ADVERTISEMENT
Thursday, January 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

2026ನೇ ಸಾಲಿನ ವಾರ್ಷಿಕ ರಾಶಿ ಭವಿಷ್ಯ…! ಯಾವ ರಾಶಿಯವರ ಅದೃಷ್ಟ ಹೇಗಿದೆ..?

admin by admin
January 1, 2026
in Astrology, Newsbeat, ಜ್ಯೋತಿಷ್ಯ
Annual horoscope for 2026...! What is the luck of which zodiac sign?

Annual horoscope for 2026...! What is the luck of which zodiac sign?

Share on FacebookShare on TwitterShare on WhatsappShare on Telegram

2026ನೇ ಸಾಲಿನ ವಾರ್ಷಿಕ ರಾಶಿ ಭವಿಷ್ಯ…! ಯಾವ ರಾಶಿಯವರ ಅದೃಷ್ಟ ಹೇಗಿದೆ..?

 

Related posts

ಸರಸ್ವತಿ ದೇವಿಯ ಈ ಮಂತ್ರವನ್ನು ಜಪಿಸಿವುದರಿಂದ ಬುದ್ದಿಮಾಂದ್ಯ, ಮೂರ್ಖ ಮಕ್ಕಳು ಕೂಡ ಬುದ್ಧಿವಂತರಾಗಿರುತ್ತಾರೆ..

ಸರಸ್ವತಿ ದೇವಿಯ ಈ ಮಂತ್ರವನ್ನು ಜಪಿಸಿವುದರಿಂದ ಬುದ್ದಿಮಾಂದ್ಯ, ಮೂರ್ಖ ಮಕ್ಕಳು ಕೂಡ ಬುದ್ಧಿವಂತರಾಗಿರುತ್ತಾರೆ..

January 22, 2026

ಸರಸ್ವತಿ ದೇವಿಯ ಈ ಮಂತ್ರವನ್ನು ಜಪಿಸಿವುದರಿಂದ ಬುದ್ದಿಮಾಂದ್ಯ, ಮೂರ್ಖ ಮಕ್ಕಳು ಕೂಡ ಬುದ್ಧಿವಂತರಾಗಿರುತ್ತಾರೆ.

January 22, 2026

*01,ಮೇಷ ರಾಶಿ
,ಈ 2026ನೇ ವರ್ಷದ ಆರಂಭದಲ್ಲಿ ಮಿಶ್ರ ಫಲಿತಾಂಶಗಳು ಕಂಡುಬರುತ್ತವೆ. ಅಡೆತಡೆಗಳು ಮತ್ತು ಸ್ಪರ್ಧೆಯ ಹೊರತಾಗಿಯೂ ನೀವು ತಾಳ್ಮೆಯಿಂದ ಮುನ್ನಡೆದರೆ, ವರ್ಷದ ಕೊನೆಯಲ್ಲಿ ಸ್ಥಿರತೆ ಸಾಧ್ಯವಾಗುತ್ತದೆ. ಆರ್ಥಿಕ ಎಚ್ಚರಿಕೆ ಅಗತ್ಯ, ಅನಗತ್ಯ ಖರ್ಚುಗಳನ್ನು ತಪ್ಪಿಸಬೇಕು. ಆರೋಗ್ಯದಲ್ಲಿ ಒತ್ತಡ ಮತ್ತು ರಕ್ತದೊತ್ತಡ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತೀರಿ. ಕುಟುಂಬದ ಬೆಂಬಲ ಬಲವಾಗಿರುತ್ತದೆ. ಸ್ಥಿರತೆ ಸುಧಾರಿಸುತ್ತದೆ. ವಿದ್ಯಾರ್ಥಿಗಳು ಸರಾಸರಿ ಫಲಿತಾಂಶಗಳನ್ನು ಹೊಂದಿರುತ್ತಾರೆ. ವ್ಯವಹಾರದಲ್ಲಿ ಸ್ಪರ್ಧೆ ಹೆಚ್ಚಾಗಿರುತ್ತದೆ. ಪ್ರಯತ್ನಗಳು ಕ್ರಮೇಣ ಫಲ ನೀಡುತ್ತವೆ. ಗ್ರಹಗಳ ಮಿಶ್ರ ಪರಿಣಾಮವಿರುತ್ತದೆ. ಕಡಲೆ ದಾನ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ,
, ಪರಿಹಾರ:-
ಶನಿ&ರಾಹು ಶಾಂತಿ ಮಾಡಿಸುವುದರಿಂದ. ಉತ್ತಮಫಲಿತಾಂಶಗಳು ಸಿಗುತ್ತವೆ,

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

*02,ವೃಷಭ ರಾಶಿ
, ಈ 2026ನೇ ವರ್ಷದ ಆರಂಭದಲ್ಲಿ ಕೆಲಸಗಳು ಸ್ವಲ್ಪ ನಿಧಾನವಾಗಿದ್ದರೂ, ಮಧ್ಯಮ ಅವಧಿಯಲ್ಲಿ ಅನುಕೂಲಕರ ಪರಿಸ್ಥಿತಿಗಳು ಹೆಚ್ಚಾಗುತ್ತವೆ. ಉದ್ಯೋಗಗಳಲ್ಲಿ ಸ್ಥಿರತೆ ಹೆಚ್ಚಾಗುತ್ತದೆ ಮತ್ತು ಹೊಸ ಅವಕಾಶಗಳು ಮತ್ತು ಜವಾಬ್ದಾರಿಗಳು ಹೆಚ್ಚಾಗುತ್ತವೆ. ಸ್ಪರ್ಧೆಯ ಹೊರತಾಗಿಯೂ ವ್ಯಾಪಾರ ಮಾಡುವವರಿಗೆ ಲಾಭ ಹೆಚ್ಚಾಗುವ ಸೂಚನೆಗಳಿವೆ. ಆರ್ಥಿಕ ಪರಿಸ್ಥಿತಿ ನಿರೀಕ್ಷೆಯಂತೆ ಇರುತ್ತದೆ. ಅನಗತ್ಯ ವೆಚ್ಚಗಳು ಕಡಿಮೆಯಾದರೆ, ಹೆಚ್ಚಿನ ಸ್ಥಿರತೆ ಇರುತ್ತದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ಸಮಸ್ಯೆಗಳು ಇರುವುದಿಲ್ಲ. ಉದ್ಯೋಗಕ್ಕೆ ಸಂಬಂಧಿಸಿದ ಪ್ರಯಾಣ ಲಾಭದಾಯಕವಾಗಿರುತ್ತದೆ. ಭೂಮಿ, ಮನೆ ಮತ್ತು ವಾಹನದಂತಹ ಸ್ಥಿರಾಸ್ತಿ ವಿಷಯಗಳು ಅನುಕೂಲಕರವಾಗಿರುತ್ತವೆ. ಸ್ನೇಹಿತರ ಸಹಾಯದಿಂದ ಪ್ರಮುಖ ಕಾರ್ಯವು ಪೂರ್ಣಗೊಳ್ಳುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಹೆಚ್ಚಿನ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ವರ್ಷದ ಅಂತ್ಯದವರಿಗೆ, ಹೆಸರು, ಪ್ರತಿಷ್ಠೆ ಮತ್ತು ಗೌರವ ಹೆಚ್ಚಾಗುತ್ತದೆ. ಗ್ರಹಬಲದಲ್ಲಿ ಕ್ರಮೇಣ ಸುಧಾರಣೆಯಿಂದಾಗಿ ಸ್ಥಿರತೆ ಮತ್ತು ಸಂಪತ್ತು ಸ್ಪಷ್ಟವಾಗಿ ಗೋಚರಿಸುತ್ತದೆ,
, ಪರಿಹಾರ:-
ಶನಿ&ರಾಹು ಪ್ರಾರ್ಥನೆ ಮತ್ತು ಶಾಂತಿಮಾಡಿಸುವುದರಿಂದ.
ಉತ್ತಮ ಫಲಿತಾಂಶ ದೊರೆಯುತ್ತದೆ,

*03,ಮಿಥುನ ರಾಶಿ
ಸಾಲದ ಸಮಸ್ಯೆಗಳು ಸ್ವಲ್ಪ ತೊಂದರೆ ಉಂಟುಮಾಡುತ್ತವೆ. ಆರ್ಥಿಕವಾಗಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಗೌರವ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಕೆಲಸದಲ್ಲಿ ಸ್ವಲ್ಪ ಒತ್ತಡವಿರಬಹುದು. ಅದನ್ನು ತಾಳ್ಮೆಯಿಂದ ಎದುರಿಸಿ ಮುಂದುವರಿಯುವುದು ಒಳ್ಳೆಯದು. ಕುಟುಂಬ ಸದಸ್ಯರಿಂದ ಯಾವಾಗಲೂ ಬೆಂಬಲ ಇರುತ್ತದೆ. ಆತ್ಮೀಯರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಾರೆ. ಖರ್ಚುಗಳನ್ನು ನಿಯಂತ್ರಿಸುವುದು ಒಳ್ಳೆಯದು. ಆರೋಗ್ಯ ವಿಷಯಗಳಲ್ಲಿ ಸ್ವಲ್ಪ ಕಾಳಜಿ ಅಗತ್ಯ. ತಂದೆಗೆ ಸಂಬಂಧಿಸಿದ ವಿಷಯಗಳು ತೊಂದರೆ ಉಂಟುಮಾಡುತ್ತವೆ. ವ್ಯಾಪಾರ ಪ್ರಯತ್ನಗಳು ಸ್ವಲ್ಪ ಕಷ್ಟದೊಂದಿಗೆ ಯಶಸ್ವಿಯಾಗುತ್ತವೆ,
ಪರಿಹಾರ:-
,ಮಂಗಳ &ರಾಹು ಶಾಂತಿ ಮಾಡಿಸಿ ಇದರಿಂದ ಉತ್ತಮ ಫಲಿತಾಂಶಗಳು ದೊರೆಯುತ್ತದೆ,

*04, ಕಟಕ ರಾಶಿ
, ಈ ವರ್ಷದ ಆರಂಭದಲ್ಲಿ. ಕೆಲಸಗಳಲ್ಲಿ ವಿಳಂಬ ಮತ್ತು ಆರ್ಥಿಕ ಒತ್ತಡಗಳು ಕೆಲವು ತೊಂದರೆಗಳನ್ನು ಉಂಟುಮಾಡುತ್ತವೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹಳೆಯ ಸಾಲಗಳು ಮಾನಸಿಕವಾಗಿ ಭಾರವಾಗುತ್ತದೆ. ಅದಾಗಿಯೂ ನೀವು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಆಲೋಚನೆಗಳೊಂದಿಗೆ ಮುಂದುವರೆದರೆ. ನೀವು ನಷ್ಟಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಕೆಲಸ ಅಥವಾ ವೃತ್ತಿಯಲ್ಲಿ ಸ್ಥಿರತೆಗಾಗಿ ಹೆಚ್ಚಿನ ಪ್ರಯತ್ನದ ಅಗತ್ಯವಿದೆ. ನಿಮ್ಮ ಮೇಲಾಧಿಕಾರಿಗಳೊಂದಿಗೆ ಮಾತನಾಡುವಾಗ ಎಚ್ಚರಿಕೆ ಅಗತ್ಯ. ಆತುರದ ಮಾತುಗಳು ಸಮಸ್ಯೆಗಳಿಗೆ ಕಾರಣವಾಗಬಹುದು. ವರ್ಷದ ಮಧ್ಯದಿಂದ ಪರಿಸ್ಥಿತಿಯಲ್ಲಿ ಕ್ರಮೇಣ ಬದಲಾವಣೆ ಕಂಡು ಬರುತ್ತದೆ. ಆದಾಯದಲ್ಲಿ ನಿಧಾನ ಗತಿಯ ಹೆಚ್ಚಳದ ಸೂಚನೆಗಳಿವೆ. ಸ್ಥಗಿತಗೊಂಡ ಕೆಲಸಗಳು ಮತ್ತೆ ಮುಂದುವರಿಯುತ್ತವೆ. ವ್ಯವಹಾರದಲ್ಲಿ ಇರುವವರು ಹೊಸ ಅವಕಾಶಗಳು ಬಂದರು ಹೂಡಿಕೆಗಳ ಬಗ್ಗೆ ಜಾಗರೂಕರಾಗಿರಬೇಕು. ಭೂಮಿ ಮನೆ ಮತ್ತು ವಾಹನಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಅತ್ಯಂತ ಜಾಗರೂಕರಾಗಿರಬೇಕು.ನೀವು ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ವರ್ಷದ ಅಂತ್ಯದ ವೇಳೆಗೆ ನಿಮ್ಮ ಪ್ರಯತ್ನಗಳು ಸೂಕ್ತ ಫಲಿತಾಂಶಗಳನ್ನು ನೀಡುತ್ತವೆ. ಮತ್ತು ಜೀವನದಲ್ಲಿ ಸ್ವಲ್ಪ ಸ್ಥಿರತೆ ಇರುತ್ತದೆ,
, ಪರಿಹಾರ:-
, ಶನಿ &ರಾಹು ಮತ್ತು ಗುರುವಿನ ಜಪಮಾಡಿ. ಹಾಗೂ ನವಗ್ರಹ ಶಾಂತಿ ಮಾಡಿಸಿ. ಒಳ್ಳೆಯ ಫಲಿತಾಂಶ ದೊರೆಯುತ್ತದೆ,

*05, ಸಿಂಹ ರಾಶಿ
, ಈ ರಾಶಿಯವರಿಗೆ 2026 ನೇ ಸಾಲಿನಲ್ಲಿ. ಮಿಶ್ರ ಫಲಿತಾಂಶ ನೀಡುವ ವರ್ಷವಾಗಿದೆ. ವರ್ಷದ ಆರಂಭದಲಿ ಕೆಲಸಗಳಲ್ಲಿ ವಿಳಂಬ ಮತ್ತು ಅಧಿಕಾರಿಗಳೊಂದಿಗೆ ಸ್ವಲ್ಪ ಒತ್ತಡ ಇದ್ದರು. ನಿಮ್ಮ ಆತ್ಮವಿಶ್ವಾಸದಿಂದಾಗಿ ನೀವು ಅದನ್ನು ನಿವಾರಿಸುತ್ತೀರಿ. ವೃತ್ತಿಪರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹೊಸ ಜವಾಬ್ದಾರಿಗಳು ಅಥವಾ ಸ್ಥಾನಮಾನದಲ್ಲಿ ಬದಲಾವಣೆಯ ಸೂಚನೆಗಳಿವೆ. ಉದ್ಯಮಿಗಳು ಮಧ್ಯದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ವರ್ಷದ ದ್ವಿತೀಯಾರ್ಥದಲ್ಲಿ ಲಾಭವೂ ಸುಧಾರಿಸುತ್ತದೆ. ಆರ್ಥಿಕವಾಗಿ ಆದಾಯ ಮತ್ತು ಖರ್ಚುಗಳು ಸಮಾನವಾಗಿರುತ್ತದೆ. ಅನಗತ್ಯ ಕರ್ಚುಗಳನ್ನು ನಿಯಂತ್ರಿಸಿದರೆ ಆದಾಯ ಹೆಚ್ಚಾಗುತ್ತದೆ. ಕೌಟುಂಬಿಕ ವಿಷಯಗಳಲ್ಲಿ ನಿಮ್ಮ ಮಾತುಗಳು ಹೆಚ್ಚಾಗುತ್ತವೆ ಮತ್ತು ಹಿರಿಯರಿಂದ ನಿಮಗೆ ಬೆಂಬಲ ದೊರೆಯುತ್ತದೆ. ಮನೆಯ ನಿರ್ಧಾರಗಳಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯಬೇಕು. ಸ್ಥಿರವಾಗಿ ಮುಂದುವರಿಯುವುದು ಒಳ್ಳೆಯದು ಎಂದು ಹೇಳಲಾಗುತ್ತೆ. ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ತಮ್ಮ ಗುರಿಗಳನ್ನು ಸಾಧಿಸುತ್ತಾರೆ. ಪ್ರಯಾಣಗಳು ಉತ್ತಮ ಫಲಿತಾಂಶ ನೀಡುತ್ತದೆ,
* ಪರಿಹಾರ:-*
, ಶನಿ& ರಾಹು ಮತ್ತು ಗುರುಗಳ ಜಪ ಮಾಡುವುದರಿಂದ. ಹಾಗೂ ನವಗ್ರಹ ಹೋಮ ಮಾಡಿಸುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು,

*06, ಕನ್ಯಾ ರಾಶಿ
, ಈ 2026ನೇ ವರ್ಷದ ಆರಂಭದಲ್ಲಿ ಕೆಲಸಗಳು ನಿಧಾನವಾಗಿ ನಡೆದರು. ನಿರುತ್ಸಾಹ ಗೊಳ್ಳುವಾಗ ಅಗತ್ಯವಿಲ್ಲ. ಕಾಲಕ್ರಮೇಣ ಪರಿಸ್ಥಿತಿಗಳು ನಿಮ್ಮ ಸ್ವಾಧೀನಕ್ಕೆ ಬರುತ್ತವೆ. ಉದ್ಯೋಗದಲ್ಲಿರುವವರಿಗೆ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಆದರೆ ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ನೀವು ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಂಡರೆ. ಉತ್ತಮ ಎಂದು ಹೇಳಲಾಗುತ್ತದೆ. ವ್ಯವಹಾರದಲ್ಲಿ ಇರುವವರು ಉತ್ತಮ ಲಾಭವನ್ನು ಗಳಿಸಬಹುದು. ನಿಮ್ಮ ಆದಾಯವು ಆರ್ಥಿಕವಾಗಿ ಉತ್ತಮವಾಗಿದ್ದರೂ. ಸಹ ಅನಗತ್ಯ ಕರ್ಚುಗಳನ್ನು ಹೆಚ್ಚಿಸಿದಂತೆ ಜಾಗರೂಕರಾಗಿರಬೇಕು. ಕುಟುಂಬದಲ್ಲಿ ವಿವಾದಗಳ ಸಾಧ್ಯತೆ ಇದ್ದರೂ ನಿಮ್ಮ ತಾಳ್ಮೆ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಸಹಾಯ ಮಾಡುತ್ತದೆ. ಆಯಾಸ ಮತ್ತು ನಿದ್ರಾಹೀನತೆಯು ಆರೋಗ್ಯದ ವಿಷಯದಲ್ಲಿ ಸ್ವಲ್ಪ ಸಮಸ್ಯೆಯಾಗಿ ಕಾಡಬಹುದು. ಆದ್ದರಿಂದ ವಿಶ್ರಾಂತಿ ಸ್ವಲ್ಪ ಉಪಯೋಗಕ್ಕೆ ಬರುತ್ತದೆ. ವರ್ಷದ ಅಂತ್ಯದ ವೇಳೆಗೆ ನಿಮ್ಮ ಪ್ರಯತ್ನಗಳಿಗೆ ಫಲ ದೊರೆಯುತ್ತದೆ. ನಿಮ್ಮ ಮನಸ್ಸು ತೃಪ್ತಿಗೊಳ್ಳುತ್ತದೆ ಒಟ್ಟಾರೆಯಾಗಿ ನೀವು ತಾಳ್ಮೆಯಿಂದ ಮುಂದುವರೆದರೆ. ನಿಮಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ,
* ಪರಿಹಾರ:-*
, ಶನಿ & ರಾಹು. ಪ್ರಾರ್ಥನೆ ಹಾಗೂ ಶಾಂತಿ ಮಾಡಿಸುವುದರಿಂದ. ನಿಮಗೆ ಒಳಿತುಂಟಾಗುತ್ತದೆ,

*07, ತುಲಾ ರಾಶಿ
ಈ 2026 ನೇ ವರ್ಷದ ಆರಂಭದಲ್ಲಿ ಶತ್ರುಗಳ ಕಾಟ ಸಾಲಗಳು ಮತ್ತು ಆರೋಗ್ಯದ ಸಮಸ್ಯೆಗಳು ನಿಮಗೆ ಕೆಲವೊಂದು ತೊಂದರೆಗಳನ್ನು ಉಂಟುಮಾಡಬಹುದು. ಕೆಲಸಗಳಲ್ಲಿ ವಿಳಂಬ ಇದ್ದರೂ ಅಡೆತಡೆಗಳು ಕ್ರಮೇಣ ದೂರವಾಗುತ್ತವೆ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗುತ್ತವೆ. ವ್ಯವಹಾರಗಳಲ್ಲಿನ ಹೂಡಿಕೆಗಳಲ್ಲಿ ಎಚ್ಚರಿಕೆ ಅಗತ್ಯ. ಖರ್ಚು ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕುಟುಂಬದ ಸದಸ್ಯರುಗಳೊಂದಿಗೆ ವಾದಗಳು ಉಂಟಾಗುವ ಸಾಧ್ಯತೆ ಇದೆ. ಸ್ಥಗಿತಗೊಂಡ ಕೆಲಸಗಳು ಮತ್ತೆ ಪ್ರಾರಂಭವಾಗುತ್ತದೆ. ಸಹೋದರರು ಮತ್ತು ಸ್ನೇಹಿತರಿಂದ ನಿಮಗೆ ಬೆಂಬಲ ದೊರೆಯುತ್ತದೆ. ಸ್ಥಿರಾಸ್ತಿ ವಿಷಯಗಳಲ್ಲಿ ನಿಧಾನವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರಗಳು ದೊರಕುತ್ತವೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಮಾರಾಟಗಾರರಿಗೆ ವ್ಯಾಪಾರ ವ್ಯವಹಾರ ಅನುಕೂಲಕರವಾಗಿರುತ್ತದೆ. ಉದ್ಯೋಗದ ವಿಷಯಗಳಲ್ಲಿ ಬಡ್ತಿ ಮತ್ತು ಹೊಸ ಉದ್ಯೋಗಾವಕಾಶಗಳು ದೊರೆಯಲಿದೆ,
* ಪರಿಹಾರ:-*
, ಶನಿ&ಮಂಗಳ&ರಾಹು &ಕೇತು. ಗ್ರಹಗಳ ಜಪ ಮಾಡಿ. ಹಾಗೂ ದೇವಸ್ಥಾನದಲ್ಲಿ ನವಗ್ರಹ ಧಾನ್ಯ ದಾನ ಮಾಡಿ. ಒಳ್ಳೆಯ ಫಲಿತಾಂಶ ದೊರೆಯುತ್ತದೆ,

*08, ವೃಶ್ಚಿಕ ರಾಶಿ
,ಈರಾಶಿಯವರಿಗೆ2026ನೆಯ ವರ್ಷವು ಗೃಹ ವ್ಯವಹಾರಗಳ ಕೆಲಸಗಳು ನಿಧಾನವಾಗಿ ಪ್ರಗತಿ ಹೊಂದುತ್ತದೆ. ವಾಹನಗಳು ಮತ್ತು ಕೆಲಸಗಳಲ್ಲಿ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕಾಗುತ್ತದೆ. ಉದ್ಯೋಗ ಕ್ಷೇತ್ರಗಳಲ್ಲಿ ಜವಾಬ್ದಾರಿಯುತ ಅಧಿಕಾರಿಗಳ ಸಹಾಯದಿಂದ. ಬಡ್ತಿ ಹೆಚ್ಚಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳನ್ನು ಮರುಪರುಶೀಲಿಸುವುದು ಒಳ್ಳೆಯದು ಎಂದು ಹೇಳಲಾಗಿದೆ. ಆದಾಯದ ಮೂಲಗಳು ನಿಧಾನವಾಗಿ ಹೆಚ್ಚಾಗುತ್ತದೆ. ಇತರರ ವ್ಯವಹಾರಗಳಲ್ಲಿ ಮಧ್ಯಸ್ಥಿಕೆ ವಹಿಸುವುದು ಒಳ್ಳೆಯದಲ್ಲ. ಕುಟುಂಬದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಸಹ ಅವು ವರ್ಷದ ಅಂತ್ಯದ ವೇಳೆಗೆ ಬಗೆಹರಿಯುತ್ತದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ.ಸ್ಥಿರಾಸ್ತಿ ವ್ಯವಹಾರಗಳು ಸ್ವಲ್ಪ ಅನುಕೂಲಕರವಾಗಿ ಪ್ರಗತಿ ಹೊಂದುತ್ತವೆ. ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ,
, ಪರಿಹಾರ:-
, ಗುರು& ಶನಿ. ಜಪ ಮಾಡುವುದು ಹಾಗೂ. ಗುರು& ಶನಿ ಗ್ರಹದ ಶಾಂತಿ ಮಾಡಿಸುವುದು, ಉತ್ತಮವೆಂದು ಹೇಳಲಾಗುತ್ತದೆ,

*09, ಧನಸ್ಸು ರಾಶಿ
, ಈ ರಾಶಿ ಚಕ್ರದವರಿಗೆ 2026 ನೇ ಸಾಲಿನ ವರ್ಷವೂ ಎಲ್ಲಾ ರೀತಿಯಲ್ಲಿಯೂ ಒಳ್ಳೆಯ ಪರಿಣಾಮ ಬೀರುತ್ತದೆ. ವೃತ್ತಿಪರ ಮತ್ತು ವ್ಯವಹಾರ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ನೋಡಬಹುದು. ಆರ್ಥಿಕವಾಗಿ ಉತ್ತಮ ವರ್ಷವಾಗಿರುತ್ತದೆ. ಹೊಸ ಯೋಜನೆಗಳೊಂದಿಗೆ ಯಶಸ್ಸನ್ನು ಸಾಧಿಸುತ್ತೀರಿ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಆರ್ಥಿಕವಾಗಿ ಉತ್ತಮ ಆದಾಯ ದೊರೆಯಲಿದೆ. ಹೊಸ ಯೋಜನೆಗಳು ಅಥವಾ ಒಪ್ಪಂದಗಳು ದೊರೆಯುತ್ತವೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಯಶಸ್ಸನ್ನು ಸಾಧಿಸುತ್ತೀರಿ. ಮನೆಯ ಕುಟುಂಬದ ಸದಸ್ಯರೊಂದಿಗೆ ಮೋಜಿನ ಸಮಯವನ್ನು ಕಳೆಯುತ್ತೀರಿ. ಸಮಾಜದಲ್ಲಿ ಗೌರವ ಮತ್ತು ಶಿಷ್ಟಾಚಾರ ಹೆಚ್ಚಾಗುತ್ತದೆ. ಮಕ್ಕಳು ಪ್ರಗತಿಯನ್ನು ಸಾಧಿಸುತ್ತಾರೆ. ಭೂಮಿ ಮತ್ತು ವಾಹನಗಳನ್ನು ಖರೀದಿಸಲು ಪ್ರಯತ್ನಿಸಬಹುದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತೀರಿ,
, ಪರಿಹಾರ:-
, ಗುರು& ಶನಿ &ರಾಹು ಮತ್ತು ಕೇತು, ಜಪ ನವಗ್ರಹ ಹೋಮ. ಮಾಡಿಸುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ,

*10, ಮಕರ ರಾಶಿ
, ಈ 2026ನೆಯ ವರ್ಷವೂ ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುವ ಸಾಧ್ಯತೆ ಇರುತ್ತದೆ. ಗ್ರಹಗಳ ಸ್ಥಾನಗಳ ಪ್ರಭಾವದಿಂದಾಗಿ ಹೊಸ ಭರವಸೆಗಳು ಅಭಿವೃದ್ಧಿ ಅವಕಾಶಗಳು ಮತ್ತು ವೈಯಕ್ತಿಕ ಶಕ್ತಿ ಹೆಚ್ಚಾಗುತ್ತದೆ. ಹಿಂದಿನ ಕಠಿಣ ಪರಿಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ಹೊಸ ಅವಕಾಶಗಳು ದೊರೆಯುತ್ತವೆ ಮತ್ತು ಕೆಲವು ಕ್ಷೇತ್ರಗಳಲ್ಲಿ ಪ್ರಗತಿ ಕಂಡು ಬರುತ್ತದೆ. ಆರ್ಥಿಕ ಸ್ಥಿರತೆ ಹೆಚ್ಚಾಗುತ್ತದೆ. ಹೂಡಿಕೆ ಮಾಡುವವರಿಗೆ ವರ್ಷದ ಮಧ್ಯದಲ್ಲಿ ಉತ್ತಮ ಲಾಭ ದೊರೆಯುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳನ್ನು ಹೊರತುಪಡಿಸಿ ಯಾವುದೇ ಪ್ರಮುಖ ಸಮಸ್ಯೆಗಳು ಕಂಡುಬರುವುದಿಲ್ಲ. ಕುಟುಂಬದಲ್ಲಿ ಶಾಂತಿ ಮತ್ತು ಸಮತೋಲನ ಹೆಚ್ಚಾಗುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಹೊಸದನ್ನು ಮಾಡಲು ಬಯಸುವವರಿಗೆ ವರ್ಷದ ದ್ವಿತಿಯಾರ್ಧವು ಅನುಕೂಲಕರವಾಗಿರುತ್ತದೆ. ಕೆಲವೊಮ್ಮೆ ಕೆಲಸದ ಹೊರೆ ಹೆಚ್ಚಾಗುತ್ತದೆ ಶುಭ ಕಾರ್ಯಗಳಿಗೆ ಉತ್ತಮ ಅವಕಾಶಗಳಿವೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭಾಂಶವಿರುತ್ತದೆ. ಹೊಸ ಒಪ್ಪಂದಗಳ ಸಾಧ್ಯತೆ ಇದೆ,
, ಪರಿಹಾರ:-
, ಮಂಗಳ &ಶನಿ ಗ್ರಹಗಳ ಜಪ ಮಾಡುವುದು. ಮಂಗಳ& ಶನಿಯ ಶಾಂತಿ ಮಾಡಿಸುವುದು ಉತ್ತಮ ಎಂದು ಹೇಳಲಾಗುತ್ತದೆ,

*11, ಕುಂಭ ರಾಶಿ
, ಈ ರಾಶಿಯವರಿಗೆ 2026 ನೇ ವರ್ಷವೂ ಮಿಶ್ರ ಫಲಿತಾಂಶಗಳು ಕಂಡು ಬರುತ್ತವೆ. ಉತ್ತಮ ಅಭಿವೃದ್ಧಿ ಆರ್ಥಿಕ ಸ್ಥಿರತೆ ಮತ್ತು ವೃತ್ತಿಪರ ಪ್ರಗತಿಯ ಸಾಧ್ಯತೆಗಳಿವೆ. ಜೀವನದಲ್ಲಿ ಸ್ಥಿರತೆ ಮತ್ತು ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ ಇದೆ. ನಿಗದಿಪಡಿಸಿದ ಕಾರ್ಯಗಳು ಸಹ ಯಶಸ್ವಿಯಾಗುತ್ತವೆ. ಕಠಿಣ ಪರಿಶ್ರಮವು ಯೋಜಿತ ಕೆಲಸಕ್ಕೆ ಮನ್ನಣೆ ನೀಡುತ್ತದೆ. ನಿಮ್ಮ ಮೇಲಾಧಿಕಾರಿಗಳ ಬೆಂಬಲದೊಂದಿಗೆ ಬಡ್ತಿಗಳನ್ನು ಪಡೆಯುತ್ತೀರಿ. ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ಅಥವಾ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಇದು ಅನುಕೂಲಕರ ಸಮಯ ಎಂದು ಹೇಳಲಾಗುತ್ತದೆ. ಈ ವರ್ಷದ ಮಧ್ಯದಿಂದ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗಬಹುದು. ವಿದ್ಯಾರ್ಥಿಗಳು ಓದಿನ ಕಡೆ ಗಮನಹರಿಸಲು ತೊಂದರೆಯಾಗಬಹುದು. ದೂರದ ಪ್ರಯಾಣದ ಸಾಧ್ಯತೆ ಇದೆ. ಕೌಟುಂಬಿಕ ವಿವಾದಗಳು ಸಾಲಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳು ತುಂಬಾತೊಂದರೆ ದಾಯಕವಾಗಿರುತ್ತದೆ. ವೃತ್ತಿ ಉದ್ಯೋಗಿಗಳಲ್ಲಿ ಬದಲಾವಣೆ ಕಂಡುಬರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು,
, ಪರಿಹಾರ:-
, ಶನಿ &ಗುರು& ರಾಹು& ಕೇತು. ಈ ಗ್ರಹಗಳ ಜಪ ಮಾಡಬಹುದು. ಮತ್ತು ನವಗ್ರಹ ಧಾನ್ಯವನ್ನು ಶನಿದೇವರ ದೇವಸ್ಥಾನದಲ್ಲಿ ದಾನ ಕೊಡುವುದರಿಂದ. ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ

*12, ಮೀನ ರಾಶಿ
, ಈ 2026ನೇ ವರ್ಷವೂ ಮೀನ ರಾಶಿಯ ರಾಶಿ ಚಕ್ರ ದವರಿಗೆ.ಕಠಿಣ ಪರಿಶ್ರಮ ತಾಳ್ಮೆ ಮತ್ತು ಆತ್ಮಾವಲೋಕನದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಶನಿಯ ಲಗ್ನದ ಪ್ರಭಾವದಿಂದ ಕೆಲಸದಲ್ಲಿ ವಿಳಂಬ. ಮತ್ತು ದೈಹಿಕ ಆಯಾಸ ಉಂಟಾಗುತ್ತದೆ. ಆದರೆ ಕ್ರಮೇಣ ಸ್ಥಿರತೆ ಬೆಳೆಯುತ್ತದೆ. ಗುರುವಿನ ಬಲ ಹೆಚ್ಚಾಗುವುದರಿಂದ ಧೈರ್ಯ ಹೆಚ್ಚಾಗುತ್ತದೆ ಮತ್ತು ಹೊಸ ಆಲೋಚನೆಗಳು ರೂಪಗೊಳ್ಳುತ್ತವೆ. ಒಡಹುಟ್ಟಿದವರೊಂದಿಗೆ ಸಹಕಾರ ಮತ್ತು ದೇಶಿಯ ವಿಷಯಗಳಲ್ಲಿ ಪ್ರಗತಿ ಕಂಡು ಬರುತ್ತದೆ. ಶತ್ರುಗಳು ದುರ್ಬಲಗೊಳ್ಳುತ್ತಾರೆ.ಮತ್ತು ವಿವಾದಗಳು ಬಗೆಹರಿಯುತ್ತದೆ. ಸಾಲಗಳಿಂದ ಪರಿಹಾರದ ಸೂಚನೆಗಳು ದೊರೆಯುತ್ತವೆ. ಉದ್ಯೋಗದಲ್ಲಿನ ಜವಾಬ್ದಾರಿಗಳು ಹೆಚ್ಚಿದ್ದರೂ ಸಹ ಕಠಿಣ ಪರಿಶ್ರಮವು ಅಂತಿಮವಾಗಿ ಗುರಿತಿಸಲ್ಪಡುತ್ತದೆ. ಕುಟುಂಬದಲ್ಲಿ ತಾಳ್ಮೆ ಅಗತ್ಯವಿರುವ ಸಂದರ್ಭದಲ್ಲಿ ಸಹ ಮಾನಸಿಕ ಶಾಂತಿ ಹೊಂದುವುದು ಉತ್ತಮ. ಆಧ್ಯಾತ್ಮಿಕ ಆಸಕ್ತಿ ಹೆಚ್ಚಾಗುತ್ತದೆ. ಖರ್ಚು ವೆಚ್ಚಗಳು ಪ್ರಯಾಣ ಮತ್ತು ಮಾನಸಿಕ ಆಲೋಚನೆಗಳು ಹೆಚ್ಚಾಗಿರುವುದರಿಂದ. ಆರ್ಥಿಕ ನಿಯಂತ್ರಣ ಅಗತ್ಯ ಎಂದು ಹೇಳಲಾಗುತ್ತದೆ. ಕೆಲವು ತೊಂದರೆಗಳ ನಡುವೆ ಬೆಳವಣಿಗೆ ಅನುಭವಗಳ ಮೂಲಕ ಸ್ಥಿರಪಲಿತಾಂಶಗಳನ್ನು ವರ್ಷವಿಡಿ ಸಾಧಿಸಬಹುದು,
* ಪರಿಹಾರ:-*
, ಶನಿ &ರಾಹು& ಕೇತು. ಈ ಗ್ರಹಗಳ ಜಪ ಮಾಡುವುದರಿಂದ. ಹಾಗೂಈ ಗ್ರಹಗಳಿಗೆ ಸಂಬಂಧಿಸಿದ ಧಾನ್ಯಗಳನ್ನು. ಬಡವರಿಗೆ ದಾನ ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564

Source: Annual horoscope for 2026...! What is the luck of which zodiac sign?
Via: Annual horoscope for 2026...! What is the luck of which zodiac sign?
Tags: #astrology#saakshatvbengaluruKanandanewskarnatakamangaluru
ShareTweetSendShare
Join us on:

Related Posts

ಸರಸ್ವತಿ ದೇವಿಯ ಈ ಮಂತ್ರವನ್ನು ಜಪಿಸಿವುದರಿಂದ ಬುದ್ದಿಮಾಂದ್ಯ, ಮೂರ್ಖ ಮಕ್ಕಳು ಕೂಡ ಬುದ್ಧಿವಂತರಾಗಿರುತ್ತಾರೆ..

ಸರಸ್ವತಿ ದೇವಿಯ ಈ ಮಂತ್ರವನ್ನು ಜಪಿಸಿವುದರಿಂದ ಬುದ್ದಿಮಾಂದ್ಯ, ಮೂರ್ಖ ಮಕ್ಕಳು ಕೂಡ ಬುದ್ಧಿವಂತರಾಗಿರುತ್ತಾರೆ..

by admin
January 22, 2026
0

ಮೂರ್ಖ ಮಕ್ಕಳು ಕೂಡ ವಿದ್ಯಾವಂತರಾಗಬೇಕೆಂದರೆ ಬಿಳಿ ಗುರಗಂಜಿಯಿಂದ ಈ ಉಪಾಯ ಮಾಡಿ ಕೆಲವೊಂದು ಬಾರಿ ತರಗತಿಯಲ್ಲಿ ಚೆನ್ನಾಗಿ ಓದುತ್ತಿದ್ದ ಮಕ್ಕಳು ಮಂಕಾಗುತ್ತಾರೆ, ಇನ್ನು ಕೆಲವೊಂದು ಬಾರಿ ತರಗತಿಯಲ್ಲಿ...

ಸರಸ್ವತಿ ದೇವಿಯ ಈ ಮಂತ್ರವನ್ನು ಜಪಿಸಿವುದರಿಂದ ಬುದ್ದಿಮಾಂದ್ಯ, ಮೂರ್ಖ ಮಕ್ಕಳು ಕೂಡ ಬುದ್ಧಿವಂತರಾಗಿರುತ್ತಾರೆ.

by admin
January 22, 2026
0

ಸರಸ್ವತಿ ದೇವಿಯ ಈ ಮಂತ್ರವನ್ನು ಜಪಿಸಿವುದರಿಂದ ಬುದ್ದಿಮಾಂದ್ಯ, ಮೂರ್ಖ ಮಕ್ಕಳು ಕೂಡ ಬುದ್ಧಿವಂತರಾಗಿರುತ್ತಾರೆ.. ಮೂರ್ಖ ಮಕ್ಕಳು ಕೂಡ ವಿದ್ಯಾವಂತರಾಗಬೇಕೆಂದರೆ ಬಿಳಿ ಗುರಗಂಜಿಯಿಂದ ಈ ಉಪಾಯ ಮಾಡಿ ಕೆಲವೊಂದು...

ಟೋಲ್ ಶುಲ್ಕ ಬಾಕಿ ವಾಹನಗಳಿಗೆ ಬ್ರೇಕ್! ಕೇಂದ್ರದಿಂದ ಕಠಿಣ ನಿಯಮ ಜಾರಿ

ಟೋಲ್ ಶುಲ್ಕ ಬಾಕಿ ವಾಹನಗಳಿಗೆ ಬ್ರೇಕ್! ಕೇಂದ್ರದಿಂದ ಕಠಿಣ ನಿಯಮ ಜಾರಿ

by Shwetha
January 22, 2026
0

ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಪಾವತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಟೋಲ್ ಶುಲ್ಕ ಬಾಕಿ ಇರುವ ವಾಹನಗಳು ವಾಹನ ಮಾಲೀಕತ್ವಕ್ಕೆ...

ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ: ಬಾಹ್ಯಾಕಾಶ ಸೇವೆಗೆ ತೆರೆ

ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ: ಬಾಹ್ಯಾಕಾಶ ಸೇವೆಗೆ ತೆರೆ

by Shwetha
January 22, 2026
0

ಭಾರತ ಮೂಲದ ಪ್ರಸಿದ್ಧ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ನಾಸಾದಿಂದ ಅಧಿಕೃತವಾಗಿ ನಿವೃತ್ತಿ ಹೊಂದಿದ್ದಾರೆ. ದಶಕಗಳ ಕಾಲ ಬಾಹ್ಯಾಕಾಶ ಸಂಶೋಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಅಸಾಧಾರಣ...

RCB ಫ್ಯಾನ್ಸ್‌ಗೆ ಬಿಗ್ ನ್ಯೂಸ್: ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ IPL ಪಂದ್ಯಗಳು

RCB ಫ್ಯಾನ್ಸ್‌ಗೆ ಬಿಗ್ ನ್ಯೂಸ್: ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ IPL ಪಂದ್ಯಗಳು

by Shwetha
January 22, 2026
0

IPL ಪಂದ್ಯಗಳು ತಮ್ಮ ತವರು ನೆಲವಾದ ಬೆಂಗಳೂರಿನಲ್ಲೇ ನಡೆಯಬೇಕೆಂದು ಬಹುಕಾಲದಿಂದ ಕಾಯುತ್ತಿದ್ದ RCB ಅಭಿಮಾನಿಗಳಿಗೆ ಕೊನೆಗೂ ಸಿಹಿಸುದ್ದಿ ದೊರೆತಿದೆ. ಬೆಂಗಳೂರಿನ ಐಕಾನಿಕ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ IPL ಪಂದ್ಯಗಳನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram