ಉತ್ತರಪ್ರದೇಶದಲ್ಲಿ ಬಿಜೆಪಿ ಸೋಲು ಸನ್ನಿಹಿತವಾಗಿದೆ – ಮಮತಾ ಬ್ಯಾನರ್ಜಿ
ಸಮಾಜವಾದಿ ಪಕ್ಷವನ್ನು ಬೆಂಬಲಿಸಿ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿ, ಬಿಜೆಪಿ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ
ಬಿಜೆಪಿ ಕಾರ್ಯಕರ್ತರ ತಲೆಯಲ್ಲಿ ಹಿಂಸಾಚಾರವನ್ನು ಹೊರತುಪಡಿಸಿ ಮಿದುಳಿನಲ್ಲಿ ಏನೂ ಇಲ್ಲ, “ನಾನು ನಿನ್ನೆ ವಿಮಾನ ನಿಲ್ದಾಣದಿಂದ ಬಂದು (ದಶಾಶ್ವಮೇಧ) ಘಾಟ್ಗೆ ಹೋಗುತ್ತಿದ್ದೆ, ಮಧ್ಯದಲ್ಲಿ, ಕೆಲವು ಬಿಜೆ
ಪಿ ಕಾರ್ಯಕರ್ತರು ನನ್ನ ವಾಹನವನ್ನು ನಿಲ್ಲಿಸಿ, ನನ್ನ ಕಾರಿಗೆ ಡಿಕ್ಕಿ ಹೊಡೆದರು, ನನ್ನನ್ನು ತಳ್ಳಿದರು ಮತ್ತು ಹಿಂತಿರುಗಲು ಹೇಳಿದರು. ” ಎಂದು ಪಶ್ಚಿಮ ಬಂಗಳಾದ ಮುಖ್ಯಮಂತ್ರಿ ಹೇಳಿದ್ದಾರೆ.
“ಅವರು (ಅಧಿಕಾರದಿಂದ) ಹೊರಗೆ ಹೋಗುತ್ತಿದ್ದಾರೆ. ಅವರ ಸೋಲು ಸನ್ನಿಹಿತವಾಗಿದೆ” ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಹೇಳಿದರು.
“ನಾನು ಹೇಡಿಯಲ್ಲ, ಹೋರಾಟಗಾರ, ನಾನು ಸುದೀರ್ಘ ಹೋರಾಟ ಮಾಡಿದ್ದೇನೆ, ಹಿಂದೆ ಸಿಪಿಎಂ ನನ್ನ ಮೇಲೆ ಹಲ್ಲೆ ನಡೆಸಿದೆ, ಈ ಹಿಂದೆ ನನ್ನ ಮೇಲೆ ಲಾಠಿ ಮತ್ತು ಗುಂಡಿನ ದಾಳಿ ನಡೆಸಲಾಗಿದೆ, ಆದರೆ ನಾನು ಎಂದಿಗೂ ತಲೆಬಾಗಲಿಲ್ಲ. ,” ಎಂದು ರಾಜಕೀಯ ಪ್ರಚಾರಾರ್ಥವಾಗಿ ಉತ್ತರ ಪ್ರದೇಶದಲ್ಲಿ ಸಂಚರಿಸುತ್ತಿರು ಮಮತಾ ಬ್ಯಾನರ್ಜಿ ಹೇಳಿದರು.