ಇಂದು ವಿಶ್ವ ವಿದ್ಯಾರ್ಥಿ ದಿನ – ವಿದ್ಯಾರ್ಥಿಗಳ ಸ್ಫೂರ್ತಿಯ ಮೂಲ ಕಲಾಂ ಮೇಷ್ಟ್ರು ಅವರ ಜನ್ಮದಿನ – Kalam sir bday
ಮಂಗಳೂರು, ಅಕ್ಟೋಬರ್15: ಪ್ರತಿ ವರ್ಷ ಅಕ್ಟೋಬರ್ 15 ರಂದು ವಿಶ್ವ ವಿದ್ಯಾರ್ಥಿ ದಿನಾಚರಣೆಯನ್ನು ಆಚರಿಸಲಾಗುತ್ತದೆ. Kalam sir bday
ಇದು ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಸೂಚಿಸುತ್ತದೆ. ವಿಶ್ವಸಂಸ್ಥೆಯು ಅಕ್ಟೋಬರ್ 15 ಅನ್ನು 2010 ರಲ್ಲಿ ವಿಶ್ವ ವಿದ್ಯಾರ್ಥಿ ದಿನವೆಂದು ಘೋಷಿಸಿತು.
ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ವಿಶ್ವ ವಿದ್ಯಾರ್ಥಿ ದಿನವನ್ನು ಏಕೆ ಆಚರಿಸಲಾಗುತ್ತದೆ?
‘ಭಾರತದ ಕ್ಷಿಪಣಿ ಮನುಷ್ಯ’ ಎಂದು ಜನಪ್ರಿಯವಾಗಿರುವ ಕಲಾಂ ಅವರು 1931 ರ ಅಕ್ಟೋಬರ್ 15 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಅವರು 2002 ರಿಂದ 2007 ರವರೆಗೆ ಭಾರತದ 11 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.
ಕಲಾಂ ಕೇವಲ ರಾಜಕಾರಣಿ ಮತ್ತು ಏರೋಸ್ಪೇಸ್ ವಿಜ್ಞಾನಿ ಮಾತ್ರವಲ್ಲ, ಶಿಕ್ಷಕರೂ ಆಗಿದ್ದರು. ಜೊತೆಗೆ ಜಗತ್ತು ತನ್ನನ್ನು ಶಿಕ್ಷಕನಾಗಿ ನೆನಪಿಸಿಕೊಳ್ಳಬೇಕೆಂದು ಅವರು ಬಯಸಿದ್ದರು.
ಮಿಸೈಲ್ ಮ್ಯಾನ್, ಸರಳ ಸಜ್ಜನ, ಭಾರತ ಕಂಡ ಅದ್ಭುತ ವಿಜ್ಞಾನಿ, ದೇಶದ 11ನೇ ರಾಷ್ಟ್ರಪತಿ ತಮ್ಮ ಸಾಧನೆಯಿಂದಲೇ ಆಕಾಶದೆತ್ತರಕ್ಕೆ ಬೆಳೆದವರು.
ಭಾರತದ ಮಾಜಿ ರಾಷ್ಟ್ರಪತಿ ಅವುಲ್ ಪಕೀರ್ ಜೈನುಲಾಬ್ಡೀನ್ ಅಬ್ದುಲ್ ಕಲಾಂ ಅವರು ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿಯೂ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಜನರ ಪ್ರೆಸಿಡೆಂಟ್ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುತ್ತಿದ್ದ, ಕಲಾಂ ಅವರು ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿ ಹಾಗೂ ಪರೀಕ್ಷೆಯ ನೇತೃತ್ವ ವಹಿಸಿ ಯಶಸ್ವಿಯಾಗಿದ್ದರು. ಹಾಗಾಗಿ ಕಲಾಂ ಅವರನ್ನು ಮಿಸೈಲ್ ಮ್ಯಾನ್ ( ಕ್ಷಿಪಣಿ ಮನುಷ್ಯ ) ಎಂದೇ ಕರೆಯಲಾಗುತ್ತದೆ.
ಭವ್ಯ ಭಾರತದ ಬಗ್ಗೆ ಅದೆಷ್ಟೋ ಕನಸುಗಳನ್ನು ಕಂಡ ಕ್ಷಿಪಣಿ ಮನುಷ್ಯ ಶಿಕ್ಷಣದ ಮಹತ್ವವನ್ನು ಇಡೀ ದೇಶಕ್ಕೆ ಸಾರಿದ್ದರು.
ಯುವ ವಿದ್ಯಾರ್ಥಿಗಳಿಗೆ ಸದಾ ಪ್ರೇರಣೆಯಾಗಿದ್ದ ಎಪಿಜೆ ಅವರನ್ನು ರಾಷ್ಟ್ರಪತಿ ಹುದ್ದೆಯಿಂದ ನಿವೃತ್ತರಾದ ಮೇಲೆ ಮುಂದೇನು ಮಾಡುತ್ತೀರಿ ಎಂದು ಪ್ರಶ್ನಿಸಿದಾಗ ಅವರು, ನಾನು ಮೊದಲು ಶಿಕ್ಷಕನಾಗಿದ್ದೆ. ನಂತರವೂ ಶಿಕ್ಷಕನಾಗಿ ಮುಂದುವರಿಯುತ್ತೇನೆ ಎಂದಿದ್ದರು.
ಜನರು ತಮ್ಮನ್ನು ವಿಜ್ಞಾನಿ ಎಂದು ನೆನಪಿಸಿಕೊಳ್ಳುವುದಕ್ಕಿಂತ, ಶಿಕ್ಷಕ ಎಂದು ನೆನಪಿಸಿಕೊಳ್ಳಬೇಕು ಎಂದು ಬಯಸಿದ್ದ ಕಲಾಂ ಮೇಷ್ಟ್ರು, ಜುಲೈ 27, 2015 ರಂದು ಶಿಲ್ಲಾಂಗ್ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದರು.
ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಜೀವನದಲ್ಲಿ ಅಸಾಧಾರಣ ವಿಷಯಗಳನ್ನು ಸಾಧಿಸಬೇಕು ಎಂದು ಯುವಕರಲ್ಲಿ ಧೈರ್ಯ ತುಂಬಿದ ಎಪಿಜೆ ಅವರ ಸರಳತೆ, ದೇಶಪ್ರೇಮ, ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ ಯಾವಾಗಲೂ ಜನ ಮಾನಸದಲ್ಲಿರುತ್ತಾರೆ.
ಭಾರತದ ನಾಗರಿಕ ಪ್ರಶಸ್ತಿಗಳಾದ ಪದ್ಮ ಭೂಷಣ (1981), ಪದ್ಮವಿಭೂಷಣ (1990) ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ (1997) ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಮುಡಿಗೇರಿವೆ.
ದೈಹಿಕವಾಗಿ ಕಲಾಂ ಸರ್ ಅವರು ನಮ್ಮಿಂದ ದೂರವಾಗಿದ್ದರೂ, ಅವರ ಜೀವನ, ಆದರ್ಶ, ಸಿದ್ಧಾಂತ, ಸಂದೇಶ ಎಂದೆಂದಿಗೂ ಅಮರ..
ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಕೆಲವು ಸ್ಪೂರ್ತಿದಾಯಕ ಮಾತುಗಳು ಇಲ್ಲಿವೆ
ನಿಮ್ಮ ಧ್ಯೇಯದಲ್ಲಿ ಯಶಸ್ವಿಯಾಗಬೇಕು ಎಂದರೆ, ನೀವು ನಿಮ್ಮ ಗುರಿಯ ಬಗ್ಗೆ ಏಕ ಮನಸ್ಸಿನ ಭಕ್ತಿ ಹೊಂದಿರಬೇಕು
ನಮ್ಮೆಲ್ಲರಿಗೂ ಸಮಾನ ಪ್ರತಿಭೆ ಇಲ್ಲ. ಆದರೆ, ನಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ನಮಗೆಲ್ಲರಿಗೂ ಸಮಾನ ಅವಕಾಶವಿದೆ.
ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ಅಭ್ಯಾಸವನ್ನು ನೀವು ಬದಲಾಯಿಸಬಹುದು, ಮತ್ತು ಖಂಡಿತವಾಗಿಯೂ ನಿಮ್ಮ ಅಭ್ಯಾಸಗಳು ನಿಮ್ಮ ಭವಿಷ್ಯವನ್ನು ಬದಲಾಯಿಸುತ್ತವೆ.
ಯಾರನ್ನಾದರೂ ಸೋಲಿಸುವುದು ತುಂಬಾ ಸುಲಭ, ಆದರೆ ಯಾರನ್ನಾದರೂ ಗೆಲ್ಲುವುದು ತುಂಬಾ ಕಷ್ಟ.
ನಿಮ್ಮ ಅತ್ಯುತ್ತಮ ಶಿಕ್ಷಕ ನಿಮ್ಮ ಕೊನೆಯ ತಪ್ಪು.
ನಮ್ಮನ್ನು ಸೋಲಿಸಲು ನಾವು ಸಮಸ್ಯೆಗೆ ಅನುಮತಿಸಬಾರದು
ಮನುಷ್ಯನಿಗೆ ಜೀವನದಲ್ಲಿ ಕಷ್ಟಗಳು ಬೇಕಾಗುತ್ತವೆ ಏಕೆಂದರೆ ಅವು ಯಶಸ್ಸನ್ನು ಆನಂದಿಸಲು ಅವಶ್ಯಕ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ