Bangalore | 4 ವರ್ಷದ ಮಗುವನ್ನು ಕೊಂದ ತಾಯಿ
ಮಗುವವನ್ನು ಕೊಂದು ಆತ್ಮಹತ್ಯೆಗೆ ಯತ್ನ
ಮಾನಸಿಕ ಖಿನ್ನತೆಯಿಂದ ತಾಯಿ ನಡೆಸಿದ ಕೃತ್ಯ
ಬೆಂಗಳೂರಿನ ಹೆಚ್ ಎ ಎಲ್ ನಲ್ಲಿ ನಡೆದ ಘಟನೆ
ನಾಲ್ಕು ವರ್ಷದ ಸಂಯುಕ್ತಾ ಮೃತ ಮಗು
ಬೆಂಗಳೂರು : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ತನ್ನ ನಾಲ್ಕು ವರ್ಷದ ಮಗುವನ್ನು ನೀರಿನ ಟಬ್ ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೆಚ್ ಎಎಲ್ ನ ಸಮೀಪ ದೊಡ್ಡನೆಕ್ಕುಂದಿಯಲ್ಲಿ ನಡೆದಿದೆ.
ಸಂಯುಕ್ತಾ ಮೃತ ಮಗುವಾಗಿದೆ. ಗಾಯತ್ರಿ ದೇವಿ ಮಗುವನ್ನು ಕೊಂದು ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನೇಣು ಬಿಗಿದುಕೊಂಡಿದ್ದ ಗಾಯತ್ರಿ ದೇವಿ ಸದ್ಯ ಬದುಕುಳಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡು ಮೂಲದ ನರೇಂದ್ರ ಹಾಗೂ ಗಾಯತ್ರಿ ದೇವಿ ದಂಪತಿ, ಮಗು ಸಂಯುಕ್ತ ಜತೆ ದೊಡ್ಡನೆಕ್ಕುಂದಿಯ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿದ್ದರು.
![Bangalore - 24-year-old woman drowns daughter saaksha tv](http://saakshatv.com/wp-content/uploads/2022/08/Capture-78.png)
ನರೇಂದ್ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕೆಲಸದ ನಿಮಿತ್ತ ಅವರು ಭಾನುವಾರ ತಮಿಳುನಾಡಿಗೆ ಹೋಗಿದ್ದರು.
ಸೋಮವಾರ ವಾಪಸ್ ಬೆಂಗಳೂರಿಗೆ ಬಂದ ನರೇಂದ್ರ, ಮನೆಗೆ ಬಂದು ಬಾಗಿಲು ತಟ್ಟಿದ್ದಾರೆ. ಎಷ್ಟೇ ಬಾರಿ ಬಾಗಿಲು ಬಡಿದರೂ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಹೀಗಾಗಿ ಜೋರಾಗಿ ಬಾಗಿಲನ್ನು ತಳ್ಳಿದ್ದಾರೆ. ಒಳಗಡೆ ಸರಿಯಾಗಿ ಲಾಕ್ ಆಗದ ಕಾರಣ ತಕ್ಷಣ ಬಾಗಿಲು ತೆರೆದುಕೊಂಡಿದೆ.
ಗಾಬರಿಯಿಂದ ಮನೆಯೊಳಗೆ ಹೋದ ನರೇಂದ್ರ ಅವರು ಪತ್ನಿ ಗಾಯತ್ರಿ ಬೆಡ್ ರೂಮ್ ನಲ್ಲಿ ನೇಣಿನ ಕುಣಿಕೆಯಲ್ಲಿ ನೇತಾಡುತ್ತಿರುವುದನ್ನ ನೋಡಿ ಆಘಾತಗೊಂಡಿದ್ದಾರೆ.
ಕೂಡಲೇ ಆಕೆಯನ್ನು ಕೆಳಗಿಳಿಸಿದ್ದಾರೆ. ಇತ್ತ ಮಗು ನೀರಿನ ಟಬ್ ನಲ್ಲಿ ಮಲಗಿರುವುದನ್ನ ಕಂಡು ಜೋರಾಗಿ ಕಿರುಚಿದ್ದಾರೆ. ತಕ್ಷಣ ಅಕ್ಕಪಕ್ಕದ ಮನೆಯವರು ಧಾವಿಸಿ ಬಂದಿದ್ದಾರೆ.
ಉಸಿರಾಡುತ್ತಿದ್ದ ಗಾಯತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದುರಂತಕ್ಕೂ ಮುನ್ನ ಗಾಯತ್ರಿ ದೇವಿ ಡೆತ್ ನೋಟ್ ಬರೆದಿಟ್ಟಿದ್ದಾರೆ.