ನಾವು ಪವಿತ್ರ ಆತ್ಮ ದೇವರ ಪಾದದ ಧೂಳಾಗುತ್ತೇವೆ : ಅಂತ ಭ್ರಷ್ಟರಿಗಲ್ಲ – ಯತ್ನಾಳ್
ಯಡಿಯೂರಪ್ಪ ವಿರುದ್ಧ ಮಾತಾಡುವವರು ಅವರ ಧೂಳಿಗೆ ಸಮರಿಲ್ಲ ಎಂಬ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಸೋಮಶೇಖರ್ ಹೇಳಿರುವುದು ಸತ್ಯ. ನಾವು ಅಂತಾ ಭ್ರಷ್ಟರ ಅಯೋಗ್ಯರ ಧೂಳಾಗಲು ಸಿದ್ದರಿಲ್ಲ. ಸೋಮಶೇಖರ್ ಬೇಕಾದರೆ ಅವರ ಕಾಲಿನ ಧೂಳಾಗಲಿ. ನಾವು ಪವಿತ್ರ ಆತ್ಮ ದೇವರ ಪಾದದ ಧೂಳಾಗುತ್ತೇವೆ. ಅವರೇ ಅವರಿಗೆ ಆದರ್ಶವಾಗಲಿ ನಮಗೆ ಅಂತಾ ನೀಚ ವ್ಯವಸ್ಥೆ ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.
ನಾನು ಕುರುಕ್ಷೇತ್ರದ ಅಭಿಮನ್ಯು ಆಗಲು ಸಿದ್ದ, ಆದರೆ ನಾನು ಅರ್ಜುನನಾಗುತ್ತೇನೆ. ವನವಾಸ, ಅಜ್ಞಾತವಾಸ ಎಲ್ಲಾ ಮುಗಿದಿದೆ. ಇನ್ನೇನಿದ್ದರೂ ಪಟ್ಟಾಭಿಷೇಕ ಮಾಡಿಸುವ ಕೆಲಸ ಅಷ್ಟೇ. ನನಗೆ ವಿಶ್ವಾಸವಿದೆ ನಾಯಕತ್ವ ಬದಲಾಗುತ್ತದೆ. ನಾನು ಏಕಾಂಗಿ ಅಲ್ಲ ಸಾಕಷ್ಟು ಸಚಿವರು ನನ್ನ ಸಂಪರ್ಕದಲ್ಲಿದ್ದಾರೆ ಎಂದಿದ್ಧಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ನೂ ಎಲ್ಲರೂ ನೀವು ಮಾಡುತ್ತಿರುವುದು ನ್ಯಾಯಯುತ ಹೋರಾಟ. ಹೋರಾಟ ಮುಂದವರಿಸಲು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ಇದರ ಫಲ ಸಿಗುತ್ತದೆ. ಯಡಿಯೂರಪ್ಪ ಕುರಿತು ಭ್ರಷ್ಟಾಚಾರದ ದಾಖಲೆ ಶೀಘ್ರದಲ್ಲೇ ಬಿಡುಗಡೆಯಾಗುತ್ತೆ. ಬಾಯಿ ಮಾತಿನಲ್ಲಿ ಆರೋಪ ಅಂತಾ ಹೇಳಿದ್ದಾರೆ. ಅವರಿಗೆಲ್ಲಾ ದಾಖಲೆ ಮೂಲಕ ಉತ್ತರ ಸಿಗುತ್ತೆ ಎಂದು ಎಚ್ಚರಿಸಿದ್ದಾರೆ.