ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನಿಮಗಿದು ಗೊತ್ತಾ..? ಗಗನ ಸಖಿಯರು ಯಾಕೆ ಕೈ ಹಿಂದೆ ಕಟ್ಟಿರುತ್ತಾರೆ..? ಪೊಲೀಸರೇಕೆ ಖಾಕಿ ಬಣ್ಣದ ಸಮವಸ್ತ್ರವನ್ನೇ ಧರಿಸುತ್ತಾರೆ..? ವೈದ್ಯರು ಏಕೆ ಶ್ವೇತ ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ..?

Namratha Rao by Namratha Rao
August 29, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ನಿಮಗಿದು ಗೊತ್ತಾ..? ಗಗನ ಸಖಿಯರು ಯಾಕೆ ಕೈ ಹಿಂದೆ ಕಟ್ಟಿರುತ್ತಾರೆ..? ಪೊಲೀಸರೇಕೆ ಖಾಕಿ ಬಣ್ಣದ ಸಮವಸ್ತ್ರವನ್ನೇ ಧರಿಸುತ್ತಾರೆ..? ವೈದ್ಯರು ಏಕೆ ಶ್ವೇತ ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ..?

ಗಗನಸಖಿಯರು ಯಾಕೆ ವಿಮಾನಕ್ಕೆ ಪ್ರಯಾಣಿಕರು ಹತ್ತಬೇಕಾದ್ರೆ ಸದಾ ತಮ್ಮ ಕೈಗಳನ್ನ ಹಿಂದೆ ಕಟ್ಟಿರುತ್ತಾರೆ. ಎಲ್ಲರು ಅಂದುಕೊಂಡಿರುವಂತೆ ಅವರು ತಮ್ಮ ಕೈಗಳನ್ನ ಹಿಂದೆ ಕಟ್ಟುವುದು ಪ್ರಯಾಣಿಕರಿಗೆ ಗೌರವ ಸೂಚಿಸೋಕೆ ಅಲ್ಲ. ಹಾ ಅದು ಪ್ರಯಾಣಿಕರನ್ನ ಆಹ್ವಾನಿಸುವ ಒಂದು ಸೌಜನ್ಯಕರ ವಿಧಾನ ಅಷ್ಟೇ. ಆದ್ರೆ ಅಸಲಿಗೆ ಅವರು ಕೈಗಳನ್ನ ಹಿಂದೆ ಕಟ್ಟಿ ಪ್ರಯಾಣಿಕರ ಸಂಖ್ಯೆಯನ್ನ ಎಣಿಸುತ್ತಿರುತ್ತಾರೆ. ಗಗನಸಖಿಯರು ಅಥವ ಫ್ಲೈಟ್ ಅಟೆಂಡರ್ಸ್ ಗೆ ಟ್ರೈನಿಂಗ್ ವೇಳೆ ಈ ಟೆಕ್ನಿಕ್ ಅನ್ನ ಹೇಳಿಕೊಡಲಾಗಿರುತ್ತೆ.

Related posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

March 21, 2026
ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

March 21, 2026

ಇನ್ನೂ ನಮ್ಮ ದೇಶದ ಅವಿಭಾಜ್ಯ ಅಂಗ. ಹಗಲಿರುಳು ಅಪರಾಧಗಳನ್ನ ತಡೆದು ನಮಗೆ ರಕ್ಷಣೆ ಕೊಡಲು ಶ್ರಮಿಸುವ ಪೊಲೀಸರು ಯಾಕೆ ಖಾಕಿ ಬಣ್ಣದ ಸಮವಸ್ತ್ರವನ್ನೇ ಧರಿಸುತ್ತಾರೆ. ಅದಕ್ಕೂ ಮೊದಲು ಪೊಲೀಸರು ಯೂನಿಪಾರ್ಮ್ ಧರಿಸುವ ಪದ್ದತಿ ಶುರುವಾಗಿದ್ದು ಯಾವಾಗಿನಿಂದ ಅನ್ನುವುದನ್ನ ನೋಡೋಣ. ಬಿಪಿಆರ್ ಡಿ ವರದಿಯ ಅನುಸಾರ ಮೊದಲ ಬಾರಿಗೆ ಪೊಲೀಸರು ಸಮವಸ್ತ್ರ ಧರಿಸಲು ಶುರುಮಾಡಿದ್ದು ಲಂಡನ್ ನಲ್ಲಿ 1820ರಲ್ಲಿ. ಆ ಸಮಯದಲ್ಲಿ ಅವರ ಯೂನಿಫಾರ್ಮ್ ನ ಬಣ್ಣ ಡಾರ್ಕ್ ಬ್ಲೂ ಇತ್ತು. ಇದಾದ ನಂತರ ಇತರೇ ರಾಷ್ಟ್ರಗಳಲ್ಲಿ ಪೊಲೀಸರಿಗೆ ಸಮವಸ್ತ್ರ ಜಾರಿಗೊಳಿಸಲು ಅಲ್ಲಿನ ಸರ್ಕಾರಗಳು ಆರಂಭಿಸಿದವು. ಈಗ ನಾವು ಭಾರತದಲ್ಲಿ ಪೊಲೀಸರ ಸಮವಸ್ತ್ರದ ಬಣ್ಣ ಯಾಕೆ ಖಾಕಿಯೇ ಎನ್ನುವುದನ್ನ ನೋಡೋದಾದ್ರೆ , ಬ್ರಿಟೀಷರು ಭಾರತವನ್ನ ಆಕ್ರಮಿಸಿಕೊಂಡಿದ್ದ ವೇಲೆ ಪೊಲೀಸರ ಸಮವಸ್ತ್ರದ ಬಣ್ಣ ಬಿಳಿಯಿತ್ತು. ಆದ್ರೆ ಈ ಬನ್ಣದ ಯೂನಿಪಾರ್ಮ್ ಬೇಗನೇ ಕೊಳೆಯಾಗ್ತಿದ್ದ ಹಿನ್ನೆಲೆ ಖಾಕಿ ಬಣ್ಣದ ಸಮವಸ್ತ್ರವನ್ನ ಆಗಿನ ಬ್ರಟೀಷ್ ಅಧಿಕಾರಿಗಳು ಜಾರಿಗೆ ತಂದಿದ್ದರು. ವಿಶೇಷ ಅಂದ್ರೆ ಅಧಿಕಾರಿಗಳಿಗೆ ಈ ಸಮವಸ್ತ್ರದ ಬಣ್ಣ ಖಾಕಿಗೆ ತಿರುತ್ತದೆ ಎನ್ನುವ ವಿಚಾರ ಗೊತ್ತಿರಲಿಲ್ಲ. ಅಸಲಿಗೆ ಯಾವುದಾದರೂ ಒಂದು ಬಣ್ಣವನ್ನ ಸಮವಸ್ತ್ರಕ್ಕಾಗಿ ಬಳಸಬೇಕು ಎಂದು ಹೊರಟಿದ್ದ ಅಧಿಕಾರಿಗಳು ಟೀಸಪ್ಪನ್ನ ಬಳಸಿ ಒಂದು ಬಣ್ಣದಿಂದ ಸಮವಸ್ತ್ರ ತಯಾರಿಸಿದಾಗ ಅದು ಖಾಕಿ ಬಣ್ಣದಲ್ಲಿತ್ತು. ಆಗ ಅದನ್ನೇ ಪ್ರತಿ ಪೊಲೀಸ್ ಅಧಿಕಾರಿಯ ಸಮವಸ್ತ್ರವಾಗಿ ಜಾರಿಗೊಳಿಸಲಾಯ್ತು.

ಭಾನುವಾರವೇ ರಜೆ ಯಾಕೆ..?
ಹಿರಿಯರಿಂದ ಹಿಡಿದು ಮಕ್ಕಳವರೆಗೂ ಎಲ್ಲರೂ ಭಾನುವಾರಕ್ಕಾಗಿ ಕಾಯುತ್ತಿರುತ್ತಾರೆ. ಕಾರಣ ಅಂದು ಎಲ್ಲರಿಗೂ ರಜೆ ಇರುತ್ತೆ ಅಂತ. ಆದ್ರೆ ವಾರದಲ್ಲಿ 7 ದಿಗಳಿದ್ರೂ ಯಾಕೆ ಭಾನುವಾರವೇ ರಜೆಯಿರುತ್ತೆ ಗೊತ್ತಾ.. ಭಾರತದಲ್ಲಿ ಬ್ರಿಟೀಷರ ಆಡಳಿತವಿದ್ದ ಕಾಲದಲ್ಲಿ ಭಾರತೀಯ ಪುರುಷ ಕಾರ್ಮಿಕರು ಯಾವುದೇ ರಜೆಗಳಲ್ಲಿದೇ ನಿರಂತರ ಕೆಲಸ ಮಾಡಬೇಕಾಗಿತ್ತು. ಆದ್ರೆ ಬ್ರಟೀಷ್ ಅಧಿಕಾರಿಗೆ ಮಾತ್ರ ವಾರದಲ್ಲಿ ಒಂದು ದಿನ ರಜೆ ಇರುತಿತ್ತು. ಆದ್ರೆ ಆಗಿನ ಪುರುಷ ಕಾರ್ಮಿಕರ ನಾಯಕರಾಗಿದ್ದ ನಾರಾಯಣ್ ಮೇಘಾಜಿ ಲೋಕಾಂಡೆ ಅವರು ಬ್ರಿಟೀಷರ ಮುಂದೆ ಒಂದು ದಿನದ ರಜೆಯ ಪ್ರಸ್ತಾವನೆಯನ್ನ ಇಟ್ಟಿದ್ದರು. ವಾರದಲ್ಲಿ 6 ದಿನಗಳ ಕಾಲ ಮಾತ್ರವೇ ಕೆಲಸ ಮಾಡಿಸಿ ಒಂದು ದಿನ ರಜೆ ನೀಡಬೇಕು ಎಂದು ಒತ್ತಾಯಿಸಿದ್ರು. ಆದ್ರೆ ಬ್ರಿಟೀಷರು ಈ ಪ್ರಸ್ತಾವನೆಯನ್ನ ತಿರಸ್ಕರಿಸಿದ್ದರು. ಆದರೂ ಲೋಕಾಂಡೆಯವರು ಪದೇ ಪದೇ ತಮ್ಮ ಪ್ರಸ್ತಾವನೆಯನ್ನ ಸಲ್ಲಿಸುತ್ತಲೇ ಬಂದಿದ್ದರು. ಇದಾದ ಬಳಿಕ ಅಂದ್ರೆ 7 ವರ್ಷಗಳ ಸಂಘರ್ಷದ ಬಳಿಕ 1890 ರಲ್ಲಿ ಬ್ರಿಟೀಷ್ ಸರ್ಕಾರವು ಬಾನುವಾರ ರಜಾ ದಿನವಾಗಿ ಘೋಷಣೆ ಮಾಡಿತ್ತು. ಆಗಿನಿಂದ ಎಲ್ಲಾ ನೌಕರರಿಗೂ, ಪ್ರತಿ ವಾರದ ಭಾನುವಾರದಂದು ರಜೆ ನೀಡುವ ಪದ್ದತಿ ಜಾರಿಗೆ ಬಂತು. ಆದ್ರೆ ಬಾನುವಾರವೇ ಯಾಕೆ ಅಂದ್ರೆ ಆಗ ಬ್ರಟೀಷ್ ಅಧಿಕಾರಿಗಳು ಭಾನುವಾರದಂದು ಚರ್ಚ್ ಗಳಿಗೆ ತೆರಳಲು ರಜೆ ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಕಾರ್ಮಿಕರಿಗೂ ಭಾನುವಾರವೇ ರಜೆ ನಿಗದಿ ಮಾಡಲಾಗಿತ್ತು.

ವಕೀಲರು ಯಾಕೆ ಕಪ್ಪು ಕೋಟ್ ಧರಿಸುತ್ತಾರೆ.
ವಕೀಲರು ಅಂದ ತಕ್ಷಣ ಕಣ್ಣಮುಂದೆ ಕಪದಪು ಕೋಟ್ ಬರುತ್ತೆ. ಆದ್ರೆ ಯಾಕೆ ವಕೀಲರು ವಕಾಲತ್ತಿನ ವೇಳೆ ಕಪ್ಪು ಕೋಟ್ ಅನ್ನೇ ಧರಿಸುತ್ತಾರೆ. ಈ ವಿಚಾರ ಯಾರಿಗೂ ಗೊತ್ತಿರುವುದಿಲ್ಲ. ಅಷ್ಟಕ್ಕೂ ಇದು ಶುರುವಾಗಿದ್ದು 1327 ರಲ್ಲಿ. ಮೊದಲ ಬಾರಿಗೆ ಎಡ್ವರ್ಟ್ ಎಂಬಾತ ವಕಾಲತ್ತು ಮಾಡಲು ಶುರು ಮಾಡಿದ್ದರು. ಅಲ್ಲಿಂದಲೇ ವಕೀಲರ ಸಮವಸ್ತ್ರ ಅಥವ ಡ್ರೆಸ್ ಕೋಡ್ ನಿರ್ಧಾರವಾಗಿತ್ತು. ಆದ್ರೆ ಮೊದಲಿಗೆ ವಕೀಲರು ವಾದ ಮಂಡಿಸುವಾದ ಗುಲಾಬಿ ಬಣ್ನದ ಗೌನ್ ಧರಿಸುತ್ತಿದ್ದರು. ಇನ್ನೂ ಆ ಕಾಲದಲ್ಲಿ ನ್ಯಾಯಾಧೀಶರು ಒಂದು ದೊಡ್ಡ ಬಿಳಿ ಬಣ್ಣದ ವಿಗ್ ಗಳನ್ನ ಧರಿಸುತ್ತಿದ್ದರು. ಇದಾದ ಬಳಿಕ ಸಾಕಷ್ಟು ಚರ್ಚಾ ವಿಚಾರಗಳ ಬಳಿಕ ಕಪ್ಪು ಕೋಟ್ ಧರಿಸುವ ತೀರ್ಮಾನವನ್ನ ಬ್ರಟೀಷರ ಕಾಲದಲ್ಲಿ ತೆಗೆದುಕೊಳ್ಳಲಾಗಿತ್ತು.

Tags: #saakshatvamazing factsDoctorsindiapolice
ShareTweetSendShare
Join us on:

Related Posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

by Shwetha
March 21, 2026
0

ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವರನ್ನು...

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

by Shwetha
March 21, 2026
0

ಬೆಂಗಳೂರು ನಗರದ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ದಿಶೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಟೆಂಡರ್ ಆಹ್ವಾನಿಸಿದೆ. ಈ ಕುರಿತು ಎಮ್. ಬಿ. ಪಾಟೀಲ್ ಪ್ರತಿಕ್ರಿಯಿಸಿ,...

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

by Shwetha
March 21, 2026
0

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಕಾರ್ಮೋಡದ ನಡುವೆಯೇ ಇರಾನ್ ಜಗತ್ತಿನ ಪ್ರಮುಖ ವಾಣಿಜ್ಯ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಇದು ಜಾಗತಿಕ...

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

by Shwetha
March 21, 2026
0

ಬೆಂಗಳೂರು: ಅಡುಗೆ ಅನಿಲ ಗ್ರಾಹಕರಿಗೆ ತೈಲ ಕಂಪನಿಗಳು ಮಹತ್ವದ ಸುದ್ದಿಯೊಂದನ್ನು ನೀಡಿದ್ದು ಸಿಲಿಂಡರ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ನೀವು ಇದುವರೆಗೆ ನಿಮಗೆ ಇಷ್ಟ ಬಂದ...

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

by Shwetha
March 21, 2026
0

ಬೆಂಗಳೂರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕೇವಲ ತನ್ನ ಪಕ್ಷದ ಹೈಕಮಾಂಡ್‌ಗೆ ಹಣ ಒದಗಿಸುವ ಮೂಲವನ್ನಾಗಿ ಮಾಡಿಕೊಂಡಿದೆ ಎಂದು ದಿವಂಗತ ಕೇಂದ್ರ ಸಚಿವ ಹಾಗೂ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram