ADVERTISEMENT
Wednesday, March 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೇರಿಕನ್ ಯಾತ್ರೆ; ಶ್ರೀಮಂತರ ನಾಡಿನ ಬಡ ರಾಜ್ಯ ಅರ್ಕನ್ಸಾ – ಬಿಲ್ ಕ್ಲಿಂಟನ್ ಹುಟ್ಟಿದ ನೆಲ, ವಾಲ್ ಮಾರ್ಟ್ ನ ಕೇಂದ್ರ ಸ್ಥಾನ 

Mahesh M Dhandu by Mahesh M Dhandu
October 15, 2020
in Newsbeat, Saaksha Special, ಎಸ್ ಸ್ಪೆಷಲ್
Arkansas
Share on FacebookShare on TwitterShare on WhatsappShare on Telegram

ಅಮೇರಿಕನ್ ಯಾತ್ರೆ; ಶ್ರೀಮಂತರ ನಾಡಿನ ಬಡ ರಾಜ್ಯ ಅರ್ಕನ್ಸಾ – ಬಿಲ್ ಕ್ಲಿಂಟನ್ ಹುಟ್ಟಿದ ನೆಲ, ವಾಲ್ ಮಾರ್ಟ್ ನ ಕೇಂದ್ರ ಸ್ಥಾನ

ನಾವು ಯಾವುದೇ ಊರಲ್ಲಿರಲಿ ನಮ್ಮ ಮಣ್ಣಿನ‌ ನೆನಪು ನಮ್ಮನ್ನ‌ ಅಷ್ಟು ಸುಲಭಕ್ಕೆ ಬಿಡುವುದಿಲ್ಲ. ಅಲ್ಲಿ ನಮ್ಮ ಊರಂತೆ ಕಾಣುವ ಪ್ರದೇಶ, ನಮ್ಮೂರ ತಿಂಡಿ ತಿನಿಸು, ನಮ್ಮ ಭಾಷೆ ಇತ್ಯಾದಿಗಳು ಊರ ನೆನಪ ಯಾವುದಾದರೂ ಒಂದು ರೀತಿಯಲ್ಲಿ ಕೊಡುತ್ತಲೇ ಇರುತ್ತವೆ. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ದಟ್ಟ ಕಾಡು, ಮಧ್ಯೆ ಮಧ್ಯೆ ಹರಿಯುವ ಚಿಕ್ಕ ಚಿಕ್ಕ ನದಿಗಳು, ಪುಟ್ಟ ಹುಲ್ಲುಗಾವಲು ಮತ್ತು ಅಲ್ಲಿ ಮೇಯುತ್ತಿರುವ ದನಗಳು, ಸುರಿಯುವ ಮಳೆ ಮುಂತಾದವು ಎಲ್ಲಿ ಕಂಡರೂ ನನ್ನ ಊರ ನೆನಪ ತರಿಸುತ್ತದೆ. ತನ್ನ ಬಹುಪಾಲು ಭಾಗಗಳಲ್ಲಿ ಇಂತಹ ಗುಣಲಕ್ಷಣಗಳನ್ನು ಹೊಂದಿರೋ ಅಮೆರಿಕಾದ ಅರ್ಕನ್ಸಾ ರಾಜ್ಯವು ನನಗೆ ಇಂತಹುದೇ ಅನುಭವ ಕೊಟ್ಟಿತ್ತು. ನ್ಯಾಚುರಲ್ ಸ್ಟೇಟ್ ಅಥವಾ ‘ನೈಸರ್ಗಿಕ ರಾಜ್ಯ’ವೆನ್ನುವ ಅಡ್ಡ ಹೆಸರು ಹೊಂದಿರುವ ಕರ್ನಾಟಕದ ಮುಕ್ಕಾಲರಷ್ಟಿರುವ ಈ ಬಡರಾಜ್ಯದ ಹೆಸರು ಇಲ್ಲಿ ಹರಿಯುವ ಮಿಸ್ಸಿಸ್ಸಿಪ್ಪಿ ನದಿಯ ಉಪನದಿಯಾದ ಅರ್ಕನ್ಸಾಸ್ ನದಿಯಿಂದ ಬಂದಿದೆ. Arkansas Saaksha TV

Related posts

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

March 4, 2026
ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

March 4, 2026

ಈ ರಾಜ್ಯ ಒಳ್ಳೆಯ ವಿಷಯಗಳಿಗಿಂತ ಬೇಡದ ವಿಷಯಗಳಿಗೆ ಪ್ರಸಿದ್ಧವಾಗಿರುವುದು ಜಾಸ್ತಿ. ತಲಾ ಆದಾಯ, ಶಿಕ್ಷಣ, ಆರೋಗ್ಯ, ಶಿಶು ಮರಣ, ಮಾನವ ಅಭಿವೃದ್ಧಿ ಮುಂತಾದ ಯಾವುದೇ ಸೂಚ್ಯಂಕಗಳನ್ನ ತೆಗೆದುಕೊಳ್ಳಿ ಎಲ್ಲದರಲ್ಲೂ ಕೊನೆಯ ಸ್ಥಾನಗಳಲ್ಲಿ ಈ ರಾಜ್ಯ ಬರುತ್ತದೆ. ಸಹಜವಾಗಿಯೆ ತಾನು ಕೊಡುವ ತೆರಿಗೆಗಿಂತ ಹೆಚ್ಚಿನ ಹಣವನ್ನ ಇದು ಪಡೆದುಕೊಳ್ಳುತ್ತದೆ. ವಾಲ್‌ಮಾರ್ಟ್ ಅಂತಹ ದೈತ್ಯ ಕಂಪನಿಯ ಕೇಂದ್ರ ಇಲ್ಲಿದ್ದರೂ, ಅಮೆರಿಕಾದ ಪ್ರಭಾವಶಾಲಿ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಇಲ್ಲಿಯವರಾಗಿದ್ದರೂ (80 ರ ದಶಕದ ನಂತರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಕಡೆ ವಾಲಿದ್ದರೂ ತನ್ನ ಮಣ್ಣಿನ ಮಗನ ಗೆಲ್ಲಿಸಲು ಎರಡು ಬಾರಿ ಡೆಮಾಕ್ರಟಿಕ್ ಪಕ್ಷಕ್ಕೆ ಮತ ನೀಡಿದ್ದರು) ಕೂಡ ಅಭಿವೃದ್ಧಿ ಅಷ್ಟಕ್ಕಷ್ಟೇ. ಒಟ್ಟಾರೆಯಾಗಿ ಹೇಳುವುದಾದರೆ ಶ್ರೀಮಂತ ದೇಶದ ಬಡರಾಜ್ಯ.

ಇದನ್ನೂ ಓದಿ : ಇಂದು ವಿಶ್ವ ವಿದ್ಯಾರ್ಥಿ ದಿನ – ವಿದ್ಯಾರ್ಥಿಗಳ ಸ್ಫೂರ್ತಿಯ ಮೂಲ ಕಲಾಂ ಮೇಷ್ಟ್ರು ಅವರ ಜನ್ಮ‌ದಿನ

ಇಂತಹ ಹಿನ್ನೆಲೆಯಿದ್ದರೂ ಪ್ರವಾಸಿಗರ ಪಾಲಿಗೆ ಈ ರಾಜ್ಯ ಸ್ವರ್ಗ ಸಮಾನ. ಶರತ್ಕಾಲದಲ್ಲಿ ಉದುರುವ ಮುನ್ನ ಬಣ್ಣ ಬದಲಿಸಿದ ಎಲೆಗಳ ಸೌಂದರ್ಯ ನೋಡಲು ಪಕ್ಕದ ರಾಜ್ಯಗಳಿಂದ ಜನ ಬರುತ್ತಾರೆ. ಇಲ್ಲಿರುವ ನೈಸರ್ಗಿಕ ಗುಹೆಗಳು, ಆಣೆಕಟ್ಟುಗಳ ಹಿನ್ನೀರು, ದಟ್ಟ ಕಾನನಗಳು ಪ್ರವಾಸಿಗರ ಮನಸ್ಸಿಗೆ ಮುದ ನೀಡುತ್ತವೆ. ಹಾಟ್ ಸ್ಪ್ರಿಂಗ್ ನಗರದಲ್ಲಿರುವ, ದಕ್ಷಿಣ ಭಾರತೀಯರಿಗೆ ಬಹು ಅಪರೂಪವಾದ ಇಲ್ಲಿನ ನೈಸರ್ಗಿಕ ಬಿಸಿನೀರಿನ ಬುಗ್ಗೆಗಳು ಬೆರಗು ಮೂಡಿಸುತ್ತವೆ.

ವಾಲ್‌ಮಾರ್ಟಿನ ಕೇಂದ್ರ ಕಛೇರಿಯಿರುವ ಬೆಂಟನ್‌ವಿಲ್ಲೆ ಬಿಟ್ಟರೆ ಉಳಿದೆಡೆ ಭಾರತೀಯರು ಕಮ್ಮಿಯೇ‌. ಬೇರೆಡೆ ವ್ಯಾಪಾರದಲ್ಲಿ ತೊಡಗಿರುವ, ವೈದ್ಯಕೀಯ ವೃತ್ತಿಯಲ್ಲಿರುವ, ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಅನ್ನ ಸಾಂಬಾರು ರೋಟಿ ಕರಿ ಚಿಕನ್ ಬಿರಿಯಾನಿಯೇ ಬೇಕೆನ್ನುವ ಭಾರತೀಯ ಪ್ರವಾಸಿಗರ ತೃಪ್ತಿ ಪಡಿಸಲು ರೆಸ್ಟೋರೆಂಟುಗಳನ್ನ ಇಟ್ಟಿರುವ (ತಮಾಷೆಗೆ ಹೇಳಿದ್ದಷ್ಟೇ, ಅನೇಕ ಸ್ಥಳೀಯರು ಭಾರತೀಯ ಅಡುಗೆಗಳ ಇಷ್ಟಪಟ್ಟು ತಿನ್ನುತ್ತಾರೆ) ಚಿಕ್ಕ ಸಂಖ್ಯೆಯ ಭಾರತೀಯರ ಕಾಣಬಹುದಷ್ಟೇ.
ಏನೇ ಇರಲಿ ಕೇವಲ ಎರಡು ರಾತ್ರಿ ಮೂರು ಹಗಲುಗಳ ಕಾಲ ವಾಸವಾಗಿದ್ದ ಈ ರಾಜ್ಯ ನನಗೆ ಬಹಳ ಇಷ್ಟವಾಗಿತ್ತು. ನನ್ನ ಸಂಸ್ಥೆಯ ಹಿರಿಯ ವ್ಯವಸ್ಥಾಪಕರೊಬ್ಬರ ಜೊತೆ ಅರ್ಕನ್ಸಾವನ್ನು ಹೊಗಳಿದಾಗ ಅಲ್ಲೇನಿದೆಯೋ ಮಣ್ಣು ಎಂದು ಕೇಳಿದ್ದರು. ನನಗಿಷ್ಟವಾದ ಕಾರಣ ಹೇಳಿದಾಗ ಏನೋ ನೆನಪಾದಂತೆ, ಮಲೆನಾಡಿನವರಾದ ತಮ್ಮ ಹೆಂಡತಿಗೂ ಬಹಳ‌ ಇಷ್ಟವಾಗಿತ್ತು ಎಂದರು..

ಇದನ್ನೂ ಓದಿ : ಕಲ್ಪತರು ನಾಡಿನಲ್ಲಿರುವ ಮಧುಗಿರಿ ಬೆಟ್ಟದ ವೈಭವ..!

ಮುಂದೆ ನೀವು ಪ್ರವಾಸಿಯಾಗಿ ಅಮೆರಿಕಾಗೆ ಭೇಟಿಕೊಡುವ ಸಂದರ್ಭ ಬಂದರೆ ಇಲ್ಲಿ ಭೇಟಿ ಕೊಡುವ ಸಾಧ್ಯತೆ ಕಮ್ಮಿಯೇ. ದೀರ್ಘಕಾಲ ನೆಲೆ ನಿಲ್ಲಲು ಹೋದರೆ ಒಮ್ಮೆಯಾದರೂ ತಿರುಗಾಡುವ ಮನಸ್ಸು ಮಾಡಿ. ಆದರೆ ನನಗೆ ಫ್ಲೋರಿಡಾಕ್ಕಿಂತ ಅರ್ಕನ್ಸಾ ಇಷ್ಟವಾಯಿತು, ವೇಗಸ್ಸಿಗಿಂತ ಹಾಟ್‌ಸ್ಪ್ರಿಂಗ್ ಇಷ್ಟವಾಯಿತೆಂದರೆ ಜನ ನಿಮ್ಮನ್ನ ವಿಚಿತ್ರ ಪ್ರಾಣಿಗಳ ಗುಂಪಿಗೆ ಸೇರಿಸ್ತಾರೆ ಅಷ್ಟೇ.

Arkansas Saaksha TV

ವಿ.ಸೂ:- ಈ ಪಟವನ್ನು ಅರ್ಕನ್ಸಾದ ಹಾಟ್‌ಸ್ಪ್ರಿಂಗ್ ನಗರದಲ್ಲಿ ತೆಗೆದಿದ್ದು.

-ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: americaArkansasBill Clinton
ShareTweetSendShare
Join us on:

Related Posts

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ: ಡಿಸಿಎಂ ಡಿಕೆಶಿ ಡಿನ್ನರ್ ಕೂಟ ಆಯೋಜನೆ

by Shwetha
March 4, 2026
0

ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ (KPCC) ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಅವರು ಆ ಹುದ್ದೆಯಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ...

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

ಇರಾನ್–ಇಸ್ರೇಲ್ ಸಂಘರ್ಷದ ಪರಿಣಾಮ: ಬೆಂಗಳೂರಿಗೆ ತಟ್ಟುತ್ತಾ ಡ್ರೈಫ್ರೂಟ್ಸ್ ಬೆಲೆ ಏರಿಕೆ?

by Shwetha
March 4, 2026
0

ಇರಾನ್–ಇಸ್ರೇಲ್ ನಡುವಿನ ಸಂಘರ್ಷ ಜಾಗತಿಕ ವ್ಯಾಪಾರಕ್ಕೆ ಧಕ್ಕೆಯೊಡ್ಡುತ್ತಿರುವ ಹಿನ್ನೆಲೆ, ಅದರ ಪರಿಣಾಮ ಬೆಂಗಳೂರಿನ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿಶೇಷವಾಗಿ...

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

ಅಧಿಕಾರ ಹಸ್ತಾಂತರದ ಸುಳಿವು ನೀಡಿದ್ರಾ ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಇರ್ತಾರೆ ಎಂದ ಮಾತುಗಳ ಹಿಂದಿನ ಮರ್ಮವೇನು

by Shwetha
March 4, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ರಣರೋಚಕ ಚರ್ಚೆ ಶುರುವಾಗಿದೆ. ರಾಜ್ಯ ಬಜೆಟ್ ಮಂಡನೆ ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ...

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

ದರ್ಶನ್ ಕೇಸ್‌ನಲ್ಲಿ ಪೊಲೀಸರ ಎಡವಟ್ಟು ಬಯಲು ಕೋರ್ಟ್ ಅಂಗಳದಲ್ಲಿ ತನಿಖಾಧಿಕಾರಿಗಳ ವಿರುದ್ಧ ಸಿಡಿದೆದ್ದ ಜಡ್ಜ್

by Shwetha
March 4, 2026
0

ರಾಜ್ಯವನ್ನೇ ಬೆಚ್ಚಿಬೀಳಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬೀಳುತ್ತಿದೆ. ಇದೀಗ ಹೈ ಪ್ರೊಫೈಲ್ ಆರೋಪಿ ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ವಿರುದ್ಧದ ತನಿಖೆಯಲ್ಲಿ ಪೊಲೀಸರು...

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

ಮಧ್ಯಪ್ರಾಚ್ಯ ಸಂಘರ್ಷ: ಭಾರತ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು – ರಾಹುಲ್ ಗಾಂಧಿ

by Shwetha
March 4, 2026
0

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಭಾರತವು ಈ ವಿಚಾರದಲ್ಲಿ ನೈತಿಕವಾಗಿ ಸ್ಪಷ್ಟ ನಿಲುವು ತಾಳಬೇಕು ಎಂದು ಹೇಳಿದ್ದಾರೆ. ಇರಾನ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram