ಯಡಿಯೂಪ್ಪನವರೇ ಸಾಕು ಗೌರವಯುತವಾಗಿ ನಿವೃತ್ತಿಯಾಗಿ – ಯತ್ನಾಳ್
ಯಡಿಯೂಪ್ಪನವರೇ ಸಾಕು ಗೌರವಯುತವಾಗಿ ನಿವೃತ್ತಿಯಾಗಿ. ನಿಮ್ಮ ಭ್ರಷ್ಟಾಚಾರದ ಕರ್ಮಕಾಂಡವೇ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಸಿಎಂ ಬಿಎಸ್ ವೈ ವಿರುದ್ಧ ಕಿಡಿಕಾರಿದ್ದಾರೆ..
ಮೈಸೂರಿನಲ್ಲಿ ಮಾತನಾಡಿರೋ ಅವರು ರಾಜ್ಯದ ಹಿತದೃಷ್ಟಿಯಿಂದ ಪಕ್ಷದ ಹಿತದೃಷ್ಟಿಯಿಂದ,ನಿಮ್ಮ ಕುಟುಂಬದ ಹಿತದೃಷ್ಟಿಯಿಂದಲೂ ಒಳ್ಳೆಯದು. ನಾಳೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಕರ್ನಾಟಕಕ್ಕೆ ಒಳ್ಳೆಯದಾಗುವ ನಿರೀಕ್ಷೆ ಇದೆಎಂದಿದ್ದಾರೆ.
ಅಲ್ಲದೇ ಯಡಿಯೂರಪ್ಪ ವಿರುದ್ಧ ಮಾತಾಡುವವರು ಅವರ ಧೂಳಿಗೆ ಸಮರಿಲ್ಲ ಎಂಬ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಸೋಮಶೇಖರ್ ಹೇಳಿರುವುದು ಸತ್ಯ. ನಾವು ಅಂತಾ ಭ್ರಷ್ಟರ ಅಯೋಗ್ಯರ ಧೂಳಾಗಲು ಸಿದ್ದರಿಲ್ಲ. ಸೋಮಶೇಖರ್ ಬೇಕಾದರೆ ಅವರ ಕಾಲಿನ ಧೂಳಾಗಲಿ. ನಾವು ಪವಿತ್ರ ಆತ್ಮ ದೇವರ ಪಾದದ ಧೂಳಾಗುತ್ತೇವೆ. ಅವರೇ ಅವರಿಗೆ ಆದರ್ಶವಾಗಲಿ ನಮಗೆ ಅಂತಾ ನೀಚ ವ್ಯವಸ್ಥೆ ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ.