ಸಾರಿಗೆ ನೌಕರರಿಗೆ ಬಿಗ್ ಶಾಕ್ : ಈ ತಿಂಗಳು ಅರ್ಧ ಸಂಬಳ
ಬೆಂಗಳೂರು : ಸಾರಿಗೆ ನೌಕರರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಸಾರಿಗೆ ನಿಗಮಗಳ ನೌಕರರಿಗೆ ಈ ತಿಂಗಳು ಅರ್ಧ ಸಂಬಳ ನೀಡಲು ಸರ್ಕಾರ ಮುಂದಾಗಿದೆ.
ತೀವ್ರ ಆರ್ಥಿಕ ನಷ್ಟದ ಕಾರಣವೊಡ್ಡಿ ಕಳೆದ ತಿಂಗಳು ಸರ್ಕಾರ ಅರ್ಧ ಸಂಬಳ ನೀಡಿತ್ತು.
ಈ ತಿಂಗಳು ಫುಲ್ ಸಂಬಳ ನೀಡುವುದಾಗಿ ಭರವಸೆ ನೀಡಿತ್ತು. ಆದ್ರೆ ಈ ತಿಂಗಲು ಕೂಡ ಅರ್ಧ ಸಂಬಳ ಕೊಡಲು ಚಿಂತನೆ ನಡೆಸಿದೆ.
ಸರ್ಕಾರದ ಈ ನಡೆಯಿಂದ ಪೂರ್ತಿ ಸಂಬಳದ ನಿರೀಕ್ಷೆಯಲ್ಲಿದ್ದ ನೌಕರರಿಗೆ ತೀವ್ರ ನಿರಾಶೆಯಾಗಿದೆ.
ಅರ್ಧ ಸಂಬಳದಲ್ಲಿ ಜೀವನ ಮಾಡೊಕ್ಕಾಗೊಲ್ಲ ಎಂದು ಬೇಸರಗೊಂಡು ತಮ್ಮ ಊರುಗಳತ್ತ ಗುಳೆ ಹೋಗಲು ಮುಂದಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಸುದ್ದಿಗಾರರೊಂದಿಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮಾತನಾಡುತ್ತಾ, ಪೂರ್ತಿ ಸಂಬಳದ ಜೊತೆಗೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.
ಆದ್ರೆ ಇದೀಗ ಈ ಭರವಸೆ ಹುಸಿಯಾಗಿದೆ. ಇದರಿಂದ ಬೇಸತ್ತಿರುವ ನೌಕರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel