ಯಾದಗಿರಿ: ಅಕ್ರಮ ಮರಳು ದಂಧೆ (Illegal Sand Trade) ಮಾಡುತ್ತಿರುವುದನ್ನು ವಿರೋಧಿಸಿದ್ದಕ್ಕೆ ಇಬ್ಬರನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಶಹಾಪುರದ (Shahapur) ವಿಭೂತಳ್ಳಿ ಹತ್ತಿರ ನಡೆದಿದೆ. ರಾಜು ನಡಿಹಾಳ್ ಹಾಗೂ ಶರಣಗೌಡ ಹಯ್ಯಾಳ ಹೀಗೆ ಹಲ್ಲೆಗೊಳಗಾದವರು. ರೌಡಿ ಶೀಟರ್ ವಿಜಯ ರಾಠೋಡ್ ಹಾಗೂ ಸಹಚರರು ಅಪಹರಣ ನಡೆಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ವಿಜಯ ರಾಠೋಡ್ ಗ್ರಾಮ ಪಂಚಾಯ್ತಿ ಸದಸ್ಯನಾಗಿದ್ದು, ಸಚಿವ ಶರಣಬಸಪ್ಪ ದರ್ಶನಾಪೂರ ಬೆಂಬಲಿಗ ಎನ್ನಲಾಗುತ್ತಿದೆ. ಹೀಗಾಗಿ ದರ್ಪದಿಂದ ಮೆರೆಯುತ್ತಿದ್ದ ಎನ್ನಲಾಗಿದ್ದು, ಇಬ್ಬರನ್ನೂ ಕಾರಿನಲ್ಲಿ ಅಪಹರಿಸಿ ಡಿಕ್ಕಿ ಒಳಗೆ ಹಾಕಿ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ನಂತರ ಇಬ್ಬರನ್ನೂ ಜೀವಂತವಾಗಿ ನದಿಗೆ ಎಸೆಯಲು ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ. ಸ್ಥಳೀಯರು ಇದನ್ನು ಗಮನಿಸಿದ್ದರಿಂದಾಗಿ ಎಂಬ ಮಾತುಗಳು ಕೇಳಿ ಬಂದಿವೆ. ಸದ್ಯ ಹಲ್ಲೆಗೊಳಗಾದವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.