ಶಿವಾಜಿ ಮಹರಾಜರ ಪಾತ್ರದಲ್ಲಿ ಆಕ್ಷಯ್ – ಮರಾಠಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ…
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮರಾಠಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ಛತ್ರಪತಿ ಶಿವಾಜಿ ಮಹಾರಾಜ ಪಾತ್ರದಲ್ಲಿ ನಟಿಸುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಷಯ ,ಇದೀಗ ಅಕ್ಷಯ್ ಕುಮಾರ್ ಅವರ ಮುಂದಿನ ಚಿತ್ರ ‘ವೇದತ್ ಮರಾಠೆ ವೀರ್ ದೌಡ್ಲೆ ಸಾತ್’ ಚಿತ್ರದ ಲುಕ್ ಬಿಡುಡಗಡೆಯಾಗಿದೆ.
ನಟ ಅಕ್ಷಯ್ ಕುಮಾರ್ ಸ್ವತಃ ಶಿವಾಜಿ ಮಹಾರಾಜರ ಲುಕ್ ನಲ್ಲಿ ಕಾಣಿಸಿಕೊಂಡಿರುವ ಝಲಕ್ ಅನ್ನ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಂಗಳವಾರದಿಂದ ಚಿತ್ರದ ಶೂಟಿಂಗ್ ಶುರುವಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಸುದ್ದಿಯನ್ನು ಹಂಚಿಕೊಂಡ ಅಕ್ಷಯ್, “ಇಂದು ಮರಾಠಿ ಚಿತ್ರ ‘ವೇದತ್ ಮರಾಠೆ ವೀರ್ ದೌಡ್ಲೆ ಸಾತ್’ ಚಿತ್ರೀಕರಣವನ್ನ ಪ್ರಾರಂಭಿಸುತ್ತಿದ್ದೇನೆ, ಇದರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಜಿ ಪಾತ್ರವನ್ನು ನಿರ್ವಹಿಸುವ ಅದೃಷ್ಟ ನನ್ನದಾಗಿದೆ. ನಾನು ಅವರಿಂದ ಸ್ಫೂರ್ತಿ ಪಡೆಯಲು ಪ್ರಯತ್ನಿಸುತ್ತೇನೆ. ಜೀವನ ಮತ್ತು ಮಾ ಜಿಜೌ ಅವರ ಆಶೀರ್ವಾದ! ನಮ್ಮನ್ನು ಆಶೀರ್ವದಿಸುತ್ತಿರಿ ಎಂದು ಟ್ವೀಟ್ ಮಾಡಿದ್ದಾರೆ.
https://www.instagram.com/p/Cl0QVWUDeIU/?utm_source=ig_embed&utm_campaign=embed_video_watch_again
ಅಕ್ಷಯ್ ಹೊರತಾಗಿ, ‘ವೇದತ್ ಮರಾಠೆ ವೀರ್ ದೌಡ್ಲೆ ಸಾತ್’ ಚಿತ್ರವು ಜಯ್ ದುಧಾನೆ, ಉತ್ಕರ್ಷ ಶಿಂಧೆ, ವಿಶಾಲ್ ನಿಕಮ್, ವಿರಾಟ್ ಮಡ್ಕೆ, ಹಾರ್ದಿಕ್ ಜೋಶಿ, ಸತ್ಯ, ಅಕ್ಷಯ್, ನವಾಬ್ ಖಾನ್ ಮತ್ತು ಪ್ರವೀಣ್ ತಾರ್ಡೆ ಒಳಗೊಂಡಿರುವ ತಾರಾಗಣವನ್ನು ಹೊಂದಿದೆ.
ಇದಕ್ಕೂ ಮುನ್ನ ತಮ್ಮ ಮರಾಠಿ ರಂಗಪ್ರವೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅಕ್ಷಯ್, “ಇದು ನನ್ನ ಕನಸು ನನಸಾಗಿರುವ ಪಾತ್ರವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರನ್ನು ದೊಡ್ಡ ಪರದೆಯ ಮೇಲೆ ಚಿತ್ರಿಸುವುದು ಬಹಳ ದೊಡ್ಡ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ಈ ಪಾತ್ರವನ್ನು ನಿರ್ವಹಿಸುವಂತೆ ರಾಜ್ ಸರ್ ನನ್ನನ್ನು ಕೇಳಿದಾಗ ನಾನು ದಿಗ್ಭ್ರಮೆಗೊಂಡೆ. . ಈ ಪಾತ್ರವನ್ನು ನಿರ್ವಹಿಸುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಮತ್ತು ಇದು ನನ್ನ ಕನಸು ನನಸಾಗುವ ಪಾತ್ರವಾಗಲಿದೆ. ಅಲ್ಲದೆ, ನಾನು ಮೊದಲ ಬಾರಿಗೆ ನಿರ್ದೇಶಕ ಮಹೇಶ್ ಮಂಜ್ರೇಕರ್ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
‘ವೇದತ್ ಮರಾಠೆ ವೀರ್ ದೌಡಲೇ ಸಾತ್’ ಚಿತ್ರವನ್ನು ಮಹೇಶ್ ಮಂಜ್ರೇಕರ್ ನಿರ್ದೇಶಿಸುತ್ತಿದ್ದು, ಮತ್ತು ವಸೀಮ್ ಖುರೇಷಿ ನಿರ್ಮಿಸಿದ್ದಾರೆ. ಇದು ಮರಾಠಿ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ 2023 ರ ದೀಪಾವಳಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.
Akshay Kumar : Akshay in the role of Shivaji Maharaj – Marathi movie first look release…