Shimoga ಶಿವಮೊಗ್ಗದ ಸವಳಂಗ ರಸ್ತೆಯ ಬಳಿ ಚಲಿಸುತ್ತಿದ್ದ ರೈಲಿಗೆ ಕೂಲಿ ಕಾರ್ಮಿಕ ನೊಬ್ಬ ಕಾಲು ಹಾಕಿರುವ ಘಟನೆ ಬೇಳಕಿಗೆ ಬಂದಿದೆ
ಕಾಮಗಾರಿ ಕೆಲಸಕ್ಕೆಂದು ಬಂದಿದ ಬಿಹಾರ ಮೂಲದ ಕಾರ್ಮಿಕ ಆದಿಲ್ ಸವಳಂಗ ರಸ್ತೆಯಲ್ಲಿ ರೈಲ್ವೆ ಫ್ಲೈಓವರ್ ಕಾಮಗಾರಿ ಯಲ್ಲಿ ಕೆಲೆಸ ಮಾಡುತ್ತಿದ್ದ .
ಕುಡಿದ ಮತ್ತಿನಲ್ಲಿ ಆದಿಲ್ ಜರ್ದಾ ತಂಬಾಕು ಅಗಿಯುತ್ತಾ, ರೈಲ್ವೆ ಹಳಿಯ ಮೇಲೆ ಕುಳಿತುಕೊಂಡಿದ್ದ. ಈ ಸಂದರ್ಬದಲ್ಲಿ ರೈಲು ಬರುತ್ತಿದ್ದರೂ, ಮದ್ಯದ ನಶೆಯಲ್ಲಿದ ಯುವಕ ಏಳದೆ ಹಳಿ ಮೇಲೆ ಕುಳಿತಿದ್ದ, ರೈಲು ಆತನ ಕಾಲಿನ ಮೇಲೆ ಹರಿದು ಹೊದ ಪರಿಣಾಮ ಆದಿಲ್ ಕಾಲು ಕತ್ತರಿಸಿ ತುಂಡಾಗಿವೆ.
ಕಾಲು ಕತ್ತರಿಸಿ ತುಂಡಾದರೂ ಮೈ ಮೇಲೆ ಪ್ರಜ್ಞೆ ಇಲ್ಲದೇ ಕುಳಿತಿದ್ದಇಷ್ಟಾದರು ಆತನ ಸ್ನೇಹಿತರು ರಕ್ಷಿಸಲು ಬಾರದ್ದನ್ನು ಕಂಡು ಸ್ಥಳೀಯರು 108 ಆಂಬ್ಯುಲೆನ್ಸ್ ಗೆ ಕರೆಮಾಡಿ ಗಾಯಾಳು ಯುವಕನನ್ನು ಹಾಗೂ ತುಂಡಾದ ಕಾಲನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದಾರೆ.