ಕಾಂಗ್ರೆಸ್ ಬ್ರಷ್ಟಾಚಾರದ ಗಂಗೋತ್ರಿ : ಸಿಎಂ ಬೊಮ್ಮಾಯಿ
ಹಾವೇರಿ : ಒಂದು ವರ್ಗದ ಮನಸ್ಸು ನೋವು ಮಾಡೋದನ್ನು ಅವಾಯ್ಡ್ ಮಾಡಬೇಕು , ಸಾಮಾಜಿಕವಾಗಿ ಶಾಂತಿ, ಆರ್ಥಿಕವಾಗಿ ಬೆಳವಣಿಗೆ ದೇಶದ ಸವಾಲುಗಳ ಬಗ್ಗೆ ಚರ್ಚೆ ಆಗಬೇಕು
ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿಯಲ್ಲಿ ಹೇಳಿಕೆ ನೀಡಿದ್ದಾರೆ..
ಮಿತಿಮೀರಿ ಮಾತಾಡಿ ಗೊಂದಲ ಮಾಡಬಾರದು. ಅನವಶ್ಯಕಾವಗಿ ಚರ್ಚೆ ನಡೆದಿದೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ವಿಚಾರ. ಈ ಬಗ್ಗೆ ಹಿಂದೆಯೂ ಕೂಡಾ ಹೇಳಿದ್ದೇನೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತೆ ಎಂದಿದ್ದಾರೆ..
ಇದೇ ವೇಳೆ ಈಗ ಆಯೋಗದ ವರದಿ ಪ್ರಗತಿ ಆಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆತೇನೆ. ಇಂದು ಗುರುಗಳ ಹತ್ರ ಮಾತಾಡ್ತೀನಿ. ಆಯೋಗದ ಶಿಫಾರಸುಗಳ ಮೇಲೆ ನಿರ್ಧಾರ ಮಾಡ್ತೇನೆ.. ಕಾನೂನು ಇದೆ. ಸುಪ್ರೀಂ ಕೊರ್ಟ್ ಜಡ್ಜಮೆಂಟ್ ಇದೆ.ಎಲ್ಲದರ ಆಧಾರರ ಮೇಲೆ ನಿರ್ಧಾರ ಮಾಡ್ತೀವಿ ಎಂದಿದ್ದಾರೆ..
ಇದೇ ವೇಳೆ ಬಿಜೆಪಿಯವರದ್ದು ಜನೋತ್ಸವ ಅಲ್ಲ ಬ್ರಷ್ಟೋತ್ಸವ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡ್ತಾ , ಕಾಂಗ್ರೆಸ್ ಬ್ರಷ್ಟಾಚಾರದ ಗಂಗೋತ್ರಿ , ದಿಂಬೂ ಬಿಡಲಿಲ್ಲ, ಹಾಸಿಗೆನೂ ಬಿಡಲಿಲ್ಲ, ನೆಲ ಬಿಡಲಿಲ್ಲ, ನೀರೂ ಬಿಡಲಿಲ್ಲ, ಇದನ್ನೆಲ್ಲಾ ಮಾತಾಡಿಯೇ ಎಲೆಕ್ಷನ್ ಹೋಗಿದ್ರಿ. ಆದರೆ ಜನ ತಿರಸ್ಕರಿಸಿದರು, ಜನೋತ್ಸವ ಯಾವ ರೀತಿ ಇರುತ್ತೆ ನೋಡಿ, ಜನೋತ್ಸವಕ್ಕೆ ಭಯ ಪಟ್ಟು ಹಾಗೆ ಮಾತಾಡ್ತಿದ್ದಾರೆ ಎಂದಿದ್ದಾರೆ..
ಇನ್ನೂ ಅವರೂ ಸಿದ್ದರಾಮೋತ್ಸವ ಮಾಡಿದರು. ನಾವೂ ಅದಕ್ಕೆ ಬ್ರಷ್ಟೋತ್ಸವ ಅನ್ನಬಹುದಿತ್ತಲ್ಲಾ? ಆ ಮಟ್ಟಕ್ಕೆ ನಾವು ಇಳಿಯಬಾರದು ಎಂದು ಕಿಡಿಕಾರಿದ್ರು..