ಮೈಸೂರು : ಜೆ. ಪಿ. ನಡ್ಡಾಗೂ ಕರ್ನಾಟಕಕ್ಕೂ ಏನು ಸಂಬಂಧ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಡಬಲ್ ಇಂಜಿನ್ ಸರ್ಕಾರ ಇದ್ದರೂ ಪ್ರಧಾನಿ ಮೋದಿ ಏನು ಮಾಡಿದರು.. ಬರೀ ಸುಳ್ಳು ಹೇಳುತ್ತಾರೆ. ಜನರಿಗೆ ಅವರು ನೀಡಿದ್ದ ಭರವಸೆ ಈಡೇರಿಸಿಲ್ಲ.
ಮೋದಿಯಾದರೂ ಬರಲಿ, ನಡ್ಡಾ ಆದರೂ ಬರಲಿ. ಜನ ಅವರ ಮಾತಿಗೆ ಬೆಲೆ ಕೊಡಲ್ಲ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಈಗಲೂ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್, ಗೃಹಿಣಿಗೆ 2000 ರೂ. ನೀಡುವುದಾಗಿ ಹೇಳಿದ್ದೇವೆ.
ಅಧಿಕಾರಕ್ಕೆ ಬಂದರೆ ಈಡೇರಿಸುತ್ತೇವೆ ಎಂದಿದ್ದಾರೆ..