ಬೆಂಗಳೂರು : ಬೃಹತ್ ಭ್ರಷ್ಟಾಚಾರದ ಆರೋಪದ ಹಿನ್ನೆಲೆ , ಬಿಬಿಎಂಪಿ ಮುಖ್ಯಕಚೇರಿ ಸೇರಿದಂತೆ ಬಿಬಿಎಂಪಿ ಮುಖ್ಯ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಿಬಿಎಂಪಿ ಮುಖ್ಯಕಚೇರಿ ಸೇರಿದಂತೆ ಒಟ್ಟು 27 ಕಡೆಗಳಲ್ಲಿ , ಪ್ರತಿಯೊಂದು Zonel ಕಚೇರಿಯ ಮೇಲೆ ಎಸಿಬಿ ದಾಳಿ ನಡೆದಿದೆ..
ದಾಳಿ ಶೋಧನೆ ವೇಳೆ ಕೋಟ್ಯಾಂತರ ಮೌಲ್ಯದ ಅಕ್ರಮ ದಾಖಲೆಗಳು ಪತ್ತೆಯಾಗಿರುವ ಮಾಹಿತಿ ಸಿಕ್ಕಿದೆ.. ಅಲ್ಲದೇ ಎಸಿಬಿ ಅಧಿಕಾರಿಗಳು ನಗದು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
150 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬಿಡಿಎ ಬೃಹತ್ ಭ್ರಷ್ಟಾಚಾರ ಪ್ರಕರಣ ಬಳಿಕ ಇದು ಅತಿ ದೊಡ್ಡ ದಾಳಿಯಾಗಿದೆ.
ಬಿಡಿಎ ಅಲ್ಲಿ 250 ಕೋಟಿ ಅಕ್ರಮ ಪತ್ತೆ ಮಾಡಿದ್ದ ಎಸಿಬಿ ಅಧಿಕಾರಿಗೂ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ..
ಈಗ ಬಿಬಿಎಂಪಿ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ದಾಳಿ ನಡೆದಿದೆ. ಮುಖ್ಯ ಎಂಜಿನಿಯರ್, ಕೇಸ್ ವರ್ಕರ್ ಕಚೇರಿ ಮೇಲೂ ದಾಳಿ ಮಾಡಿದ್ದಾರೆ..
ರಸ್ತೆ ಕಾಮಗಾರಿಯ ಬಹುದೊಡ್ಡ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ.. ಗುತ್ತಿಗೆಗೆ ಟೆಂಡರ್ ಕರೆಯೋ ವಿಚಾರದಲ್ಲಿ ಅತಿದೊಡ್ಡ ಅಕ್ರಮ ನಡೆದಿದ್ದು , ಕಡತ ವಿಲೇವಾರಿ ವಿಚಾರದಲ್ಲಿ ಕೂಡ ಬಹುದೊಡ್ಡ ಅಕ್ರಮ ಎಸಗಿರೋದು ದಾಳಿಯಲ್ಲಿ ಬೆಳಕಿಗೆ ಬಂದಿದೆ.