ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಕ್ಕೆ ಮಾಂಕಾಳು ವೈದ್ಯ ಭೇಟಿ
ಭಟ್ಕಳ : ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಭಟ್ಕಳ ತಾಲೂಕಿನ ತಲಗೋಡ ಕಡಲ ತೀರಕ್ಕೆ ಮಾಜಿ ಶಾಸಕರಾದ ಮಾಂಕಾಳು ವೈದ್ಯ ಆಗಮಿಸಿ ಸ್ಥಳಿಯರ ಅಹವಾಲುಗಳನ್ನು ಆಲಿಸಿದರು. ಈ ಹಿಂದೆ ಸಚಿವಾರ ಆರ್ ಅಶೋಕ್ ಮತ್ತು ಶಿವರಾಮ್ ಹೆಬ್ಬಾರ್ ಕೂಡ ಇಲ್ಲಿಗೆ ಆಗಮಿಸಿ ಸ್ಥಳಿಯರ ಸಮಸ್ಯೆ ಗಳಿಗೆ ಸರಿಯಾಗಿ ಸ್ಪಂದಿಸದೆ ತರಾತುರಿಯಲ್ಲಿ ವಾಪಾಸ್ಸಾಗಿದ್ದರು. ಈ ಕುರಿತು ಮಾತನಾಡಿ ಮಾಜಿ ಶಾಸಕರು ಪ್ರಾಕೃತಿಕ ದುರಂತ ಸಂಭವಿಸಿದಾಗ 24 ಗಂಟೆಗಳ ಒಳಗಾಗಿ ಹಾನಿಗೊಳದ ಪ್ರದೇಶಗಳ ಕಾಮಾಗಾರಿ ಕೈಗೊಳ್ಳು ಅವಕಾಶವಿದೆ ಆದಾಗ್ಯೂ ಸಹ ಸಚಿವರು ಹಾನಿಗೊಳಗಾದ ಪ್ರದೇಶಗಳ ದುರಸ್ಥಿ ಕಾಮಾಗಾರಿ ಮಾಡಲು ಮೀನ ಮೇಷ ಎಣಿಸುತ್ತಿದ್ದಾರೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಈ ಹಿಂದೆ ತಮ್ಮ ಅವಧಿಯಲ್ಲು ಕೂಡ ಇಂತಹ ಚಂಡಮಾರುತದ ಸಮಸ್ಯೆ ಎದುರಾಗಿತ್ತು ಆದರೆ ಕೇವಲ 24 ಗಂಟೆಗಳಲ್ಲಿ ನಾನು ಹಾನಿಗೊಳಗಾದ ಪ್ರದೇಶಗಳ ದುರಸ್ಥಿ ಕಾಮಾಗಾರಿಗೆ ಚಾಲನೆ ನೀಡಿದ್ದೆ ಎಂದು ಹೇಳಿದರು.
ಅಷ್ಟೇ ಅಲ್ಲದೆ ಕೋವಿಡ್ ಕಾರಣಕ್ಕೆ ಸರ್ಕಾರ ನೀಡಿರುವ 1200 ಕೋಟಿ ರೂಪಾಯಿ ಪ್ಯಾಕೇಜ್ ನ ಕುರಿತಾಗಿಯೂ ಹರಿಹಾಯ್ದ ಮಾಜಿ ಶಾಸಕರು ಸರ್ಕಾರ ಘೋಷಿಸಿರು ಪ್ಯಾಕೇಜ್ ಅವೈಜ್ಞಾನಿಕವಾದದ್ದು ಇಲ್ಲಿ ಮೀನುಗಾರ ವರ್ಗವನ್ನು ಕಡೆಗಣಿಸಲಾಗಿದ್ದು. ಕೋವಿಡ್ 19 ಸಂದರ್ಭದಲ್ಲಿ ಮೀನುಗಾರ ಕುಟುಂಬಗಳು ಕೂಡ ಸಂಕಷ್ಟಕ್ಕೆ ತುತ್ತಾಗಿದ್ದಾರೆ ಒಂದು ಕಡೆ ಡೀಸೆಲ್ ದರ ಏರಿಕೆಯಾಗಿದ್ದು ಈ ಮೀನುಗಾರಿಕಾ ಅವಧಿಯಲ್ಲಿ ಉತ್ತಮ ಮೀನುಗಾರಿಕೆ ಆಗಿರಲಿಲ್ಲ. ಮತ್ತೊಂದು ಕಡೆ ಲಾಕ್ ಡೌನ್ ಕಾರಣಕ್ಕೆ ತೊಂದರೆಗೊಳಗಾಗಿದ್ದಾರೆ ಈ ಸಂದರ್ಭದಲ್ಲಿ ಮೀನುಗಾರರಿಗೂ ಕೂಡ ಪ್ಯಾಕೇಜ್ ಘೋಷಣೆ ಮಾಡಿ ಮೀನುಗಾರ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಬೇಕಾದ ಅಗತ್ಯವಿತ್ತು ಎಂದು ಹೇಳಿದರು.
ಇನ್ನೂ ವೈದ್ಯರು ಆಗಮಿಸುತ್ತಿದ್ದಂತೆ ಸ್ಥಳಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಒಂದೂಗೂಡಿ ಅವರ ಅವಧಿಯಲ್ಲಿ ನಡೆದ ಜನಪರ ಕೆಲಸಗಳ ಬಗ್ಗೆ ನೆನಪಿಸಿಕೊಂಡರು.