ಮಂಡ್ಯ: ಆಸ್ತಿ ವಿವಾದದ ಜಗಳದಿಂದಾಗಿ ಚಿಕ್ಕಪ್ಪನೇ ಅಣ್ಣನ ಮಗನ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.
ಶೂಟ್ ಮಾಡಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಜರುಗಿದೆ. ಹನುಮನಹಳ್ಳಿಯ ವಾಸು ಹಾಗೂ ಕುಮಾರ್ ಎಂಬ ಸಹೋದರರ ಮಧ್ಯೆ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಕುಮಾರ್ ತನ್ನ ಅಣ್ಣ ವಾಸು ಹಾಗೂ ಅವರ ಮಗ ಜಯಪಾಲ್ನನ್ನು ಸಮಸ್ಯೆ ಬಗೆಹರಿಕೊಳ್ಳುವುದಕ್ಕಾಗಿ ತೋಟಕ್ಕೆ ಬನ್ನಿ ಎಂದು ಕರೆಯಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಜಗಳ ನಡೆದಿದೆ. ಆಗ ಕುಪಿತಕೊಂಡ ಕುಮಾರ್ ಅಣ್ಣ ವಾಸುವಿನ ಮಗ ಜಯಪಾಲ್ಗೆ ಗನ್ನಿಂದ ಮೂರು ಬಾರಿ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.
ಜಯಪಾಲ್ನ ಎದೆ, ತೋಳು ಹಾಗೂ ಮುಖದ ಭಾಗಕ್ಕೆ ಗುಂಡು ತಗುಲಿದೆ. ತೀವ್ರ ರಕ್ತಸ್ರಾವದಿಂದ ಒದ್ದಾಡಿದ ಜಯಪಾಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಆಗ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.