Bharat Jodo Yatra |ಭಾರತ್ ಜೋಡೋ ಯಾತ್ರೆ ರಾಜಕೀಯವಾಗಿ ಮೌನ ಕ್ರಾಂತಿಯನ್ನ ಸೃಷ್ಟಿಸಲಿದೆ…
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ರಾಜಕೀಯವಾಃಗಿ ಮೌನ ಕ್ರಾಂತಿಯನ್ನ ಉಂಟು ಮಾಡಲಿದೆ ಎಂದು ಎಂದು ನೂತನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬುಧವಾರ ಹೇಳಿದ್ದಾರೆ.
ಹೈದರಾಬಾದ್ನ ಬೋವೆನಪಲ್ಲಿಯಲ್ಲಿ ರಾಹುಲ್ ಗಾಂಧಿ ಅವರರೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಕೂಡಿಕೊಂಡ ನಂತರ ಯಾತ್ರಿಗಳೊಂದಿಗೆ ಖರ್ಗೆ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಖರ್ಗೆ ಅವರು ಭಾರತ್ ಜೋಡೋ ಯಾತ್ರೆಯು ಮೌನ ಕ್ರಾಂತಿಯನ್ನು ತರುತ್ತಿದ್ದು, ರಾಜಕೀಯ ಚಿತ್ರಣವನ್ನೇ ಬದಲಾಯಿಸಲಿದೆ ಎಂದು ಹೇಳಿದರು.
ನಂತರ, ಯಾತ್ರೆಯು MGB ಬಜಾಜ್ ಶೋರೂಮ್, ಬಾಲಾನಗರ ಮುಖ್ಯ ರಸ್ತೆ, ಹೈದರಾಬಾದ್ ನಗರದಿಂದ ಪುನರಾರಂಭವಾಯಿತು, ರಾಹುಲ್ ಗಾಂಧಿ ಜೊತೆಗೆ ಇತರ ಭಾರತ್ ಯಾತ್ರಿಗಳು ಯಾತ್ರೆಯ 56 ನೇ ದಿನದಂದು ತಮ್ಮ ನಡಿಗೆಯನ್ನು ಮುಂದುವರೆಸಿದರು.
ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಕಳೆದ ವಾರ ಯಾತ್ರೆ ತೆಲಂಗಾಣಕ್ಕೆ ಕಾಲಿಡುವ ಮೊದಲು ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮ್ಯಾರಥಾನ್ ನಡಿಗೆಯನ್ನ ಪೂರ್ಣಗೊಳಿಸಿದ್ದಾರೆ.
ತೆಲಂಗಾಣ ರಾಜ್ಯ ಕಾಂಗ್ರೆಸ್ ಯಾತ್ರೆಯನ್ನು ಸಂಘಟಿಸಲು 10 ವಿಶೇಷ ಸಮಿತಿಗಳನ್ನು ರಚಿಸಿದೆ.
Bharat Jodo Yatra is bringing about silent revolution, will change political landscape: Mallikarjun Kharge