B C Patil – ಭಾರತಕ್ಕೆ ಮುಸ್ಲಿಂ ಪ್ರಧಾನಿ : ಬಿಸಿಪಾ ರಿಯಾಕ್ಷನ್ ಏನು ?
ಗದಗ : ಟ್ವಿಟ್ವರ್ ನಲ್ಲಿ ಭಾರತಕ್ಕೆ ಮುಸ್ಲಿಂ ಪ್ರಧಾನಿ ಆಗಬೇಕು ಎಂಬ ಅಭಿಯಾನದ ಬಗ್ಗೆ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಅದೊಂದು ಹುಚ್ಚು ಕಲ್ಪನೆ ಎಂದಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ.ಪಾಟೀಲ್, ಮುಸ್ಲಿಂ ಪ್ರಧಾನಿ ಆಗಬೇಕು ಎನ್ನುವುದು ಹುಚ್ಚು ಕಲ್ಪನೆಯಾಗಿದೆ.
ಇದು ಭಾರತ ದೇಶವಾಗಿದ್ದು, ಇಲ್ಲಿ ಮುಸ್ಲಿಂ ಪ್ರಧಾನಿ ಆಗಲ್ಲ, ಆಗೋದಕ್ಕೆ ಸಾಧ್ಯವೂ ಇಲ್ಲ ಅಂತಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
![bc-patil-indias-pm-cannot-be-a-muslim](http://saakshatv.com/wp-content/uploads/2021/05/bcpatil-300x283.jpg)
ಇದೆ ವೇಳೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಿಕ್ ಬ್ಯಾಕ್ ಪಡೆದಿದ್ದರು ಎಂಬ ಆರೋಪದ ಬಗ್ಗೆ ಮಾತನಾಡಿದ ಸಚಿವರು, ಈ ಹಿಂದೆ ಅವರ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯಲು ಲೋಕಾಯುಕ್ತವನ್ನು ಮುಚ್ಚಿ ಹಾಕಿ ಎಸಿಬಿಯನ್ನು ರಚನೆ ಮಾಡಿದ್ದರು.
ಸ್ಟೀಲ್ ಬ್ರಿಜ್ಡ್ ಯಾಕೆ ವಾಪಸ್ ಹೋಯ್ತು ಎಂದು ಪ್ರಶ್ನಿಸಿ ಕಿಕ್ ಬ್ಯಾಕ್ ಆರೋಪ ಬಂದಿದ್ದಕ್ಕೆ ವಾಪಸ್ ಹೋಯ್ತಲ್ಲಾ ಎಂದರು.