ADVERTISEMENT
Monday, December 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Bigg Boss 8

BIGGBOSS 8 : ಕಿಚ್ಚನ ಎದುರಲ್ಲೇ ಲ್ಯಾಗ್ ಮಂಜು ವಿರುದ್ಧ ಆಕ್ರೋಶ ಹೊರಹಾಕಿದ ಚಕ್ರವರ್ತಿ  

Namratha Rao by Namratha Rao
June 28, 2021
in Bigg Boss 8, Newsbeat, ಬಿಗ್ ಬಾಸ್ 8
Share on FacebookShare on TwitterShare on WhatsappShare on Telegram

Related posts

ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ

ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ

December 14, 2025
ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

December 14, 2025

BIGGBOSS 8 : ಕಿಚ್ಚನ ಎದುರಲ್ಲೇ ಲ್ಯಾಗ್ ಮಂಜು ವಿರುದ್ಧ ಆಕ್ರೋಶ ಹೊರಹಾಕಿದ ಚಕ್ರವರ್ತಿ

ಸದಾ ನೇರ ನುಡಿ , ವಿಭಿನ್ನ ವ್ಯಕ್ತಿತ್ವ , ಜೊತೆಗೆ ಬುದ್ಧವಂತಿಕೆ , ಪದಗಳ ಮೇಲಿನ ಹಿಡಿತ, ವಾಕ್ ಚಾತುರ್ಯದಿಂದಾಗಿ ಗುರುತಿಸಿಕೊಂಡಿರುವ ಪತ್ರಕರ್ತ , ಸಾಮಾಜಿಕ ಚಿಂತಕ ಚಂದ್ರಚೂಡ್ ಚಕ್ರವರ್ತಿ  ಅವರು ಇದ್ದದ್ದನ್ನ ಇದ್ದಂತೆಯೇ ನುಡಿಯುತ್ತಾರೆ.. ಕೆಲವರ ಬಳಿ ಇದೇ  ಗುಣದಿಂದ ನಿಷ್ಠೂರವೂ ಆಗಿದ್ದಾರೆ..

ಇದೀಗ ಶೋ ಮತ್ತೆ ಆರಂಭವಾದ ಬಳಿಕ ನಡೆದ ಮೊದಲನೇ ವಾರದ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ  ಸುದೀಪ್ ಅವರ ಮುಂದೆಯೇ ಲ್ಯಾಗ್ ಮಂಜು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ..  ಮೊದಲನೇಯದಾಗಿ ಮಾತು ಆರಂಭಿಸಿದ ಚಕ್ರವರ್ತಿಯವರು, ನನಗೆ ಮೂರು ವಿಷಯ ಕಾಡುತ್ತಿದೆ. ಮಂಜು ಅವರು ಎಲಿಮಿನೇಷನ್ ವೇಳೆ ಹಳೆಯದನ್ನು ಯಾವುದನ್ನೂ ಮಾತನಾಡಬಾರದು ಬೆಂಕಿಯಲ್ಲಿ ಸುಟ್ಟಾಗಿದೆ ಎಂದರು.

ನಂತರ ನನ್ನ ತಂದೆ, ತಾಯಿ ಹಳ್ಳಿಯ ಮುಗ್ಧ ಜನ.. ನನಗೆ ಅವರು ಚಕ್ರವರ್ತಿ ಹಾಗೂ ಪ್ರಶಾಂತ್ ಸಂಬರ್ಗಿ ಕೆಟ್ಟವರು, ಅವರ ಜೊತೆ ಸೇರಬೇಡ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿಸಿದ್ದರು. ನಾನು ಅವರ ತಂದೆ, ತಾಯಿಗೆ ಗೌರವ ಕೊಡುತ್ತೇನೆ. ಅವರು ನನ್ನ ಜೊತೆ ಸೇರಬೇಡ ಎಂದ ಮೇಲೆ ಮಂಜುರವರು ನನಗೆ ಅಣ್ಣಾ ಎಂದು ಕರೆಯಬಾರದು ಎಂದು ಚಕ್ರವರ್ತಿಯವರು ಕೆಂಡಕಾರಿದ್ದಾರೆ.

ಅಲ್ಲದೇ ನನ್ನ ತಂದೆ ತಾಯಿ ಕೂಡ ನನಗೆ ಒಂದು ಹೇಳಿ ಕಳುಹಿಸಿದ್ದಾರೆ, ಎಲಿಮಿನೇಷನ್ ರೌಂಡ್ ವೇಳೆ ಹೇಳಬೇಕಾಗಿತ್ತು. ಆದರೆ ಈಗ ಟೈಮ್ ಬಂದಿದೆ.  ಕರ್ನಾಟಕದಲ್ಲಿ ಸುಮಾರು 363ಕ್ಕೂ ಹೆಚ್ಚು ಭಾಷೆಯ ಸೊಗಡುಗಳಿದೆ. ಈ ಎಲ್ಲ ಭಾಷೆಯ ಸೊಗಡಿನಲ್ಲಿಯು ನುಗ್ಗೆ ಕಾಯಿಗೂ ಹಾಗೂ ಮಾವಿನ ಹಣ್ಣಿಗೂ ಒಂದು ಸಂಬಂಧವಿದೆ.

ಒಂದು ಹೆಣ್ಣು ಮಗಳಿಗೆ ನಿನ್ನೆ ನುಗ್ಗೆ ಕಾಯಿ ತಿನ್ನಿಸಿದೆ, ಇಂದು ಮಾವಿನ ಹಣ್ಣು ತಿನ್ನಿಸುತ್ತಿದ್ದಾನೆ ಎಂದರೆ ಇದು ಸಿನಿಮಾದಲ್ಲಿ ಬಂದಿರುವುದು ಮಾತ್ರವಲ್ಲ ಒಂದು ಸೈಟಿಫಿಕ್ ರೀಸನ್ ಇದೆ. ಎಲ್ಲ ಪ್ರಾಂತ್ಯಗಳಲ್ಲಿಯೂ ಇದು ಗಂಡ ಹೆಂಡತಿಯರ ನಾಟಕ.

ನಂತರ ಬಾರೇ ಸರಸಕ್ಕೆ ಎಂದು ಸ್ನೇಹಿತರನ್ನು ಕರೆಯುವುದಿಲ್ಲ. ಅಲ್ಲದೇ ನನ್ನನ್ನೇ ಸ್ವಲ್ಪದಿನ ಭಾವನಾಗಿ ಮಾಡಿಕೊಂಡಿದ್ದರು. ನನ್ನ ಜೊತೆ ಕೊಟ್ಟು ತೆಗೆದುಕೊಳ್ಳುವ ವಿಷಯ ಕೂಡ ನಡೆದಿತ್ತು. ಲೇ ಹೆಂಡ್ತಿ ಬಾರೇ ಎಂದು ಮಾತನಾಡಿದ್ದು, ಇದನ್ನು ಜಗತ್ತು ಮಾತನಾಡಿದೆ, ಕರ್ನಾಟಕವೂ ಮಾತನಾಡಿದೆ, ನಾನು ಮಾತನಾಡಿದ್ದೇನೆ.

ಒಂದು ಹೆಣ್ಣನ್ನು ಒಂದು ಶೋ ಗೋಸ್ಕರ ಈ ಮನುಷ್ಯ ಹೇಗೆ ಹೆಂಡತಿಯನ್ನಾಗಿ ಮಾಡಿಕೊಳ್ಳುತ್ತಾನೆ..?, ಅವರರವರ ಇಷ್ಟ ಇರಬಹುದು, ಆದರೆ ನಾವು ಅದರ ಪಾಲುದಾರರಲ್ಲ. ಆದರೆ ನಾನು ಸದಸ್ಯ ಎಂದ ಮೇಲೆ ನಾನು ನನ್ನ ಅಭಿಪ್ರಾಯವನ್ನು ಒಳಗಡೆಯು ಹೇಳಿದ್ದೇನೆ. ಇದು ಕೃತಕವಾಗಿ ಕಾಣಿಸುತ್ತಿದೆ ಅಂತ ಅದನ್ನೇ ಹೊರಗಡೆಯು ಹೇಳಿದ್ದೇನೆ.

ಇದೇ ಮಂಜು ಪಾವಗಡರವರಿಗೆ ನೀನು ಹಳ್ಳಿ ಹಕ್ಕಿ, ಹಳ್ಳಿ ಪ್ರತಿಭೆ ತೆನಾಲಿ ರಾಮ ಆಗಬೇಕು. ಇದನ್ನು ಮಾಡಬೇಡ ಎಂದು ಹೇಳಿದ್ದೇನೆ. ಅಲ್ಲದೇ ನಿನ್ನೆಯಿಂದ ನನಗೆ ನೀನು ಹಾಗೇ ಹೋಗಿ ಬಿಡು ಎಂದು ಪದೇ ಪದೇ ಹೇಳುತ್ತಿದ್ದಾರೆ. ಬಿಗ್‍ಬಾಸ್ ಯಾರಪ್ಪನ ಆಸ್ತಿ. ಬಿಗ್‍ಬಾಸ್‍ನನ್ನು ಯಾರು ಯಾರಿಗೂ ಬರೆದುಕೊಟ್ಟಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೇ ನನ್ನ ತಂದೆ ತಾಯಿ ನನಗೆ ಸರಸಕ್ಕೆ ಕರೆಯುವುದನ್ನು ಕಲಿಸಿಲ್ಲ. ಮಾವಿನ ಹಣ್ಣಿನ ಜೋಕ್‍ ಗಳ ತರಹ, ಪತ್ತರವಳ್ಳಿ ಎಂಬ ಪದ ಇದೆ. ಪತ್ತರವಳ್ಳಿ ಎಂದರೆ ಕರ್ನಾಟಕದ ಡಿಕ್ಷನರಿಯಲ್ಲಿ ಆರು ಉಪಭಾಷೆಗಳಲ್ಲಿ ಬರುತ್ತದೆ.

ಅದರ ಅರ್ಥ ಬೇಲಿ ಸಂದಿಯಲ್ಲಿ ನಡೆಯುವ ಕಾಮ. ಅದು ನಾನು ಹುಟ್ಟಾಕಿರುವುದಲ್ಲ, ಅವರು ಮನೆಯಲ್ಲಿ ಕರೆಯುತ್ತಿರುವ ಪದ.  ಹೊರಗಡೆ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಇಲ್ಲೂ ಹಾಗೆಯೇ ಇರಬೇಕಾಗಿತ್ತು, ಈಗ ಸರಿಪಡಿಸಿಕೊಳ್ಳುತ್ತಿದ್ದಾರೆ ಅದನ್ನು ಮೆಚ್ಚುತ್ತೇನೆ.

ಒಂದು ಹಳ್ಳಿಯ ಹುಡುಗ ಹೇಗೆ ಹೀಗೆ ನಡೆದುಕೊಳ್ಳಲು ಸಾಧ್ಯ. ಯಾರ ಕಥೆಗಳನ್ನು ಕೇಳುವುದಿಲ್ಲ, ಯಾರ ಪ್ರತಿಭೆಗಳನ್ನು ಕೇಳುವುದಿಲ್ಲ, ಯಾರ ಮಾತನ್ನು ಕೇಳುವುದಿಲ್ಲ. ತನ್ನದೇ ತೃತೀಯ ದರ್ಜೆಗಳ ಜೋಕ್‍ ಗಳನ್ನು ನಾವು ಕೇಳಬೇಕು ಎಂದು ಹರಿಹಾಯ್ದಿದ್ದಾರೆ.

ನನಗೆ ಈ ಮನೆಯಲ್ಲಿ ಮುದ್ದಾದ ಪ್ರೀತಿಯ ಜೋಡಿ ಕಂಡಿದೆ. ಒಂದು ಮುದ್ದಾದ ಸ್ನೇಹದ ಜೋಡಿ ಕಂಡಿದೆ, ಒಂದಷ್ಟು ವಿಶ್ವಾಸಗಳು ಕಂಡಿದೆ, ತಂಗಿ ಕಂಡಿದೆ. ನಾನು ಅದನ್ನು ಗೌರವಿಸುತ್ತೇನೆ. ಆದರೆ ಆಟದ ಕಾರಣಕ್ಕೆ ನನ್ನ ಮಾನವೀಯತೆಯನ್ನು ನನ್ನ ಓದನ್ನು ನನ್ನ ಜ್ಞಾನವನ್ನು ಕಳೆದುಕೊಳ್ಳಲು ತಯಾರಿಲ್ಲ. ಅವರ ತಂದೆ, ತಾಯಿ ಹೇಳಿ ಕಳುಹಿಸಿದ್ದಾರೆ ಅಲ್ವಾ ಸರ್ ನಾನು ಎಷ್ಟು ಸಂಗಡ ಈ ಮನೆಯಲ್ಲಿ ಇರುತ್ತೇನೋ ಅಷ್ಟು ಹೊತ್ತು ನನ್ನ ಸಂಗಡ ಮಾಡಬಾರದು ಎಂದು ಹೇಳಿಕೊಂಡಿದ್ದಾರೆ.

ಅಲ್ಲದೇ ಗೌರವವಾರ್ಥವಾಗಿ ಹೇಳುತ್ತಿದ್ದೇನೆ ಬಿಗ್‍ಬಾಸ್ ಮನೆ ಯಾರಿಗೂ ಸೇರಿದ್ದಲ್ಲ. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್‍ ಈ ಮನೆಯ ಸದಸ್ಯರು, ಈ ಮನೆಯಲ್ಲಿ ಯಾವುದೇ ಕೃತಕತೆ ನಡೆದರೂ ನನ್ನ ಯುದ್ಧ ಆರಂಭ. ಅದು ಒಂದು ಕ್ಷಣ ಇದ್ದರೂ ಸರಿ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿ ಮಂಜಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Tags: bbk8biggbosss kannada 8KICCHA SUDEEP
ShareTweetSendShare
Join us on:

Related Posts

ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ

ರಾಜ್ಯ ರಾಜಕಾರಣದ ಭೀಷ್ಮ, ಶಿಕ್ಷಣ ಪ್ರೇಮಿ ಶಾಮನೂರು ಶಿವಶಂಕರಪ್ಪ ಅಸ್ತಂಗತ; ದಾವಣಗೆರೆಯ ದೈತ್ಯ ಶಕ್ತಿ ಇನ್ನಿಲ್ಲ

by Shwetha
December 14, 2025
0

ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅಜಾತಶತ್ರು ಎಂದೇ ಕೀರ್ತಿ ಗಳಿಸಿದ್ದ, ರಾಜ್ಯದ ಹಿರಿಯ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಬಲ ನಾಯಕ ಶಾಮನೂರು ಶಿವಶಂಕರಪ್ಪ ಅವರು ಇಂದು...

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

ICC ಮ್ಯಾಚ್ ಆಡ್ತಿವಿ.. ಬಟ್ ನೋ ಹ್ಯಾಂಡ್‍ಶೇಕ್..!

by admin
December 14, 2025
0

2025 ಭಾರತ - ಪಾಕ್ ನಡುವಿನ ಪುರುಷರ t-20 ಏಷ್ಯಾಕಪ್ ಕ್ರಿಕೆಟ್ ಟೂರ್ನಿ - ನೋ ಹ್ಯಾಂಡ್ ಶೇಕ್..! 2025 ಭಾರತ - ಪಾಕ್ ನಡುವಿನ ಮಹಿಳಾ...

ಹನುಮಂತನಿಗೆ ಇಷ್ಟವಾದ 3 ರಾಶಿಗಳು ಯಾವುವು ಗೊತ್ತಾ? ಪ್ರತಿದಿನ ಈ ರೀತಿ ಹನುಮಾನ್ ನಮಸ್ಕರಿಸಿದರೆ ನೀವು ಯಾವಾಗಲೂ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.

ಹನುಮಂತನಿಗೆ ಇಷ್ಟವಾದ 3 ರಾಶಿಗಳು ಯಾವುವು ಗೊತ್ತಾ? ಪ್ರತಿದಿನ ಈ ರೀತಿ ಹನುಮಾನ್ ನಮಸ್ಕರಿಸಿದರೆ ನೀವು ಯಾವಾಗಲೂ ಯಾವುದೇ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ.

by admin
December 14, 2025
0

ಹನುಮಂತನ ನೆಚ್ಚಿನ 3 ರಾಶಿಚಕ್ರ ಚಿಹ್ನೆಗಳು ಹನುಮಂತ ಎಂದಾಗ ರಾಮಾಯಣ ನೆನಪಾಗುತ್ತದೆ. ಹನುಮಂತನು ರಾಮನಿಗೆ ಯುದ್ಧವನ್ನು ಗೆಲ್ಲಲು ಸಹಾಯ ಮಾಡಿದನು. ಆ ಈಶ್ವರನ ನ ಅಂಶವೇ ಈ...

ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!

ಯಾವ ಇಕ್ಬಾಲ್ ಹುಸೇನ್? ಅವನಿಗೇನು ಗೊತ್ತು? ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಆಪ್ತ ಶಾಸಕನ ವಿರುದ್ಧವೇ ಗುಡುಗಿದ ಡಿಕೆಶಿ!

by Shwetha
December 14, 2025
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ (Power Sharing) ವಿಚಾರವಾಗಿ ಎದ್ದಿರುವ ಗೊಂದಲದ ಅಲೆಗಳು ಇನ್ನೂ ತಣ್ಣಗಾಗಿಲ್ಲ. ಹೈಕಮಾಂಡ್ ಎಷ್ಟೇ ಖಡಕ್...

ಸ್ವಕ್ಷೇತ್ರಕ್ಕಷ್ಟೇ ಸೀಮಿತವಾದ ಸಚಿವರನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಸಾಧ್ಯವೇ? ವಿಧಾನಸಭೆಯಲ್ಲಿ ಸ್ವಪಕ್ಷದ ವಿರುದ್ಧವೇ ಗುಡುಗಿದ ಶಾಸಕ ಬಿ.ಆರ್.ಪಾಟೀಲ್

ಸ್ವಕ್ಷೇತ್ರಕ್ಕಷ್ಟೇ ಸೀಮಿತವಾದ ಸಚಿವರನ್ನಿಟ್ಟುಕೊಂಡು ರಾಜ್ಯದ ಅಭಿವೃದ್ಧಿ ಸಾಧ್ಯವೇ? ವಿಧಾನಸಭೆಯಲ್ಲಿ ಸ್ವಪಕ್ಷದ ವಿರುದ್ಧವೇ ಗುಡುಗಿದ ಶಾಸಕ ಬಿ.ಆರ್.ಪಾಟೀಲ್

by Shwetha
December 14, 2025
0

ಬೆಳಗಾವಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಸಚಿವರು ಕೇವಲ ರಾಜಧಾನಿ ಬೆಂಗಳೂರು ಮತ್ತು ತಮ್ಮ ಸ್ವಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಇಂತಹ ಸಂಪುಟ ಸದಸ್ಯರನ್ನು ಇಟ್ಟುಕೊಂಡು ಸಮಗ್ರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram