿದ ಕೆಲಸಗಳು ಸರ್ಕಾರದಲ್ಲಿ ಆಗುತ್ತಿವೆ.
ಡಿ.ಕೆ ಶಿವಕುಮಾರ್ ನೆಪ ಮಾತ್ರಕ್ಕೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಅವರು ರಾತ್ರಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಬಂದು ಕೆಲಸ ಮಾಡಿಸಿಕೊಂಡು ಹೋಗುವ ಮೂಲಕ ಅಡ್ಜಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ. ಹೀಗಾಗಿ ಡಿಕೆ ಶಿವಕುಮಾರ್ ಹೆಸರಿಗೆ ಮಾತ್ರ ಕಾಂಗ್ರೆಸ್ನವರು ಎಂದು ಬಾಂಬ್ ಸಿಡಿಸಿದ್ದಾರೆ.
ಇನ್ನು ,ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೂ ಟಾಂಗ್ ನೀಡಿರುವ ಯೋಗೇಶ್ವರ್, ಕುಮಾರಸ್ವಾಮಿ ಹೇಳಿದ ಎಲ್ಲಾ ಕೆಲಸಗಳು ನಮ್ಮ ಸರ್ಕಾರದಲ್ಲಿ ಆಗುತ್ತಿವೆ. ಹೀಗಾಗಿ ಅವರು ಬಿಜೆಪಿ ಸೇರ್ಪಡೆಯಾಗುವಂತೆ ಬಹಿರಂಗ ಆಹ್ವಾನ ನೀಡುತ್ತಿದ್ದೇನೆ. ಹೆಚ್ಡಿಕೆ ಬೆಂಬಲ ಬಿಜೆಪಿ ಸರ್ಕಾರಕ್ಕೆ ಇರುವ ಕಾರಣ ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಕೈಕಾಲು ಹಿಡಿದು ಕಾಂಗ್ರೆಸ್ಗೆ ಬರ್ತೀನಿ ಅಂದಿದ್ದ ಸಿ.ಪಿ ಯೋಗೇಶ್ವರ್..!
ಎಂಎಲ್ಸಿ ಸಿ.ಪಿ ಯೋಗೇಶ್ವರ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ. 15 ದಿನಗಳ ಹಿಂದೆ ಸಿ.ಪಿ ಯೋಗೇಶ್ವರ್ ಬಂದು ನನ್ನ ಕಾಲು ಹಿಡಿದುಕೊಂಡಿದ್ದ. ಎಷ್ಟು ಹೇಳಿದರೂ ನನ್ನ ಪಾದ ಬಿಡಲೇ ಇಲ್ಲ. ಸ್ವಲ್ಪ ದಿನದಲ್ಲೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುತ್ತಾರೆ. ಹೀಗಾಗಿ ನಾನು ಕಾಂಗ್ರೆಸ್ ಬರುತ್ತೇನೆ, ನನ್ನನ್ನು ಸೇರಿಸಿಕೊಳ್ಳಿ ಎಂದು ಗೋಗರೆದಿದ್ದ ಎಂದು ಡಿಕೆಶಿ ಡಿಚ್ಚಿ ಕೊಟ್ಟಿದ್ದಾರೆ.
ಕಾಂಗ್ರೆಸ್ ಬರ್ತೀನಿ ಅಂದ ಸಿ.ಪಿ ಯೋಗೇಶ್ವರ್ಗೆ ನಾನೇ ಬುದ್ದಿವಾದ ಹೇಳಿ ಕಳಿಸಿದೆ. ನೀನು ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದೀಯ. ಆ ಪಕ್ಷಕ್ಕೆ ನೀನು ನಿಷ್ಟನಾಗಿರು ಎಂದು ಬುದ್ದಿ ಹೇಳಿ ವಾಪಸ್ ಕಳಿಸಿದೆ. ಈಗ ಹಾಗೆ ಯಾಕೆ ಹೀಗೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಡಿ.ಕೆ ಶಿವಕುಮಾರ್ ಪ್ರತಿಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಬರುವೆ ಎಂದು ಯೋಗೇಶ್ವರ್ ಹೇಳಿದಾಗ ನಾನು ಕೂಡ ಅಲ್ಲೇ ಇದ್ದೆ ಎಂದು ಕಾಂಗ್ರೆಸ್ ಎಂಎಲ್ಸಿ ನಾರಾಯಣಸ್ವಾಮಿ ಖಚಿತಪಡಿಸಿದ್ದಾರೆ. ಯೋಗೇಶ್ವರ್ ಅವರು ಡಿಕೆಶಿ ಮನೆಗೆ ಬಂದಾಗ ನಾನೂ ಕೂಡ ಇದ್ದೆ ಎಂದಿದ್ದಾರೆ.