ಮೈಸೂರು: ಪ್ರಧಾನಿ ನರೇಂದ್ರ ಮೋದಿ ಪರ ಹಾಡು ಬರೆದಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಹಳ್ಳಿಕೆರೆಹುಂಡಿ ಗ್ರಾಮದ ಲಕ್ಷ್ಮೀನಾರಾಯಣ್ ಎಂಬ ವ್ಯಕ್ತಿಯೇ ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರು. ಸದ್ಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಲೀಂ, ಜಾವೀದ್, ಪಾಷಾ ಸೇರಿದಂತೆ ಇತರ ಇಬ್ಬರು ವ್ಯಕ್ತಿಗಳ ಮೇಲೆ ಎಫ್ಐಆರ್ ದಾಖಲಾಗಿದೆ.
ಕಳೆದ ವಾರ ನಾನು ಮೋದಿ ಪರ ಹಾಡು ಬರೆದಿದ್ದೆ. ಜನರ ಮುಂದೆ ಈ ಹಾಡು ತೋರಿಸಿ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡುವಂತೆ ಕೇಳಿಕೊಳ್ಳುತ್ತಿದ್ದೆ. ಶುಕ್ರವಾರ ಕೂಡ ಸರ್ಕಾರಿ ಗೆಸ್ಟ್ ಹೌಸ್ನ ಪಾರ್ಕ್ನಲ್ಲಿ ಕುಳಿತಿದ್ದೆ. ಈ ವೇಳೆ ನಾನು ಓರ್ವ ಹುಡುಗನನ್ನು ಕರೆದು ಹಾಡು ತೋರಿಸಿದ್ದೇನೆ. ಆತ ಚೆನ್ನಾಗಿದೆ ಎಂದು ಹೇಳಿ, ನನ್ನ ಸ್ನೇಹಿತರಿಗೂ ತೋರಿಸಿ ಎಂದು ಹೇಳಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಎಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ. ಉರ್ದು ಭಾಷೆಯಲ್ಲಿ ಬೈದು, ಸಿಗರೇಟ್ ನಿಂದ ಸುಟ್ಟಿದ್ದಾರೆ. ಬೀಯರ್ ಸುರಿದಿದ್ದಾರೆ ಎಂದು ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.