ಬಿ.ಎಸ್.ಯಡಿಯೂರಪ್ಪ ವ್ಯಕ್ತಿ ಅಲ್ಲ, ದೊಡ್ಡ ಶಕ್ತಿ : ಶ್ರೀರಾಮುಲು B Shriramulu saaksha tv
ಚಿತ್ರದುರ್ಗ : ಬಿ.ಎಸ್. ಯಡಿಯೂರಪ್ಪ ವ್ಯಕ್ತಿಯಲ್ಲ, ದೊಡ್ಡ ಶಕ್ತಿ. ಅವರ ಮಾರ್ಗದರ್ಶನದಲ್ಲಿ ನಾವು ಸಾಗಿದ್ದೇವೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಬಿ.ಎಸ್.ವೈ ಆಪ್ತರ ಮನೆಯ ಮೇಲೆ ಐಟಿ ದಾಳಿ ನಡೆಸಿದ ಬಗ್ಗೆ ವಿಪಕ್ಷದ ನಾಯಕರು ಬಿಎಸ್ ವೈ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ.
ಈ ಬಗ್ಗೆ ಮೊಳಕಾಲ್ಮೂರಲ್ಲಿ ಮಾತನಾಡಿದ ಶ್ರೀರಾಮುಲು, ಯಡಿಯೂರಪ್ಪ ಅವರ ಬಗ್ಗೆ ಬೇರೆ ಬೇರೆ ಪಕ್ಷದವರಿಂದ ಅವರಿಗನ್ನಿಸಿದಂತೆ ಹೇಳಿಕೆ ನೀಡುತ್ತಿದ್ದಾರೆ.
ಆದರೆ ನಾವೆಲ್ಲರೂ ಅವರ ಮಾರ್ಗದರ್ಶನದಲ್ಲೇ ಸಾಗುತ್ತಿದ್ದೇವೆ. ಹಾಗೆಯೇ ಐಟಿ ದಾಳಿ ಬಗ್ಗೆ ಕೂಡ ಅವರವರ ಮನಸ್ಥಿತಿ ಮೇಲೆ ಹೇಳಿಕೆ ನೀಡ್ತಿದ್ದಾರೆ ಎಂದು ಟಾಂಗ್ ನೀಡಿದರು.
ಇನ್ನು ಕಾಂಗ್ರೆಸ್ಸಿಗರಿಗೆ ಉಪಚುನಾವಣೆ ಸೋಲುವ ಹತಾಶೆ ಆರಂಭವಾಗಿದ್ದು, ಸೋಲುವ ಭೀತಿಯಿಂದಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಚುನಾವಣೆ ಬಂದಾಗ ಮಾತ್ರ ಅಹಿಂದ ನೆನಪಾಗುತ್ತದೆ. ಚುನಾವಣೆ ಬಳಿಕ ಅಹಿಂದ ಮರೆತು ಅರಾಮದಲ್ಲಿರುತ್ತಾರೆ ಎಂದು ಕುಟುಕಿದ್ದಾರೆ.