ADVERTISEMENT
Sunday, May 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

“ಅಗ್ನಿಯ ರೆಕ್ಕೆಗಳು”

admin by admin
May 22, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸೋಲು ಮತ್ತು ಯಶಸ್ಸನ್ನು ಸಮಾನ ವಾಗಿ ಸ್ವೀಕರಿಸಿದ ಒಬ್ಬ ವಿಜ್ಞಾನಿಯ ಯಶೋಗಾಥೆ ಯೇ ” ಅಗ್ನಿಯ ರೆಕ್ಕೆಗಳು “.
ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ರವರು ತನ್ನವರಿಗೋಸ್ಕರ ನೆರವು ನೀಡಲು ದಿನಪತ್ರಿಕೆ ಹಂಚಿದ ಓರ್ವ ಪುಟ್ಟ ಬಾಲಕ. ಇವರು ತಮಿಳುನಾಡಿನ ರಾಮೇಶ್ವರಂ ನ ಲ್ಲಿ 15 ಅಕ್ಟೋಬರ್ 1931 ರಂದು ಜನಿಸಿದರು. ಬಡ ಹಿನ್ನಲೆಯಿಂದಾಗಿ ತನ್ನ ಕುಟುಂಬಕ್ಕೆ ಅರ್ಥಿಕವಾಗಿ ಬೆಂಬಲಿಸುವ ಸಲುವಾಗಿ ಕಿರಿಯ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು. ಪರಿಶ್ರಮದ ಜೊತೆಗೆ ವಿದ್ಯಾಭ್ಯಾಸ ಪೂರೈಸಿದರು.

ಇವರ ಆತ್ಮಕಥನವನ್ನು ವಿಮರ್ಶೆ ಮಾಡಲು ಹರ್ಷವಾಗುತ್ತಿದೆ.  ಬಡವನಾದರೇನು, ಶ್ರೀಮಂತ ಆದರೇನು ಹೊಟ್ಟೆಗಾಗಿಯೇ ತಿನ್ನುವುದು.. ಎಷ್ಟೇ ಕಷ್ಟ ಇದ್ರೂ ತಾನೂ ಕೂಡ ಶ್ರದ್ದೆ, ಪರಿಶ್ರಮ, ವಿನಯತೆ, ಕನಸುಗಳಿಂದ ಗುರಿಯತ್ತ ನಡೆದರೆ ಯಾವುದೇ ಅಡೆತಡೆಗಳಿಲ್ಲದೇ ಯಶಸ್ಸು ಕಾಣಲು ಸಾಧ್ಯ ಎಂದು ನಿರೂಪಿಸಿದ್ದು ಅಬ್ದುಲ್ ಕಲಾಂ ರವರು.

Related posts

ಕಾಂಗ್ರೆಸ್ ಕೋಟೆಯಲ್ಲಿ ಭಿನ್ನಮತದ ಬಿರುಗಾಳಿ: ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ಡಿಕೆ ಶಿವಕುಮಾರ್ ಆಪರೇಷನ್ ಕ್ಲೀನ್

ಅಸ್ಸಾಂ ಸೇರಿ ಐದೂ ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಲಿದ್ದೇವೆ ಸಮೀಕ್ಷೆಗಳ ವರದಿ ಉಲ್ಟಾ ಆಗುವುದು ಗ್ಯಾರಂಟಿ ಎಂದ ಡಿಕೆಶಿ

May 3, 2026
ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

May 3, 2026

ಬಡತನ ಎನ್ನುವುದು ಶಿಕ್ಷೆ ಅಲ್ಲ, ದೌರ್ಬಲ್ಯ ಅಲ್ಲ. ನಮ್ಮ ಜೀವನವನ್ನು ರೂಪಿಸುವ ಅಪರೂಪದ ಯಶಸ್ಸಿನ ಅಂಗ ಎಂದು ನನಗೆ ಅರಿವಾಗಿದ್ದು ಕಲಾಂ ರಿಂದ.
ಇವರು ಕಷ್ಟವನ್ನು ತೊರೆದು ಕನಸಿನಲ್ಲಿ ತಲ್ಲೀನರಾಗಿ ಯಶಸ್ಸಿನ ಸೂತ್ರವನ್ನು ಅರಿತು ಸಾಧಿಸಿ ಜಗತ್ತಿಗೆ ಮಾದರಿಯಾಗಿ ಬದುಕಿದವರು.. ಜಾತಿ, ಬೇಧ ಭಾವಗಳಿಲ್ಲದೆ ಸಂಯಮದ ಸ್ನೇಹ ಕೊಟ್ಟವರಲ್ಲಿ ಅಗ್ರರು.  ಒಂದು ದಿನ ಸಾಗರದ ಬಳಿ ಕೆಲವು ಹಕ್ಕಿಗಳು ಎತ್ತರಕ್ಕೆ ಹಾರುತ್ತ ಪಟಪಟನೆ ರೆಕ್ಕೆ ಬಡಿದು ಆನಂದದಿಂದ ತೇಲುತ್ತ ಮತ್ತೆ ಕೆಳಗೆ ಬಂದವು.ಆ ಸುಂದರ ದೃಶ್ಯವೇ ಕಲಾಂರವರ ಮನದಲ್ಲಿ ತಾನೂ ಮುಂದೊಂದು ದಿನ ಕಂಡಿತಾ ಆಕಾಶಕ್ಕೇರುತ್ತೇನೆ ಎಂಬ ಕನಸು ಕಾಣಲು ನಾಂದಿಯಾಗಿದ್ದು.
ಮಾನವ ಎಲ್ಲಿದ್ದರು ಈ ವಿಶ್ವದ ಅವಿಭಾಜ್ಯ ಅಂಗ. ಹೀಗಾಗಿ ಕಷ್ಟ ಕೋಟಲೆಗಳ ಭಯ ಬಿಟ್ಟು, ಸಾಧನೆ ಮಾಡಲು ಬೇಕಾಗಿರುವ ಆತ್ಮಶಕ್ತಿಯನ್ನು ಪಡೆಯಿರಿ ಎಂದು ಮನವರಿಕೆ ಮಾಡಿದ್ದೂ ಕಲಾಂರವರೇ.

“ಯಾವ ವಿಷಯಗಳು ನೋವು ಕೊಡುತ್ತವೋ, ಅವು ಮುಂದೆ ನಮಗೆ ಶಿಕ್ಷಣ ನೀಡುತ್ತವೆ ” ಎಂದು ಮೊದಲಿಗೆ ಅರಿತುಕೊಂಡ ಮಹಾನ್ ಶಕ್ತಿ ಅಬ್ದುಲ್ ಕಲಾಂ.
ನಾನು ಶಾಲಾ ದಿನಗಳಲ್ಲಿ ನಿಷ್ಠೆಯಿಂದ ಓದಿದ ಮೊದಲ ಪುಸ್ತಕ “ಅಗ್ನಿಯ ರೆಕ್ಕೆಗಳು “. ಅವರು ಶಿಕ್ಷಕನಾಗಿ, ದೇಶಪ್ರೇಮದ ಜೊತೆಗೆ ಪ್ರಜೆಗಳಿಗೆ ಅತ್ಯುತ್ತಮ ರಾಷ್ಟ್ರಪತಿಯಾಗಿ ಸರ್ವರನ್ನು ಮಕ್ಕಳಂತೆ ಪ್ರೀತಿಸಿದ ಕರುಣಾಮಯಿ. ಇವರೇ ನನ್ನ ಬದುಕಿನ ಆದರ್ಶವಾಗಲು ಕಾರಣವಾಗಿದ್ದು ಈ ಸಂಗತಿಗಳು ಎಂದರೆ ತಪ್ಪಲ್ಲ.  ತಮ್ಮ ಬದುಕಲ್ಲಿ ಸಾವಿರಾರು ಯೋಜನೆಗಳನ್ನು ಕೈಗೊಂಡು ಪ್ರತಿ ನಿಮಿಷವೂ ಕೆಲಸ ದಲ್ಲಿ ತಲ್ಲೀನರಾಗಿ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿ, ನಂತರ ಮಕ್ಕಳಿಗೆ ಜೀವನದ ಸಾರವನ್ನು ಹೇಳಿಕೊಟ್ಟು ಸನ್ಮಾರ್ಗದಲ್ಲಿ ನಡೆಸಿದ ಮಹಾತ್ಮ ಇವರು.  ಇಸ್ರೋ, ಡಿ. ಆರ್. ಡಿ. ಒ. ಗಳಲ್ಲಿ ಕಾರ್ಯನಿರ್ವಹಿಸಿ ” ಭಾರತದ ಕ್ಷಿಪಣಿ ಮತ್ತು ಅಣುಬಾಂಬ್ ಗಳ ಜನಕ ” ಎಂದು ಖ್ಯಾತಿಗೊಂಡು 1998 ರಲ್ಲಿ ನ್ಯೂಕ್ಲಿಯರ್ ಪರೀಕ್ಷೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ. ಇಂಜಿನೀಯರ್ ಆಗಿ, ವಿಜ್ಞಾನಿಯಾಗಿ, ಗುರುವಾಗಿ, ಕವಿಯಾಗಿ, ಸಾಹಿತಿಯಾಗಿ ಸಾಧನೆಯ ಶಿಖರ ಏರುತ್ತಾ ರಾಮಾನುಜನ್ ಪ್ರಶಸ್ತಿ, ವೀರ ಸಾವರ್ಕರ್ ಪ್ರಶಸ್ತಿ, ಭಾರತ ರತ್ನ, ಪದ್ಮವಿಭೂಷಣ ಪ್ರಶಸ್ತಿ ಗಳಿಗೆ ಭಾಜನರು ನಮ್ಮ ಕಲಾಂ..

ಜನಸಾಮಾನ್ಯರ ರಾಷ್ಟ್ರಪತಿಗೆ ಮಕ್ಕಳೆಂದರೆ ಅಕ್ಕರೆ. ಮಕ್ಕಳೊಂದಿಗೆ ಮಗುವಂತೆ ಬೆರೆತು ಅರ್ಹ ಮಾಹಿತಿ ನೀಡುವುದೇ ಇವರ ಕನಸು. ಮಕ್ಕಳಿಗೆ ಪಾಠ ಮಾಡುತ್ತ ಗುರುವಾಗಿ ತಾಯ್ನಾಡಿನಲ್ಲೇ ಮಡಿದ ಸಾಧಕ “ಡಾ. ಅಬ್ದುಲ್ ಕಲಾಂ “.

“ಕನಸು ಕಾಣಿರಿ ” ಎಂದಿದ್ದು ರಾತ್ರಿ ಕನಸು ಕಂಡು ಬೆಳಿಗ್ಗೆ ಮರೆಯುವುದಕ್ಕಲ್ಲ. ನಿರಂತರವಾದ ಕನಸಿನ ಜೊತೆಗೆ ಛಲ ಬಿಡದ ಪರಿಶ್ರಮದಿಂದ ಯಶಸ್ಸು ಕಾಣಿರಿ ಎನ್ನುವುದು ಕಲಾಂ ರವರ ನಿಲುವು ಎಂಬುದು ನನಗೆ ಅರಿವಾಗಿದ್ದೆ ಬಹುಶ “ಅಗ್ನಿಯ ರೆಕ್ಕೆಗಳು ‘ಆತ್ಮಕಥನ ವನ್ನು ಓದಿದ ಮೇಲೆ.  ಪ್ರತಿಯೊಬ್ಬ ಸಾಧಕನ ಬದುಕನ್ನು ಆಳವಾಗಿ ನೋಡಿದ್ರೆ ಒಂದಲ್ಲ ಒಂದು ಅಘಾಧ ನೋವೇ ಅವರ ಯಶಸ್ಸಿಗೆ ಕಾರಣವಾಗಿತ್ತೆ.

ನಮ್ಮಲ್ಲಿ ಸಾಧಿಸುವ ಇಚ್ಛಾಶಕ್ತಿ, ತಾಳ್ಮೆ, ಗುರಿ, ಪ್ರಯತ್ನ ಇದ್ರೆ ಜಗತ್ತನ್ನೇ ಗೆಲ್ಲಬಹುದು.  ಕಲಾಂ ರಂತೆ ಬಡತನದಲ್ಲಿ ಬೆಳೆದು ಮುಂದೆ ಯಶಸ್ಸು ಕಂಡವರು ಸಾವಿರಾರು ಮಂದಿ ಇದ್ದಾರೆ. ಆದರೆ ನನ್ನ ಬದುಕಿಗೆ ಆದರ್ಶವಾಗಿದ್ದು ಡಾ. ಅಬ್ದುಲ್ ಕಲಾಂ ರವರ ಆತ್ಮಕಥನ ” ಅಗ್ನಿಯ ರೆಕ್ಕೆಗಳು “.

-ಚೈತ್ರ ಕಬ್ಬಿನಾಲೆ

Tags: APJ Abdul Kalamwings of fire
ShareTweetSendShare
Join us on:

Related Posts

ಕಾಂಗ್ರೆಸ್ ಕೋಟೆಯಲ್ಲಿ ಭಿನ್ನಮತದ ಬಿರುಗಾಳಿ: ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ಡಿಕೆ ಶಿವಕುಮಾರ್ ಆಪರೇಷನ್ ಕ್ಲೀನ್

ಅಸ್ಸಾಂ ಸೇರಿ ಐದೂ ರಾಜ್ಯಗಳಲ್ಲಿ ಗೆಲುವಿನ ನಗೆ ಬೀರಲಿದ್ದೇವೆ ಸಮೀಕ್ಷೆಗಳ ವರದಿ ಉಲ್ಟಾ ಆಗುವುದು ಗ್ಯಾರಂಟಿ ಎಂದ ಡಿಕೆಶಿ

by Shwetha
May 3, 2026
0

ಚುನಾವಣೋತ್ತರ ಸಮೀಕ್ಷೆಗಳು ಕೇವಲ ಅಂಕಿಅಂಶಗಳ ಆಟವಾಗಿದ್ದು ಅವುಗಳ ಮೇಲೆ ನನಗೆ ಕಿಂಚಿತ್ತೂ ನಂಬಿಕೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ....

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

ಜನಸಾಮಾನ್ಯರ ಜೇಬಿಗೆ ಭಾರಿ ಕತ್ತರಿ ಅಡುಗೆ ಎಣ್ಣೆ ದರ ಗಗನಕ್ಕೆ ಬೆಲೆ ಏರಿಕೆಯ ಬಿಸಿಗೆ ಹೈರಾಣಾದ ಸಾರ್ವಜನಿಕರು

by Shwetha
May 3, 2026
0

ರಾಜ್ಯದ ಜನಸಾಮಾನ್ಯರಿಗೆ ಈಗ ಬೆಲೆ ಏರಿಕೆಯ ಬಿಸಿ ಜೋರಾಗಿ ತಟ್ಟುತ್ತಿದೆ. ಈಗಾಗಲೇ ಅಡುಗೆ ಅನಿಲ ಮತ್ತು ತರಕಾರಿಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಈಗ ಅಡುಗೆ ಎಣ್ಣೆಯ...

ಯುದ್ಧ ಮತ್ತೆ ಆರಂಭವಾಗಬಹುದು: ಇರಾನ್ ಎಚ್ಚರಿಕೆ

ಯುದ್ಧ ಮತ್ತೆ ಆರಂಭವಾಗಬಹುದು: ಇರಾನ್ ಎಚ್ಚರಿಕೆ

by Shwetha
May 3, 2026
0

ಅಮೆರಿಕದೊಂದಿಗೆ ಯುದ್ಧ ಮತ್ತೆ ಆರಂಭವಾಗುವ ಸಾಧ್ಯತೆ ಇದೆ ಎಂದು ಇರಾನ್‌ನ ಹಿರಿಯ ಮಿಲಿಟರಿ ಅಧಿಕಾರಿ ಆಸಾದಿ ಎಚ್ಚರಿಕೆ ನೀಡಿದ್ದಾರೆ. ಅವರ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಯಾವುದೇ ಒಪ್ಪಂದಗಳಿಗೆ...

ರಾಜ್ ಕುಮಾರ್ ಅಭಿಮಾನದ ಹೆಸರಲ್ಲಿ ಗೂಂಡಾಗಿರಿ ಮಾಡಬೇಡಿ ಚೇತನ್ ಅಹಿಂಸಾ ಆಕ್ರೋಶ

ಸಾ ರಾ ಗೋವಿಂದು ಅಣ್ಣಾವ್ರ ಹೆಸರು ಕೆಡಿಸುತ್ತಿದ್ದಾರೆ ನಟ ಚೇತನ್ ಅಹಿಂಸಾ ಕಿಡಿ: ಮನೆ ಮುತ್ತಿಗೆ ಹಾಕಿದವರ ವಿರುದ್ಧ ಪೊಲೀಸ್ ದೂರು ದಾಖಲು

by Shwetha
May 3, 2026
0

ಬೆಂಗಳೂರು: ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮತ್ತು ಕನ್ನಡ ಪರ ಸಂಘಟನೆಗಳ ನಡುವಿನ ಸಂಘರ್ಷ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವರನಟ ಡಾ. ರಾಜ್...

ಬೆಂಗಳೂರು ಹೋಟೆಲ್ ಬೆಲೆ ಏರಿಕೆ: ಗ್ರಾಹಕರಿಗೆ ಮತ್ತಷ್ಟು ಹೊರೆ

ಬೆಂಗಳೂರು ಹೋಟೆಲ್ ಬೆಲೆ ಏರಿಕೆ: ಗ್ರಾಹಕರಿಗೆ ಮತ್ತಷ್ಟು ಹೊರೆ

by Shwetha
May 3, 2026
0

ಬೆಂಗಳೂರು ನಗರದ ಹೋಟೆಲ್‌ಗಳಲ್ಲಿ ಊಟ ಮಾಡುವವರಿಗೆ ಇದೀಗ ಮತ್ತಷ್ಟು ಖರ್ಚು ಎದುರಾಗಲಿದೆ. ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಭಾರೀ ಏರಿಕೆಯಾದ ಹಿನ್ನೆಲೆಯಲ್ಲಿ, ಹೋಟೆಲ್ ಮಾಲೀಕರು ತಮ್ಮ ಮೆನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram