ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನವು ಉಡುಪಿಯಿಂದ 3 ಕಿಮೀ ಮತ್ತು ಮಂಗಳೂರಿನಿಂದ 65 ಕಿಮೀ ದೂರದಲ್ಲಿದೆ. ಈ ದೇವಾಲಯದ ಸಂಕೀರ್ಣದಲ್ಲಿ ಜನಾರ್ದನ (ಕೃಷ್ಣ) ದೇವಸ್ಥಾನವಿದೆ. ಇದು ಕ್ರಿ.ಶ.16ನೇ ಶತಮಾನದಷ್ಟು ಹಿಂದಿನ ಪುರಾತನ ದೇವಾಲಯವಾಗಿದೆ.ಈ ದೇವಾಲಯವು ಪ್ರಸಿದ್ಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆಯುತ್ತಿದೆ.
– ಈ ದೇವಾಲಯವು ಶತ ಶತಮಾನಗಳ ಹಿಂದೆ ಅಂಬಲಪಾಡಿ ಜೈನ ಬಲ್ಲಾಳರ ಅಧೀನದಲ್ಲಿ ಇತ್ತು. ಆ ಕಾಲದಲ್ಲಿ ಇದನ್ನು ನಿಡಂಬೂರು ಎಂದು ಕರೆಯಲಾಗುತ್ತಿತ್ತು.
-ಅಂಬಲಪಾಡಿ ಜೈನರ ಸಾಮ್ರಾಜ್ಯವಾಗಿತ್ತು. ತಮ್ಮ ಯಶಸ್ಸಿಗಾಗಿ ರಾಜ ಮಹಾರಾಜರು ಶಕ್ತಿದೇವತೆಯ ಪೂಜೆಯನ್ನು ಮಾಡುವುದು ಇಲ್ಲಿ ವಾಡಿಕೆಯಾಗಿತ್ತು,
ಬಲ್ಲಾಳನು ಅಂಬಲಪಾಡಿಯಲ್ಲಿ ಮಹಾಕಾಳಿಯನ್ನು ಪ್ರತಿಷ್ಠಾಪಿಸುತ್ತಾನೆ. ಕುಲದೇವತೆಯಂತೆ ಪ್ರತಿ ದಿನ ಪೂಜಿಸಲು ಆರಂಭಿಸುತ್ತಾನೆ.
-ಪಾರ್ವತಿಯ ರೂಪವಾದ ಕಾಳಿಯ ಜೊತೆಯಲ್ಲಿ ವಿಷ್ಣುವಿನ ದೇವಾಲಯ ಇರುವುದು ಇಲ್ಲಿನ ವಿಶೇಷ.
-ತದನಂತರದಲ್ಲಿ ಕಂದಾವರದ ಉಡುಪರು ದೇವಾಲಯ ನವೀಕರಣ ಮಾಡಿಸಿ ತಮ್ಮ ಕುಲದೈವವಾದ ಜನಾರ್ದನರ ಪ್ರತಿಷ್ಠೆ ಮಾಡುತ್ತಾರೆ. ತದ ನಂತರ ಈ ದೇವಿಯನ್ನು ಜನರು ಗ್ರಾಮದೇವತೆಯಾಗಿ ಪೂಜಿಸಲು ಆರಂಭಿಸಿದರು.
ಈ ದೇವಸ್ಥಾನದ ಮೂಲ ಹೆಸರು ಅಮ್ಮನ ಪಾಡಿ, ಕ್ರಮೇಣ ಈ ಹೆಸರು ಅಂಬಲಪಾಡಿ ಎಂದು ಬದಲಾಯ್ತು ಎಂದು ತಿಳಿದುಬರುತ್ತದೆ.
ಅಂಬಲಪಾಡಿ ಎಂಬ ಹೆಸರು ‘ಅಂಬಾ’ (ತಾಯಿ) ಮತ್ತು ‘ಪಾಡಿ’ (ಬೆಟ್ಟದ ತುದಿ) ಪದಗಳಿಂದ ಬಂದಿದೆ. ಪ್ರಾರಂಭದಲ್ಲಿ, ಮಹಾಕಾಳಿ ದೇವಿಯನ್ನು ಕಲ್ಲಿನಲ್ಲಿ ಪೂಜಿಸಲಾಗುತ್ತಿತ್ತು. ನಂತರ, ಮರದ ವಿಗ್ರಹವನ್ನು ಸ್ಥಾಪಿಸಲಾಯಿತು. ಈ ದೇವಾಲಯವು ಸುಮಾರು 6 ಅಡಿ ಎತ್ತರದ ಮಹಾಕಾಳಿ ದೇವಿಯ ವಿಗ್ರಹವನ್ನು ಹೊಂದಿದೆ.
ಜನಾರ್ಧನ ದೇವಾಲಯದ ಮಹತ್ವ:
ಅಂಬಲಪಾಡಿಯ ಜನಾರ್ಧನ ದೇವಾಲಯವು ಪಶ್ಚಿಮಾಭಿಮುಖ ಶ್ರೀ ಕೃಷ್ಣನ ದೇವಾಲಯಕ್ಕೆ ಪೂರ್ವಾಭಿಮುಖವಾಗಿದೆ. ಜನಾರ್ಧನ ದೇವಾಲಯದ ಪಕ್ಕದಲ್ಲಿಯೇ ಮಹಾಕಾಳಿ ದೇವಿಯ ಮಂದಿರವಿದೆ. ಭಕ್ತರು ತಮ್ಮ ಪಾಪಗಳಿಂದ ಮುಕ್ತಿ ಹೊಂದಲು ಮತ್ತು ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಲು ಮಹಾಕಾಳಿ ದೇವಿಯ ಬಳಿಗೆ ಬರುತ್ತಾರೆ.
ಮಂಗಳವಾರ, ಶುಕ್ರವಾರ, ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಇಲ್ಲಿ ಬಂದು ದೇವರ ದರ್ಶನ ಮಾಡಿ ಪೂಜೆ ಮಾಡಿದಲ್ಲಿ ವಿಶೇಷವಾದ ಫಲಗಳು ದೊರೆಯುತ್ತವೆ. ದೀಪ ನಮಸ್ಕಾರದಿಂದ ಕುಟುಂಬದ ಆದಾಯದಲ್ಲಿ ಹೆಚ್ಚಳ ಉಂಟಾಗುತ್ತದೆ ಎಂದು ನಂಬಲಾಗಿದೆ.
ದೇವಾಲಯದ ವಿಶೇಷತೆಗಳು:
– ಶುಕ್ರವಾರದಂದು ಕುಂಕುಮಾರ್ಚನೆ ಮಾಡಿಸಿ ಅನ್ನದಾನ ಮಾಡಿಸಿದಲ್ಲಿ ಕುಟುಂಬದಲ್ಲಿ ಸಾಮರಸ್ಯ ಉಂಟಾಗುವುದಲ್ಲದೆ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಶನಿವಾರದಂದು ಶ್ರೀ ಆಂಜನೇಯಸ್ವಾಮಿ ಪೂಜೆ ಮಾಡಿಸಿದಲ್ಲಿ ಮಕ್ಕಳ ವಿಧ್ಯಾಭ್ಯಾಸದಲ್ಲಿ ಉನ್ನತಿ ಕಂಡುಬರುತ್ತದೆ. ಜನ್ಮದಿನದ ತಿಥಿಯಂದು ಮಹಾಕಾಳಿಗೆ ಪೂಜೆಮಾಡಿಸಿದಲ್ಲಿ ಅಪಮೃತ್ಯು ಪರಿಹಾರವಾಗುತ್ತದೆ.
– ಗುರುವಾರದಂದು ಅಮ್ಮನವರ ಸೇವೆ ಮಾಡಿದಲ್ಲಿ ಸಂತಾನ ಲಾಭ ಉಂಟಾಗುತ್ತದೆ. ಮಂಗಳವಾರದ ಪೂಜೆಯಿಂದ ದಾಂಪತ್ಯದಲ್ಲಿ ಸುಖ ಶಾಂತಿ ಲಭಿಸುತ್ತದೆ. ಈ ಕ್ಷೇತ್ರದಲ್ಲಿ ಕುಳಿತು ದುರ್ಗಾಸಪ್ತಶತಿ ಪಾರಾಯಣ ಮಾಡಿದಲ್ಲಿ ಅಥವಾ ಪಾರಾಯಣ ಮಾಡಿಸಿದಲ್ಲಿ ಮನೆಯಲ್ಲಿ ಋಣಾತ್ಮಕ ಶಕ್ತಿ ಮರೆಯಾಗುತ್ತದೆ. ಪ್ರತಿ ಶುಕ್ರವಾರ ಭಕ್ತಾದಿಗಳು ದೇವರಲ್ಲಿ ತಮ್ಮ ತೊಂದರೆಯನ್ನು ಪ್ರಶ್ನೆಯ ಮುಖಾಂತರ ಕೇಳಬಹುದು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಪ್ರತಿ ಶುಕ್ರವಾರ ಸಂಜೆ, ದೇವಿಯು ಪಾತ್ರಿ ಎಂಬ ವ್ಯಕ್ತಿಯ ಮೂಲಕ ಭಕ್ತರೊಂದಿಗೆ ಮಾತನಾಡುತ್ತಾಳೆ. ಈ ವಿಶೇಷ ಘಟನೆಯು ಭಕ್ತರಿಗೆ ತಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತದೆ. ನವರಾತ್ರಿ ಸಮಯದಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ.
ಅಂಬಲಪಾಡಿಯ ಧಾರ್ಮಿಕ ಮಹತ್ವ:
ಅಂಬಲಪಾಡಿಯು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವೆಗಳಲ್ಲಿ ಪ್ರಮುಖ ಪಾತ್ರವಹಿಸಿದೆ. ದೇವಾಲಯವು ಉಚಿತ ಶಿಕ್ಷಣ, ಸಮಾಜ ಸೇವೆ, ಕಲೆ, ಯಕ್ಷಗಾನ, ಸಂಗೀತ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುತ್ತದೆ.
ಅಂಬಲಪಾಡಿಯ ಜನಾರ್ದನ ಶ್ರೀ ಮಹಾಕಾಳಿ ದೇವಾಲಯವು ತನ್ನ ಇತಿಹಾಸ, ಧಾರ್ಮಿಕ ಮಹತ್ವ ಮತ್ತು ಸಾಂಸ್ಕೃತಿಕ ಸೇವೆಗಳಿಂದ ಭಕ್ತರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ. ಈ ದೇವಾಲಯವು ಭಕ್ತರಿಗೆ ಧಾರ್ಮಿಕ ಅನುಭವವನ್ನು ನೀಡುವುದರ ಜೊತೆಗೆ, ಸಂತಾನ ದೋಷ ಮತ್ತು ಮಕ್ಕಳ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.








