ದೆಹಲಿ: ಲೋಕಸಭೆ ಚುನಾವಣೆಯ ಕಾವು ರಂಗೇರಿದ್ದು, ಬಿಜೆಪಿ 72 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಈ ಪಟ್ಟಿಯಲ್ಲಿ ನಿನ್ನೆಯಷ್ಟೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹರಿಯಾಣ ರಾಜ್ಯದ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ಹೆಸರು ಕೂಡ ಇದೆ. ಅಲ್ಲದೇ, ನಿತಿನ್ ಗಡ್ಕರಿ, ಅನುರಾಗ್ ಠಾಕೂರ್, ಪಿಯೂಷ್ ಗೋಯಲ್ ಸೇರಿದಂತೆ ಹಲವು ನಾಯಕರ ಹೆಸರುಗಳಿವೆ.
ಮನೋಹರ್ ಲಾಲ್ ಖಟ್ಟರ್ ಅವರು ಕರ್ನಾಲ್ ನಿಂದ ಅಖಾಡಕ್ಕೆ ಧುಮುಕಲಿದ್ದಾರೆ. ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗ್ಪುರ ಕ್ಷೇತ್ರದಿಂದಲೇ ಸ್ಪರ್ಧಿಸಲು ಅಣಿಯಾಗಿದ್ದಾರೆ. ಪಟ್ಟಿಯಲ್ಲಿ ಅಶೋಕ್ ತನ್ವಾರ್ (ಸಿರ್ಸಾ), ಮನೋಹರ್ ಲಾಲ್ ಖಟ್ಟರ್ (ಕರ್ನಾಲ್), ಚೌಧರಿ ಧರಂಬೀರ್ ಸಿಂಗ್ (ಭಿವಾನಿ-ಮಹೇಂದ್ರಗಢ), ರಾವ್ ಇಂದರ್ಜಿತ್ ಸಿಂಗ್ ಯಾದವ್ (ಗುರ್ಗಾಂವ್), ಅನುರಾಗ್ ಸಿಂಗ್ ಠಾಕೂರ್ (ಹಮೀರ್ಪುರ), ಬಿವೈ ರಾಘವೇಂದ್ರ (ಶಿವಮೊಗ್ಗ), ಬಸವರಾಜ ಬೊಮ್ಮಾಯಿ (ಹಾವೇರಿ) ಶೋಭಾ ಕರಂದ್ಲಾಜೆ (ಬೆಂಗಳೂರು ಉತ್ತರ), ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ), ಭಾರತಿ ಪ್ರವೀಣ್ ಪವಾರ್ (ದಿಂಡೋರಿ), ಪಂಕಜಾ ಮುಂಡೆ (ಬೀಡ್), ಡಿ ಕೆ ಅರುಣಾ (ಮಹಬೂಬನಗರ), ತ್ರಿವೇಂದ್ರ ಸಿಂಗ್ ರಾವತ್ (ಹರದ್ವಾರ), ಅನಿಲ್ ಬಲುನಿ (ಗರ್ವಾಲ್ ) ನಿತಿನ್ ಗಡ್ಕರಿ (ನಾಗ್ಪುರ), ಪಿಯೂಷ್ ಗೋಯಲ್ (ಮುಂಬೈ ಉತ್ತರ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
2ನೇ ಪಟ್ಟಿಯಲ್ಲಿ ದೆಹಲಿಯಲ್ಲಿ 2, ಗುಜರಾತ್ ನಲ್ಲಿ 7, ಹರಿಯಾಣದಲ್ಲಿ 6, ಹಿಮಾಚಲ ಪ್ರದೇಶದಲ್ಲಿ 2, ಕರ್ನಾಟಕದಲ್ಲಿ 20, ಮಧ್ಯಪ್ರದೇಶದ 5, ಮಹಾರಾಷ್ಟ್ರದಲ್ಲಿ 20, ತೆಲಂಗಾಣದಲ್ಲಿ 6, 1 ಸ್ಥಾನ, ತ್ರಿಪುರಾ ಮತ್ತು ಉತ್ತರಾಖಂಡದಲ್ಲಿ 2 ಸ್ಥಾನಗಳು, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುಗೆ ಅಭ್ಯರ್ಥಿಗಳನ್ನು ಸೂಚಿಸಲಾಗಿದೆ.