ಬೆಂಗಳೂರು: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ರಾಜಧಾನಿ ಬೆಂಗಳೂರಿನ ಕೆಲ ಪ್ರದೇಶಗಳು ಅಕ್ಷರಶಃ ಮುಳುಗಡೆಯಾಗಿವೆ.
ತಡರಾತ್ರಿ 12 ಗಂಟೆಗೆ ಶುರುವಾರ ಮಳೆ ಬೆಳಗಿನ ಜಾವ 5 ಗಂಟೆವರೆಗೂ ಧಾರಾಕಾರ ಸುರಿದಿದೆ. ಪರಿಣಾಮ ಬೆಂಗಳೂರಿನ 300ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ.
ನಗರದ ಹೃದಯಭಾಗವಾದ ಶಿವಾನಂದ ವೃತ್ತದಲ್ಲಿ ರಸ್ತೆಯಲ್ಲಿ ನಿಂತ ಪರಿಣಾಮ ಕಾರು, ಬೈಕ್ಗಳು ಮುಳುಗಿ ಹೋಗಿವೆ. ಜನರು ಮನೆಯಿಂದ ಹೊರಬರಲು ಪರದಾಟ ನಡೆಸಿದ್ದಾರೆ.
ಚಿಕ್ಕಬಾಣಾವದಲ್ಲಿ ಕೆರೆ ತುಂಬಿ ಬಡಾವಣೆಗಳಿಗೆ ನುಗ್ಗಿದ ಪರಿಣಾಮ ರಸ್ತೆಗಳು ಕೆರೆಯಂತಾಗಿವೆ. ಹಲವು ಮನೆಗಳು ಜಲಾವೃತಗೊಂಡಿವೆ.
ಅದರಲ್ಲೂ ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರದ ಹೆಣ್ಣೂರು, ಹೊರಮಾವು ಪ್ರದೇಶಗಳಲ್ಲಿ ಹಲವು ಬಡಾವಣೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ರಸ್ತೆಗಳು ಕರೆಯಂತಾದ ಪರಿಣಾಮ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ. ರಸ್ತೆಗಳಲ್ಲಿ 8ರಿಂದ 10 ಅಡಿಗಳನ್ನು ನೀರು ನಿಂತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಹೆಣ್ಣೂರಿನ ಸಾಯಿ ಬಡಾವಣೆಯಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತೊಂದೆಡೆ ಸಹಕಾರ ನಗರದಲ್ಲಿ ರಸ್ತೆಗಳು ಜಲಾವೃಗೊಂಡಿವೆ. ಹೆಚ್ಎಸ್ಆರ್ ಲೇಔಟ್ನ ಹಲವು ಬಡಾವಣೆಗಳು ಮಳೆ ನೀರಿನಲ್ಲಿ ಸಂಪುರ್ಣ ಜಲಾವೃತಗೊಂಡಿವೆ.
ಪ್ರತಿವರ್ಷ ಮಳೆ ಬಂದಾದ ಇದೇ ಸಮಸ್ಯೆ ಆಗುತ್ತಿದ್ದರೂ ಬಿಬಿಎಂಪಿ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಒಂದೇ ರಾತ್ರಿ ಸುರಿದ ಮಳೆಗೆ ಮುಳುಗಿದ ರಾಜಧಾನಿ ಬೆಂಗಳೂರು..! pic.twitter.com/UtBBdhWrzh
— Saakshatv-videos (@Saakshatv_video) September 9, 2020