ಪ್ರತ್ಯೇಕತಾವಾದಿ ಹುರಿಯತ್ ನಾಯಕ ಅಶ್ರಫ್ ಸೆಹ್ರಾಯ್, ಜಮಾಅತ್ ಸದಸ್ಯರು ಕಾಶ್ಮೀರದಲ್ಲಿ ಬಂಧನ
ಜಮ್ಮು ಕಾಶ್ಮೀರ, ಜುಲೈ 12 : ಪ್ರತ್ಯೇಕತಾವಾದಿ ಹುರಿಯತ್ ನಾಯಕ ಅಶ್ರಫ್ ಸೆಹ್ರಾಯ್ ಮತ್ತು ನಿಷೇಧಿತ ಜಮಾಅತೆ ಇಸ್ಲಾಮಿಯ ಕೆಲವು ಸದಸ್ಯರನ್ನು ಬಂಧಿಸಲಾಗಿದ್ದು, ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಭಾನುವಾರ ತಿಳಿಸಿದ್ದಾರೆ.
ಸೆಹ್ರಾಯ್ ಪಾಕಿಸ್ತಾನ ಪರ ತೆಹ್ರೀಕ್-ಎ-ಹುರಿಯತ್ ಅಧ್ಯಕ್ಷರಾಗಿದ್ದಾರೆ. ಅವರಲ್ಲದೆ, ಜಮಾತೆ-ಇ-ಇಸ್ಲಾಮಿಯ ಸದಸ್ಯರನ್ನುಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಿಂಗ್ ಹೇಳಿದರು.
ಸೆಹ್ರಾಯ್ ಗೀಲಾನಿಯಿಂದ ಅಧಿಕಾರ ವಹಿಸಿಕೊಂಡ ಮೇಲೆ 26 ಪ್ರತ್ಯೇಕತಾವಾದಿ ಪಕ್ಷಗಳ ಸಂಘಟನೆಯಾದ ಆಲ್ ಪಾರ್ಟಿ ಹುರಿಯತ್ ಸಮ್ಮೇಳನದಲ್ಲಿ ತೆಹ್ರೀಕ್-ಎ-ಹುರಿಯತ್ ಅನ್ನು ಪ್ರತಿನಿಧಿಸುತ್ತಿದ್ದರು. ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿ ಅವರು ಕಾಶ್ಮೀರ ರಾಜಕೀಯದಿಂದ ಸಂಪೂರ್ಣ ದೂರವಿರುವುದನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಹುರಿಯತ್ನ ಈ ಬಣವು ಮಿರ್ವಾಯಿಜ್ ಉಮರ್ ಫಾರೂಕ್ ನೇತೃತ್ವದ ತಂಡಕ್ಕಿಂತ ಭಿನ್ನವಾಗಿದೆ.ಅವರು ಜಮ್ಮು ಮತ್ತು ಕಾಶ್ಮೀರದಲ್ಲಿನ ಹಿಂಸಾಚಾರವನ್ನು ಕೊನೆಗೊಳಿಸಲು ಬೆಂಬಲಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ನ ವಿಭಾಗೀಯ ಕಮಾಂಡರ್ ಸೆಹ್ರಾಯ್ ಅವರ ಮಗ ಜುನೈದ್ ಸೆಹ್ರಾಯ್ ಮೇ ತಿಂಗಳಲ್ಲಿ ನಗರದ ನವಾಕಾಡಲ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟನು.