Bharat Jodo Yatra: ಮಧ್ಯಪ್ರದೇಶದಲ್ಲಿ ಮೃದು ಹಿಂದುತ್ವ ಪಾಲಿಸಿದ ರಾಹುಲ್ ಗಾಂಧಿ…
ರಾಹುಲ್ ಗಾಂಧಿ ಸಾರಥ್ಯದ ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶದಲ್ಲಿ 10 ನೇ ದಿನಕ್ಕೆ ಕಾಲಿಟ್ಟಿದೆ. ಯಾತ್ರೆ ಅಂತಿಮ ಹಂತದಲ್ಲಿದ್ದು, ಎರಡು ದಿನಗಳ ಬಳಿಕ ರಾಜಸ್ಥಾನ ಪ್ರವೇಶಿಸಲಿದೆ. ಮಧ್ಯಪ್ರದೇಶದಲ್ಲಿ, ರಾಹುಲ್ ಗಾಂಧಿ ಮೃದು ಹಿಂದುತ್ವ ವನ್ನ ಪಾಲಿಸಿದ್ದು, ಮತ್ತು ಎಲ್ಲಾ ವರ್ಗಗಳನ್ನು ಓಲೈಸಲು ಪ್ರಯತ್ನಿಸಿದರು.
ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ಅವರು ಖಾಂಡ್ವಾದ ಓಂಕಾರೇಶ್ವರ ಮತ್ತು ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದಲ್ಲಿ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಮೂಲಕ ಮೃದು ಹಿಂದುತ್ವದ ಸಂದೇಶವನ್ನ ನೀಡುತ್ತಿದ್ದಾರೆ.
ಕೇವಲ ಹಿಂದುತ್ವದ ಅಜೆಂಡಾದಿಂದ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್ ಅನ್ನು ಹಿಂದೂ ವಿರೋಧಿ ಎಂದು ಕರೆದು ಅಧಿಕಾರದಿಂದ ದೂರ ಇಡಲಾಗುತ್ತಿದೆ. ಈಗ ಬಿಜೆಪಿಯ ಹಾದಿಯಲ್ಲಿ ಕಾಂಗ್ರೆಸ್ ಕೂಡ ನಡೆಯುತ್ತಿರುವುದರಿಂದ ಕಾಂಗ್ರೆಸ್ಗೆ ಲಾಭವಾಗಲಿದೆ ಎಂಬುದು ಪಕ್ಷದ ಮುಖಂಡರ ಅಭಿಪ್ರಾಯ. ಅಲ್ಪಸಂಖ್ಯಾತರ ಕಡೆಗೆ ಪಕ್ಷದ ಅತಿಯಾದ ಒಲವು ಅವರನ್ನು ಬಹುಸಂಖ್ಯಾತ ಮತದಾರರಿಂದ ದೂರ ಮಾಡಿದೆ ಎಂದು ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.
ರಾಹುಲ್ ಗಾಂಧಿ ಭೇಟಿಯ ವೇಳೆ ರಾಜ್ಯ ನಾಯಕತ್ವ ಕ್ರಿಯಾಶೀಲತೆ ತೋರಿದ್ದಲ್ಲದೆ ಏಕತೆಯ ಸಂದೇಶವನ್ನೂ ನೀಡಿದೆ. ಇಂದೋರ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ದಿಗ್ವಿಜಯ್ ಸಿಂಗ್ ತಮ್ಮನ್ನು ಕಮಲನಾಥ್ ಅವರ ಬಲಗೈ ಎಂದು ಬಣ್ಣಿಸಿದರು. ಕಾರ್ಯಕರ್ತರ ಉತ್ಸಾಹಕ್ಕೆ ಇಬ್ಬರ ನಡುವೆ ಜುಗಲ್ಬಂದಿ ಅಗತ್ಯ. ಈ ಮೂಲಕ ಪಕ್ಷದಲ್ಲಿನ ಗುಂಪುಗಾರಿಕೆಯ ಊಹಾಪೋಹಕ್ಕೆ ತೆರೆ ಬಿದ್ದಂತಾಗಿದೆ.
Bharat Jodo Yatra: Rahul Gandhi practiced soft Hinduism in Madhya Pradesh…