ಕೆಟ್ಟ ಶಬ್ದ, ವೈಯಕ್ತಿಕ ನಿಂದನೆ ಕಾಂಗ್ರೆಸ್ ನಾಯಕರಿಗೆ ರೂಡಿಯಾಗಿದೆ – ಸಂಬಿತ್ ಪಾತ್ರಾ
ಕೆಟ್ಟ ಶಬ್ಧಗಳನ್ನು ಬಳಸುವುದು ವೈಯಕ್ತಿಕ ನಿಂದನೆ ಮಾಡುವುದು, ಕಾಂಗ್ರೆಸ್ ನ ನಾಯಕರಿಗೆ ರೂಢಿಯಾಗಿ ಹೋಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾವಣ ಎಂದು ನಿಂದಿಸಿದ್ದರು, ಈಗ ಕರ್ನಾಟಕದ ಮತ್ತೊಬ್ಬ ನಾಯಕ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮೋದಿ ಅವರನ್ನು ಭಸ್ಮಾಸುರ ಎಂದು ಕರೆಯುವ ಮೂಲಕ ಪ್ರಧಾನಿಗೆ ಅವಮಾನ ಮಾಡಿದ್ದಾರೆ. ಇದು ಅಕ್ಷಮ್ಯ ಎಂದು ಹೇಳಿದರು.
ಕಾಂಗ್ರೆಸ್ ಕೆಲವು ನಾಯಕರು ಮೋದಿ ಅವರನ್ನು ಸಾವಿನ ವ್ಯಾಪಾರಿ ಎಂದರು, ಚೌಕಿದಾರ್ ಚೋರ್ ಎಂದರು, ಹೀಗೆ ನೂರು ನಿಂದನೆ ಪೂರ್ಣವಾಗಿದ್ದು, ಕಾಂಗ್ರೆಸ್ ತನ್ನನ್ನು ತಾನು ಶಿಶುಪಾಲನಂತೆ ಪ್ರದರ್ಶಿಸಿಕೊಳ್ಳುತ್ತಿದೆ. ಜನತಾ ಜನಾರ್ದನರೇ ಶ್ರೀಕೃಷ್ಣನಂತೆ ಲೋಕತಂತ್ರ ಸುದರ್ಶನ ಚಕ್ರ ಧರಿಸಿ ತಕ್ಕ ಪಾಠ ಕಲಿಸುತ್ತಾರೆ ಎಂದರು.
Bad language, personal abuse is the norm for Congress leaders – Sambit Patra