ಬಾಗಲಕೋಟೆ : ಬಾಗಲಕೋಟೆಯ ಕೆರೂರು ಪಟ್ಟಣದಲ್ಲಿ ಗುಂಪು ಘರ್ಷಣೆ ನಡೆದಿದ್ದು , ಪರಿಸ್ಥಿತಿ ಉದ್ಘಿಗ್ನ ಗೊಂಡಿತ್ತು.. ಮಾರುಕಟ್ಟೆಯಲ್ಲಿ ಒಂದು ಕೋಮಿನವರಿಗೆ ಸೇರಿದ ತರಕಾರಿ ಚೆಲ್ಲಿ ಆಕ್ರೋಶ ಹಾಕಲಾಗಿದ್ದು ಎರಡು ತಳ್ಳುಗಾಡಿಗೆ ಬೆಂಕಿ ಹಚ್ಚಿರುವ ಘಟನೆ ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ..
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.. ಸ್ಥಳಕ್ಕೆ ಕೆರೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಪರಿಸ್ಥಿತಿಯನ್ನ ನಿಯಂತ್ರಿಸಿದ್ದರೂ , ಸ್ಥಳದಲ್ಲಿ ಬಿಗುವಿನ ವಾತಾರವಣ ನಿರ್ಮಾಣವಾಗಿದೆ.. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ..
ಘಟನೆಯಲ್ಲಿ ಅರುಣ ಹಾಗೂ ಲಕ್ಷ್ಮಣ ಸಹೋದರರು ಚಾಕು ಇರಿತಕ್ಕೆ ಒಳಗಾಗಿದ್ಧಾರೆ… ಬಾಗಲಕೋಟೆ ಖಾಸಗಿ ಆಸ್ಪತ್ರೆಗೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗ್ತಿದೆ… ಆಸ್ಪತ್ರೆಯಲ್ಲಿ ಗಾಯಾಳುಗಳ ಸಹೋದರಿ ರುಕ್ಮವ್ವ ಕಣ್ಣೀರು ಸುರಿಸಿದ್ದಾರೆ. ರುಕ್ಮವ್ವ ಅವರಿಗೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ..
ಇನ್ನೂ 144 ಜಾರಿಯಾಗಿರೋದ್ರಿಂದ ಕೆರೂರು ಪಟ್ಟಣ ಸಂಪೂರ್ಣ ಸ್ಥಬ್ಧವಾಗಿದೆ.. ಅಂಗಡಿ ಮುಂಗಟ್ಟುಗಳೆಲ್ಲವೂ ಬಂದ್ ಆಗಿದೆ.. ತರಕಾರಿ ಮಾರುಕಟ್ಟೆ , ಮುಖ್ಯ ರಸ್ತೆ ಬಿಕೊ ಅಂತಿದೆ.. ಸ್ಥಳದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.. ನಿನ್ನೆ ರಾತ್ರಿ 11.30 ರಿಂದ ಜುಲೈ 8 ನೇ ತಾರೀಖು ರಾತ್ರಿ 88 ರವರೆಗೆ ನಿಷೇದಾಜ್ಞೆ ಜಾರಿಯಾಗಿದೆ..
ನಿನ್ನೆ ಗುಂಪು ಘರ್ಷಣೆ ನಡೆದು ಮೂವರಿಗೆ ಚಾಕು ಇರಿಯಲಾಗಿತ್ತು. ಹಿಂದು ಜಾಗರಣಾ ವೇದಿಕೆ ಅರುಣ ಕಟ್ಟಿಮನಿ,ಲಕ್ಷ್ಮಣ ಕಟ್ಟಿಮನಿ,ಯಮನೂರು ಎಂಬುವರಿಗೆ ಚಾಕು ಇರಿಯಲಾಗಿತ್ತು.. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ..