Bengaluru : ಹೆಂಡತಿ , ಮಕ್ಕಳ ಊಟದಲ್ಲಿ ವಿಷ ಬೆರೆಸಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ…
ಹೆಂಡತಿ ಮಕ್ಕಳನ್ನ ಕೊಂದು ಆತ್ಮಹತ್ಯೆಗೆ ಯತ್ನ
ಇಬ್ಬರು ಮಕ್ಕಳು ಹೆಂಡತಿಗೆ ವಿಷ ಹಾಕಿ ಕೊಂದ
ಕುಡಿತದ ಚಟದಿಂದ ಕ್ಯಾನ್ಸರ್ ಗೆ ತುತ್ತಾಗಿದ್ದ ಆರೋಪಿ
ಬೆಂಗಳೂರಿನ ಕೋಣನಕುಂಟೆಯಲ್ಲಿ ಘಟನೆ
ಆರೋಪಿ ಆತ್ಮಹತ್ಯೆಗೆ ಯತ್ನ , ಭಾಮೈದನಿಂದ ರಕ್ಷಣೆ
ಕ್ಯಾನ್ಸರ್ ನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ತನ್ನ ಮಕ್ಕಳು ಹಾಗೂ ಪತ್ನಿಗೆ ಊಟದಲ್ಲಿ ವಿಷ ಹಾಕಿ ಕೊಂದಿದ್ದು ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ..
ಇಂತಹ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.. ತಾನು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ತನ್ನ ಹೆಂಡತಿ ಮಕ್ಕಳನ್ನು ಯಾರೂ ನೋಡಿಕೊಳ್ಳಲು ಆಗುವುದಿಲ್ಲ. ಅವರಿಗೆ ಕಷ್ಟವನ್ನು ಕೊಡುವುದು ಬೇಡ ಎಂದು ಹೆದರೆ ತನ್ನ ಹೆಂಡತಿ ಹಾಗೂ ಇಬ್ಬರು ಪುಟ್ಟ ಮಕ್ಕಳಿಗೆ ಊಟದಲ್ಲಿ ಇಲಿ ಪಾಷಾಣ ಹಾಕಿ ಕೊಂದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ನಾಗೇಂದ್ರ ಎಂಬಾತನಿಂದ ಈ ಕೃತ್ಯ ನಡೆದಿದೆ. 28 ವರ್ಷದ ವಿಜಯ, 7 ವರ್ಷದ ನಿಷಾ , 5 ವರ್ಷದ ದೀಕ್ಷಾ ಮೃತ ದುರ್ದೈವಿಗಳಾಗಿದ್ದಾರೆ.
ಊಟದಲ್ಲಿ ತಿಗಣೆ ಔಷಧಿ, ಇಲಿ ಔಷಧಿ ಬೆರೆಸಿದ್ದಾನೆ. ವಿಷ ಬರೆಸಿದ ಊಟವನ್ನು ತಿಂದ ಹೆಂಡತಿ ಮಕ್ಕಳು ಮನೆಯಲ್ಲಿಯೇ ಒದ್ದಾಡಿ ಸಾವನ್ನಪ್ಪಿದ್ದಾರೆ.
ನಾಗೇಂದ್ರ ಮೊದಲು ಚಾಕುವಿನಿಂದ ಕೈ ಕೊಯ್ದುಕೊಂಡು, ನಂತರ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ದೃಶ್ಯ ನೋಡಿದ ಭಾವಮೈದ ಮನೆಯ ಕೋಣೆಯ ಬಾಗಿಲನ್ನು ಮುರಿದು ಆತನ ರಕ್ಷಣೆ ಮಾಡಿದ್ದಾನೆ. ಕೈ ಕೊಯ್ದು ಕೊಂಡ ಹಿನ್ನಲೆ ತೀವ್ತ ರಕ್ತ ಸ್ರಾವ ಉಂಟಾಗಿದ್ದು, ನೇಣು ಬಿಗಿದುಕೊಳ್ಳುವ ಮುನ್ನವೇ ಆತನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗೇಂದ್ರಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಂದೆಡೆ ಮೃತದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಕೊಲೆ ಆರೋಪಿ ನಾಗೇಂದ್ರ ಹಾಗೂ ವಿಜಯಾಗೆ 2014ರಲ್ಲಿ ಮದುವೆಯಾಗಿತ್ತು. ನಾಗೇಂದ್ರನಿಗೆ ವಿಪರೀತ ಕುಡಿದ ಚಟ ಇತ್ತು. ಇದರಿಂದ ಅವನಿಗೆ ಕ್ಯಾನ್ಸರ್ ರೋಗ ಬಂದಿದೆ. ಇಡೀ ಕುಟುಂಬದ ಜವಾಬ್ದಾರಿ ಹೊತ್ತಿದ್ದ ವಿಜಾ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೋಣನಕುಂಟೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Bengaluru : man tried to commit suicide After killed his wife and childrens